ಬಿಜೆಪಿಗೆ ನಮ್ಮ ಮತ ಇಲ್ಲ- ಬೆಳಗಾವಿಯಲ್ಲಿ ಬಾಬಾಗೌಡ ಪಾಟೀಲ ಘೋಷಣೆ

ಬೆಳಗಾವಿ-ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆ ಈಉಪಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಮತ ಇಲ್ಲ.ಎಂದು ಬೆಳಗಾವಿಯಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿಗೆ ನಮ್ಮ ಮತ ಇಲ್ಲಾ ಅನ್ನೋದು,ರೈತರ ಆಂದೋಲನದ ಭಾಗ ಇದು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ಕಳುಹಿಸುತ್ತೇವೆ.ಎಂದು ಮಾಜಿ ಕೇಂದ್ರ ಮಂತ್ರಿ,ರೈತನಾಯಕ,ಕೃಷಿ ತಜ್ಞ,ಬಾಬಾಗೌಡ ಪಾಟೀಲ ಗುಡುಗಿದ್ದಾರೆ.

ಇಂದು ಡಿಕೆಶಿ ನಮ್ಮ ಮನೆ ಬಂದಿದ್ದರು.ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.ನಾವು ಈಗಾಗಲೇ ನರೇಂದ್ರ ಮೋದಿ ಅಧಿಕಾರದಿಂದ ಕೆಳೆಗೆ ಇಳಿಸೋ ತೀರ್ಮಾನ ಆಗಿದೆ.ಕಾಂಗ್ರೆಸ್ ಪ್ರಣಾಳಿಕೆಯನ್ನು ರೈತರನ್ನು ಕೇಳಿ ಅನೇಕ ವಿಷಯ ಸೇರಿಸಬೇಕು ಎಂದು ಹೇಳಿದ್ದೇ‌ನೆ.ಡಿಕೆಶಿ ಈ ಬಗ್ಗೆ ಹೈಕಮಾಂಡ್ ಜತೆಗೆ ಮಾತನಾಡುವ ಭರವಸೆ ‌ಕೊಟ್ಟಿದ್ದಾರೆ.ನಾನು ಎಲ್ಲಾ ಸಂಘಟನೆಗಳ ಜತೆಗೆ ಮಾತನಾಡುತ್ತೆನೆ ಎಂದಿದ್ದೇನೆ.ನಾವು ಬಿಜೆಪಿಗೆ ಮತ ನೀಡಲ್ಲ ಎಂದು ತೀರ್ಮಾನ ಮಾಡಿದ್ದೇವೆ.ಸಹಜವಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಅರ್ಥವಾಗುತ್ತದೆ.ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಸೋಲಿಸಲು ಕೆಲಸ ಮಾಡುವದಾಗಿ ಬಾಬಾಗೌಡ ಪಾಟೀಲ ಹೇಳಿದ್ದಾರೆ.

ರೈತರ ಉಳವಿಗಾಗಿ ಬಿಜೆಪಿ ಸೋಲಿಸಲು ಕೆಲಸ ಮಾಡುತ್ತೇವೆ,ಕಾಂಗ್ರೆಸ್ ನವರು ಪಾಕಿಸ್ತಾನ, ಚೈನಾದಿಂದ ಬಂದಿಲ್ಲ.ಪಕ್ಷಕ್ಕಿಂತ ಕೃಷಿ ಉಳಿಸುವುದು ಮುಖ್ಯವಾಗಿದೆ. ಎಂದರು ಬಾಬಾಗೌಡ ಪಾಟೀಲ

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *