Breaking News

ಜೊತೆಗಿದ್ದವರು ಲಾಭಿ ಮಾಡುವದರಲ್ಲಿ ತಪ್ಪಿಲ್ಲ- ಪ್ರಭಾಕರ ಕೋರೆ

ಬೆಳಗಾವಿ- ಬಿಜಪಿ ಪಕ್ಷ ಬಹಳ ದೊಡ್ಡ ಪಕ್ಷ,ರಾಜ್ಯಸಭಾ ಟಿಕೆಟ್ ಬಗಳ ಜನ ಕೇಳುತ್ತಿದ್ದಾರೆ,ಜೊತೆಗಿದ್ದವರೂ ಟಿಕೆಟ್ ಕೇಳುವದರಲ್ಲಿ ತಪ್ಪಿಲ್ಲ.ಈ ವಿಷಯದಲ್ಲಿ ಪಕ್ಷದ ನಿರ್ಧಾರವೇ ಅಂತಿಮ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ರಾಜ್ಯ ಸಭಾ ಚುನಾಚಣೆಗೆ ನೋಟಿಫಿಕೇಶನ್ ಜಾರಿಯಾಗಿಲ್ಲ,ಬಿಜೆಪಿ ಪಕ್ಷದಲ್ಲಿ ಲಾಭಿ ನಡೆಯುವುದಿಲ್ಲ, ಪಕ್ಷದ,ನಾಯಕರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದು ಕೋರೆ ತಿಳಿಸಿದರು.

ರಾಜ್ಯಸಭಾ ಟಿಕೆಟ್ ರಮೇಶ್ ಕತ್ತಿ ಅವರು ಕೇಳುತ್ತಿದ್ದಾರೆ,ಈ ಹಿಂದೆ ನಾನು ಚಿಕ್ಕೋಡಿ ಲೋಕಸಭಾ ಟಿಕೆಟ್ ಕೇಳಿದ್ದೆ ದೊಡ್ಡ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿರುವದು ಸಹಜ ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ.ಎಂದರು

ಕೆಲವು ಜನ ಉಮೇಶ್ ಕತ್ತಿ ಅವರ ಮನೆಗೆ ಊಟಕ್ಕೆ ಹೋಗಿದ್ದರು,ಅದು ಭಿನ್ನಮತ ಅಲ್ಲ,ಮಖ್ಯಮಂತ್ರಿ ಯಡಿಯೂರಪ್ಪ ಅವಧಿ ಫೂರ್ಣಗೊಳಿಸುತ್ತಾರೆ.ಬಿಜೆಪಿಯಲ್ಲಿ ಯಾವುದೇ ಗೊಂದಲವೂ ಇಲ್ಲ.ಗದ್ದಲವೂ ಇಲ್ಲ ಎಂದು ಪ್ರಭಾಕರ ಕೋರೆ ಹೇಳಿದರು.

Check Also

ಇಂದು ಶ್ರೀ ರೇಣುಕಾ ಯಲ್ಲಮ್ಮದೇವಿ ದರ್ಶನ,ನಾಳೆ ಬೆಳಗಾವಿ ದರ್ಶನ….!!!

ಬೆಳಗಾವಿ – ಮಾಜಿ ಸಚಿವ ಹಾಲಿ ವಿಧಾನಪರಿಷತ್ತ್ ಸದಸ್ಯ ಸಿಟಿ ರವಿ ಇಂದು ಸಂಜೆ ಸವದತ್ತಿ ಯಲ್ಲಮ್ಮದೇವಿಯ ದರ್ಶನ ಪಡೆದು …

Leave a Reply

Your email address will not be published. Required fields are marked *