Breaking News
Home / Breaking News / ಬಸ್ಸಿನಲ್ಲಿ ಮಿಸ್ ಆಗಿದ್ದ,ಲಕ್ಷ ರೂ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್.,..

ಬಸ್ಸಿನಲ್ಲಿ ಮಿಸ್ ಆಗಿದ್ದ,ಲಕ್ಷ ರೂ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್.,..

 

ಬೆಳಗಾವಿ- ಬಸ್ಸಿನಲ್ಲಿ ಪ್ರಯಾಣಿಕನೊಬ್ಬ, ಮಿಸ್ ಮಾಡಿಕೊಂಡಿದ್ದ ಲಕ್ಷ ರೂ ಗಳನ್ನು ಪ್ರಯಾಣಿಕನಿಗೆ ಮರಳಿಸಿ ಬಸ್ ಕಂಡಕ್ಟರ್,ಮತ್ತು ಚಾಲಕ ಮಾನವೀಯತೆ ಮೆರೆದ ಘಟನೆ ಬೆಳಗಾವಿ ಡಿಪೋದಲ್ಲಿ ನಡೆದಿದೆ.

ಬೆಂಗಳೂರಿನಿಂದ ಬೆಳಗಾವಿಗೆ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸುತ್ತದ್ದ ಚಿತ್ರದುರ್ಗ ಮೂಲದ ಪ್ರಯಾಣಿಕ,ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವಾಗ ಬಂಕಾಪೂರ ಟೋಲ್ ನಲ್ಲಿ ,ಟಾಯಲೆಟ್ ಗೆ ತೆರಳಿ ಬಸ್ ಮಿಸ್ ಮಾಡಿಕೊಂಡಿದ್ದ

ಆತನ ಬ್ಯಾಗು ಬಸ್ಸಿನಲ್ಲೇ ಉಳಿದುಕೊಂಡಿತ್ತು,ನಂತರ ಬೆಳಗಾವಿಗೆ ಆಗಮಿಸಿದ ಈ ಪ್ರಯಾಣಿಕ ವಿಚಾರಿಸಿದ ಬಳಿಕ ಬಸ್ಸಿನ ಕಂಡೆಕ್ಟರ್ ಪ್ರಯಾಣಿಕನ ಟಿಕೆಟ್,ಮತ್ತು ಬ್ಯಾಗನಲ್ಲಿದ್ದ ಇತರ ದಾಖಲೆಗಳನ್ನು ಆಧರಿಸಿ ಪ್ರಯಾಣಿಕನಿಗೆ ಬ್ಯಾಗನಲ್ಕಿದ್ದ ಒಂದು ಲಕ್ಷ ರೂ ಮತ್ತು ಇತರ ದಾಖಲೆಗಳನ್ನು ,ಬ್ಯಾಗ ಸಮೇತ ಬೆಳಗಾವಿಯ ಸಾರಿಗೆ ಅಧಿಕಾರಿಗಳ ಸಮ್ಮುಖದ್ಲಿ ಮರಳಿಸಿದ್ದಾರೆ .

ಕಂಡೆಕ್ಟರ್ ರಾಜೇಗೌಡ,ಚಾಲಜ ಕಮ್ ಕಂಡಕ್ಟರ್ ಶಿವಾನಂದ ಜೋಡಟ್ಟಿ,ಅವರು ಪ್ರಯಾಣಿಕನಿಗೆ ಲಜ್ಷ ರೂ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *