Breaking News

ಬೆಳಗಾವಿ ನಗರದಲ್ಲಿ ಪರಿಸ್ಥಿತಿ ಶಾಂತ ಇಬ್ಬರು ನಗರ ಸೇವಕರು ಸೇರಿದಂತೆ 26 ಜನರ ಬಂಧನ

ಬೆಳಗಾವಿ- ಬೆಳಗಾವಿ ನಗರದ ಶೆಟ್ಟಿ ಗಲ್ಲಿ ಕಾರ್ನರದಲ್ಲಿ ಹಾಕಲಾಗಿದ್ದ ಧ್ವಜಕ್ಕೆ ಸಂಬಂಧಿಸಿದ ಮಂಗಳವಾರ ಮದ್ಯರಾತ್ರಿ ನಡೆದ ಗಲಬೆಗೆ ಸಂಬಂಧ5ಸಿದಂತೆ ಇಬ್ಬರು ನಗರ ಸೇವಕರರು ಸೇರಿದಂತೆ ಒಟ್ಟು 26 ಜನರನ್ನು ಬಂಧಿಸಲಾಗಿದ್ದು ನಗರದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದೆ

ಮಂಗಳವಾರ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷನೆ ನಡೆದು ಜಾಲಗಾರ ಗಲ್ಲಿ ಭಡಕಲ್ಲ ಗಲ್ಲಿ ಖಂಜರ್ ಗಲ್ಲಿ ದರ್ಬಾರ ಗಲ್ಲಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದು ಹಲವಾರು ವಾಹನಗಳು ಜಖಂಗೊಂಡಿದ್ದವು ಪೋಲಿಸರ4 ತಕ್ಷಣ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಂತ್ರಿಸಿದ್ದರು

ಘಟನೆಗೆ ಸಮಂಧಿಸಿದಂತೆ ನಗರ ಸೇವಕ ಮುಜಮ್ಮಿಲ್ ಡೋನಿ,ಮತಿನ ಅಲಿ ಶೇಖ, ಸೇರಿದಂತೆ 26 ಜನರನ್ನು ಬಂಧಿಸಲಾಗಿದೆ ನಗರದಲ್ಲಿ ಪರಿಸ್ಥಿತಿ ಶಾಂತವಾಗಹಿದ್ದು ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತಿಯನ್ನು ನಿಯೋಜಿಸಲಾಗಿದೆ ನಗರ ಪೋಲಿಸ್ ಆಯುಕ್ತ ಕೃಷ್ಣಭಟ್ ಅವರು ನಗರದಲ್ಲಿ ಸಂಚರಿಸಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.