ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ, ಬೆಳಗುಂದಿ ಗ್ರಾಮಗಳು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಕ್ಯಾಂಪ ಕಸಾಯಿ ಗಲ್ಲಿ ಹಾಗೂ ಕುಡಚಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ-19 (ಕೊರೋನಾ) ಪ್ರಕರಣಗಳು ಪತ್ತೆಯಾಗಿದ್ದು, ಸದರಿ ಪ್ರದೇಶಗಳನ್ನು ನಿರ್ಭಂದಿತ ಪ್ರದೇಶಗಳೆಂದು ಈಗಾಗಲೇ ಘೋಷಿಸಲಾಗಿದೆ. ಸದರಿ ಸ್ಥಳಗಳಲ್ಲಿ ವಾಸಿಸುತ್ತಿರುವ ಮತ್ತು ಪ್ರಕರಣಗಳೊಂದಿಗೆ ದೈನಂದಿನ ಚಟುವಟಿಕೆಗಳಲ್ಲಿ ನೇರವಾಗಿ ಸಂಪರ್ಕ ಹೊಂದಿರುವ ಸಾರ್ವಜನಿಕರು ಕೋವಿಡ-19 (ಕೊರೋನಾ) ಲಕ್ಷಣಗಳಾದ ಜ್ವರ, ಕೆಮ್ಮು, ಶೀತ ಹಾಗೂ ಉಸಿರಾಟದ ತೊಂದರೆಗಳು ಕಂಡು ಬಂದಲ್ಲಿ …
Read More »ಅಪಪ್ರಚಾರಕ್ಕೆ ಅವಕಾಶ ಕೊಡದೇ, ಕೊರೊನಾ ಬಿಕ್ಕಟ್ಟನ್ನು ಒಗ್ಗಟ್ಟಿನಿಂದ ಎದುರಿಸೋಣ : ರಾಜು ಸೇಠ
ಬೆಳಗಾವಿ-ಕೊರೊನಾ ಇಡೀ ಜಗತ್ತನ್ನೇ ಸಾವು ನೋವುಗಳಿಂದ ತಲ್ಲಣಿಸಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಅಪಪ್ರಾಚರಕ್ಕೆ ಅವಕಾಶ ನೀಡದೇ ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಭೇದ ಮರೆತು ಒಗ್ಗಟ್ಟಿನಿಂದ ಹೋರಾಟ ನಡೆಸಿ ಕೋವಿಡ್ ನಿವಾರಣೆಗೆ ಶ್ರಮಿಸೋಣ ಎಂದು ಅಂಜುಮನ್ –ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಆಸೀಫ್ (ರಾಜು) ಸೇಠ ಅವರು ಕರೆಕೊಟ್ಟಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊರೊನಾದಿಂದ ದೇಶದ ಜನರು ತೀವ್ರ ಸಂಕಷ್ಟುಕ್ಕೆ ಒಳಗಾಗಿದ್ದಾರೆ. ಇದರಿಂದ ಮುಕ್ತಿಸಾಧಿಸಲು …
Read More »ಊರಿಗೆ ಉಪಕಾರಿಯಾದ,ಅಬಕಾರಿ ಇಲಾಖೆ 600 ಲೀ ಕಳ್ಳಬಟ್ಟಿ ಸರಾಯಿ ವಶ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸರಾಯಿ ದಂಧೆಗೆ ಬ್ರೆಕ್ ಹಾಕಲು ಜಿಲ್ಲೆಯ ವಿವಿದೆಡೆ ದಾಳಿ ಮಾಡಿ 21 ಜನ ಆರೋಪಿಗಳನ್ನು ಬಂಧಿಸಿದೆ. ಜಿಲ್ಲೆಯಲ್ಲಿ ಕಳ್ಳಬಟ್ಟಿ ಸರಾಯಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ,ಎನ್ನುವ ಆರೋಪ ಕೇಳಿ ಬರುತ್ತಿದ್ದಂತೆಯೇ ಕುಂಬಕರ್ಣ ನಿದ್ದೆಯಿಂದ ಎಚ್ಚೆದ್ದ ಅಬಕಾರಿ ಇಲಾಖೆ,ಜಿಲ್ಲೆಯ ವಿವಿದೆಡೆ ದಾಳಿ ಮಾಡಿ 37 ಪ್ರಕರಣ ದಾಖಲಿಸಿ,21 ಜನ ಆರೋಪಿಗಳನ್ನು ಬಂಧಿಸಿ ಸುಮಾರು 600 ಲೀಟರ್ ಸರಾಯಿ ವಶಪಡಿಸಿ 21 ವಾಹನಗಳನ್ನು ಜಪ್ತು ಮಾಡಿದೆ. ಮಹಾಮಾರಿ ಕೊರೋನಾ …
Read More »33 ಕೊರೋನಾ ಶಂಕಿತರ ರಿಪೋರ್ಟ್ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತ.
ಬೆಳಗಾವಿ- ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯ ಒಟ್ಟು 1044 ಜನರ ಮೇಲೆ ನಿಗಾ ಇಟ್ಟಿದ್ದು 33 ಜನ ಕೊರೋನಾ ಶಂಕಿತರ ವರದಿ ನಿರೀಕ್ಷೆಯಲ್ಲಿದೆ ಜಿಲ್ಲೆಯಲ್ಲಿ 7 ಜನರಿಗೆ ಕೊರೊನಾ ಸೋಂಕಿತರಿದ್ದು ಹೊಸದಾಗಿ 26 ಶಂಕಿತರ ಮಾದರಿ ರವಾನೆ ಮಾಡಲಾಗಿದೆ ಈವರೆಗೆ ಒಟ್ಟು 33 ಜನರ ವರದಿ ನಿರೀಕ್ಷೆಯಲ್ಲಿ ಇರುವ ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಸೊಂಕು ಹರಡದಂತೆ ಹಲವಾರು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ 7 ಜನರಿಗೆ ಸೊಂಕು ತಗಲಿರುವ ರಿಪೋರ್ಟ್ …
Read More »ಬೆಳಗಾವಿ ಪತ್ರಕರ್ತರಿಗೆ ಮಾಸ್ಕ ಹಂಚಿದ ಡಾ,ಸೋನಾಲಿ
ಬೆಳಗಾವಿ ಕೋರೊನಾ ವೈರಸ್ನಿಂದಾಗಿ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಅಂತಹ ಸಂದರ್ಭದಲ್ಲಿ ದೇಶ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವ ಹಲವು ಕ್ಷೇತ್ರದಲ್ಲಿನ ಸಿಬ್ಬಂದಿಗಳು ತಮ್ಮ ಜೀವವನ್ನು ಲೆಕ್ಕಿಸದೇ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ನಿಯತಿ ಪೌಂಡೇಶನ ಸಂಸ್ಥಾಪಕಿ ಡಾ. ಸೋನಾಲಿ ಸರ್ನೊಬತ್ ಹೇಳಿದರು. ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಭವನದಲ್ಲಿ ಮಂಗಳವಾರ ನಿಯತಿ ಪೌಂಡೇಶನ ಹಾಗೂ ಬೆಳಗಾವಿ ಪತ್ರಕರ್ತರ ಸಂಘ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರಿಗೆ ಮಾಸ್ಕ ವಿತರಿಸಿ ಮಾತನಾಡಿದರು. ಯಾವುದೋ ಒಂದು …
Read More »ನಿರಾಶ್ರಿತರ ನೆರವಿಗೆ ದಾನಿಗಳಿಂದ ಅಗತ್ಯ ಸಾಮಗ್ರಿ ಸಂಗ್ರಹ
ಅಂತ್ಯಕ್ರಿಯೆ ನಡೆಯುವಾಗ,ಶವ ಪೆಟ್ಟಿಗೆಯ ಮೇಲೆ ಕುಳಿತ ಟೈಸನ್
ಬೆಂಗಳೂರು- ನಿನ್ನೆ ನಿಧನರಾದ ಹಾಸ್ಯ ನಟ ಬುಲೇಟ್ ಪ್ರಕಾಶ ಅವರ ಅಂತ್ಯಕ್ರಿಯೆ ಹೆಬ್ಬಾಳದಲ್ಲಿ ನಡೆಯುವಾಗ ಕಣ್ಣೀರು ಕಪಾಳಕ್ಕೆ ಸುರಿಸುವ, ಘಟನೆಯೊಂದು ನಡೆಯಿತು. ಬುಲೇಟ್ ಪ್ರಕಾಶ್ ಅವರು ಅತ್ಯಂತ ಮುದ್ದಿನಿಂದ ಸಾಕಿದ ನಾಯಿ ಶವ ಪೆಟ್ಟಿಗೆಯ ಮೇಲೆ ಕುಳಿತಾಗ ಅಲ್ಲಿ ನೆರೆದಿದ್ದ ನೂರಾರು ಜನ ಕಣ್ಣೀರು ಸುರಿಸಿದರು ಶವ ಪೆಟ್ಟಿಗೆ ಮೇಲೆ ಕುಳಿತ ಟೈಸನ್ ಕೆಳಗಿಳಿಯಲಿಲ್ಲ,ಬುಲೇಟ್ ಪ್ರಕಾಶ್ ಅವರ ಪ್ರೀತಿಯ ಸಂಕೋಲೆಯಿಂದ ಟೈಸನ್ ನನ್ನು ಬಿಡಿಸಲು ಪರದಾಡಬೇಕಾಯಿತು. ಒದ್ದಾಡುತ್ತಲೇ ಟೈಸನ್ ತನ್ನ …
Read More »ಬೆಳಗಾವಿಯಲ್ಲಿ ಸೊಂಕಿತರ ಸೆಕೆಂಡ್ರಿ ಕಾಂಟ್ಯಾಕ್ಟ್ ಹೊಂದಿದವರ ಪತ್ತೆ ಕಾರ್ಯ ಶುರು
ಕೋವಿಡ್-೧೯ : ಚಿಕ್ಕೋಡಿಯಲ್ಲಿ ಜನಪ್ರತಿನಿಧಿಗಳ ಸಭೆ ———————————————————————- “ಆಶಾ” ಮೇಲೆ ಹಲ್ಲೆ ಮಾಡಿದರೆ ಪ್ರಕರಣ ದಾಖಲಿಸಲು ಸಚಿವ ಜಗದೀಶ್ ಶೆಟ್ಟರ್ ಕಟ್ಟುನಿಟ್ಟಿನ ಸೂಚನೆ ಬೆಳಗಾವಿ, ಏ.೭(ಕರ್ನಾಟಕ ವಾರ್ತೆ): ಕುಡಚಿ ಸೇರಿದಂತೆ ಸೋಂಕು ದೃಢಪಟ್ಟಿರುವ ಪ್ರದೇಶನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ …
Read More »ಬೆಳಗಾವಿಗೆ ಬಂದಿದ್ದ ಇಂಡೋನೇಶಿಯಾದ ಹತ್ತು ಜನರ ಮೇಲೆ ಎಫ್ ಐ ಆರ್ ದಾಖಲು
ಬೆಳಗಾವಿ- ಟೂರಿಸ್ಟ್ ವೀಜಾ ಪಡೆದು ಬೆಳಗಾವಿಯಲ್ಲಿ ಧರ್ಮ ಪ್ರಚಾರ ನಡೆಸಿದ ಆರೋಪದ ಮೇಲೆ ಬೆಳಗಾವಿಗೆ ಬಂದಿದ್ದ ಇಂಡೋನೇಶಿಯಾ ಜಮಾತಿನ ಹತ್ತು ಸದಸ್ಯರ ಮೇಲೆ ಪ್ರತ್ಯೇಕವಾಗಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಇಂಡೋನೇಶಿಯಾ ಮೂಲದ ಹತ್ತು ಜನ ಟೂರಿಸ್ಟ್ ವೀಜಾ ಪಡೆದು,ದೆಹಲಿಯ ಧರ್ಮ ಸಭೆಯಲ್ಲಿ ಭಾಗವಹಿಸಿ,ಬೆಳಗಾವಿಗೆ ಬಂದಿದ್ದರು ಕಾನೂನಿನ ಪ್ರಕಾರ ಅವರು ಮಿಶ್ನರಿ ವೀಸಾ ಪಡೆಯಬೇಕಾಗಿತ್ತು ಟೂರಿಸ್ಟ ವೀಸಾ ಪಡೆದು ಧರ್ಮ ಪ್ರಚಾರ ನಡೆಸಿದ ಆರೋಪದ ಮೇಲೆ ಹತ್ತೂ ಜನರ …
Read More »ಸೊಂಕಿತರ ಜೊತೆ ಮಾತಾಡಿ,ಅಡಿಯೋ ವಿಡಿಯೋ ವೈರಲ್ ಮಾಡಿದವ ಅರೆಸ್ಟ್…..
ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ವಿಡಿಯೋ, ಆಡಿಯೋ ಕ್ಲಿಪ್ ವೈರಲ್ ಮಾಡಿದ ಪ್ರಮುಖ ಆರೋಪಿಯನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ ಅಮಿರ್ ಹಮ್ಜಾ ಬೀಡಿಕರ್ ಬಂಧಿತ ಆರೋಪಿ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏಳು ಕೊರೊನಾ ಸೋಂಕಿತರ ಮೇಲೆ ನಿಗಾ ಇಡಲಾಗಿದೆ. ಮೊದಲು ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಮೂವರ ಬಗ್ಗೆ ಆಡಿಯೋ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಸಮಾಜಕ್ಕೆ ತಪ್ಪು ಸಂದೇಶ ಸಾರುವ …
Read More »