Home / LOCAL NEWS (page 416)

LOCAL NEWS

ಕಾಂಗ್ರೆಸ್ ಸುದ್ಧಿಗೋಷ್ಠಿಯಲ್ಲಿ ಖುರ್ಚಿ ಕಾಳಗ …ಉಸ್ತುವಾರಿ ಮೋಹನ್ ಗೆ ಸೇಠ ಆವಾಜ್…!!!

ಕುರ್ಚಿ ಗಾಗಿ ಕಿತ್ತಾಟ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಕುರ್ಚಿಗಾಗಿ ಕಿತ್ತಾಡಿದ ಪ್ರಸಂಗ ನಡೆಯಿತು. ಕಾಂಗ್ರೆಸ್ ನಗರ ಜಿಲ್ಲಾ ಕಮೀಟಿ ಅಧ್ಯಕ್ಷ ರಾಜು ಸೇಠ್ ಅವರಿಗೆ ಯಾವುದೇ ಆಸನ ವ್ಯವಸ್ಥೆ ಮಾಡದಿರುವುದು ಅವರ ಸಹೋದರ ಮಾಜಿ ಶಾಸಕ ಫಿರೋಜ್ ಸೇಠ್ ಅವರ ಆಕ್ರೋಶಕ್ಕೆ ಕಾರಣವಾಯಿತು. ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಿಕ್ಕಿತ್ತು.ಪಿ.ಸಿ. ಮೋಹನ ಅವರನ್ನು ಸೇಠ್ ಅವರು ಬಹಿರಂಗವಾಗಿಯೇ ತರಾಟೆಗೆ ತೆಗೆದು ಕೊಂಡರು. ಶಿಷ್ಟಾಚಾರ ಪಾಲನೆ ಮಾಡುವಂತೆ …

Read More »

ನಾಳೆ ಬೆಳಗಾವಿಗೆ ದಿನೇಶ ಗುಂಡೂರಾವ್

ಬೆಳಗಾವಿ- ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಿನೇಶ ಗುಂಡೂರಾವ್ ಅವರು ನಾಳೆ ಭಾನುವಾರ ಬೆಳಿಗ್ಗೆ ಬೆಳಗಾವಿ ನಗರಕ್ಕೆ ಭೇಟಿ ನೀಡಲಿದ್ದಾರೆ ಬೆಳಿಗ್ಗೆ ನಗರದ ಸಂಕಮ್ ಹೊಟೇಲ್ ನಲ್ಲಿ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ನಡೆಸಿ ನಂತರ ಸ್ಥಳೀಯ ಸಂಸ್ಥೆಗಳ ಪ್ರಚಾರಾರ್ಥ ಹುಕ್ಕೇರಿ ಮತ್ತು ಸಂಕೇಶ್ವರ ನಗರಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪ್ರಚಾರ ನಡೆಸಲಿದ್ದಾರೆ

Read More »

ಲಿಂಗಾಯತ ಪ್ರತ್ಯೇಕ ಧರ್ಮ ಶೀಘ್ರದಲ್ಲಿಯೇ ಪ್ರಧಾನಿ ಬಳಿ ನಿಯೋಗ

ಬೆಳಗಾವಿ: ಶ್ರಾವಣ ಮಾಸದ ಬಸವ ಪಂಚಮಿ ನಿಮಿತ್ತ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ಸರ್| ಸಿದ್ದಪ್ಪ ಕಂಬಳಿ ರಾಜ್ಯಮಟ್ಟದ ವಿದ್ಯಾರ್ಥಿ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಅಭಿನಂದನೆ ಸಮಾರಂಭ ಸೆ. 9ರಂದು ಬೆಳಗ್ಗೆ 10ಕ್ಕೆ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಹಾಗೂ ಶಾಸಕರು ಪಕ್ಷಾತೀತವಾಗಿ ಆಗಮಿಸಲಿದ್ದಾರೆ. ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕೆ …

Read More »

ಕುಕಡೊಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಕಡೊಳ್ಳಿ ಗ್ರಾಮದಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಅಂಗನವಾಡಿ ಕಟ್ಟಡ ಉದ್ಘಾಟಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲನ್ಯಾಸ ನೇರವೆರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕುಕಡೊಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು. ಗ್ರಾಮದಲ್ಲಿ 40 ಲಕ್ಷ್ಮರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕುಕಡೊಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಕಾಮಗಾರಿಗೆ ಚಾಲನೆ …

Read More »

ವಿದ್ಯುತ್ತ್ ತಂತಿ ತಗುಲಿ ರೈತನ ಸಾವು

ಬೆಳಗಾವಿ- ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ವಿದ್ಯುತ್ತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟ ಘಟನೆ ಸಮೀಪದ ಅಲಾರವಾಡ ಗ್ರಾಮದಲ್ಲಿ ನಡೆದಿದೆ ಇಂದು ಬೆಳಿಗ್ಗೆ ಸುಮಾರು 11 ಘಂಟೆಗೆ ಅಲಾರವಾಡ ಗ್ರಾಮದ ಅಪ್ಪಣ್ಣಾ ಜಿನ್ನಪ್ಪಾ ಶಂಕರಗೌಡ (55) ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ಮೇವಿನ ಪೆಂಡಿಯನ್ನು ಹೊರುವ ಸಂಧರ್ಭದಲ್ಲಿ ತಂತಿ ತಗುಲಿದ ಪರಿಣಾಮ ರೈತ ಅಸುನೀಗಿದ್ದಾನೆ ಅಲಾರವಾಡ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿವೆ ಅವುಗಳ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ …

Read More »

ಸ್ಮಾರ್ಟ್ ಸಿಟಿ ಸಭೆ ,ಅದೇ ರಾಗ ಅದೇ ಹಾಡು……ಶಾಸಕರು ಫುಲ್ ಅಪಸೇಟ್ ….!!!

ಬೆಳಗಾವಿ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಅಭಯ ಪಾಟೀಲ್, ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಭಾಗವಹಿಸಿದ್ದರು ಪಾಲಿಕೆ ಆಯುಕ್ತ ಶಶಿಧರ ಕುರೇರ್ ಸಭಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ರು ಸ್ಮಾರ್ಟ್ ಸಿಟಿಗೆ ರಾಜ್ಯ ಕೇಂದ್ರದಿಂದ 396 ಕೋಟಿ ರೂ. ಬಿಡುಗಡೆಯಾಗಿದೆ. ನಾಲ್ಕು ಜನ ಹೆಚ್ಚುವರಿ ಡೈರೆಕ್ಟರ್ ಪಾಲಿಕೆ …

Read More »

ಕೋಮು ಭಾವನೆ ಕೆರಳಿಸಿದ ಬೆಳಗಾವಿ ಸ್ಟಾರ್ ಗ್ರೂಪ್ ಅಡ್ಮೀನ್ ಅರೆಸ್ಟ್

ಬೆಳಗಾವಿ-ಗ್ರೂಪ್ ಒಂದನ್ನು ರಚಿಸಿ ಅದಕ್ಕೆ ಸ್ಟಾರ್ ಗ್ರೂಪ್ ಎಂದು ನಾಮಕರಣ ಮಾಡಿ ಗ್ರೂಪ್ ಗೆ ವಿರೋಧಿ ರಾಷ್ಟ್ರದವರನ್ನು ಗ್ರೂಪ್ ಸದಸ್ಯರನ್ನಾಗಿಸಿಕೊಂಡು ಕೋಮು ಭಾವನೆಗಳನ್ನು ಕೆರಳಿಸುವ ಪೋಸ್ಟ್ ಹಾಕಿದ್ದರೂ ಕ್ರಮ ಕೈಗೊಳ್ಳದ ಗ್ರೂಪ್ ಅಡ್ಮೀನ್ ನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ ಬೆಳಗಾವಿ ಉದ್ಯಮಬಾಗ ಮಹಾವೀರ ನಗರದ 20 ವರ್ಷದ ಅಕ್ಷಯ ರಾಜೇಂದ್ರ ಅಲಗೋಡಿಕರ ವಿರುದ್ಧ ಸೋಮೋಟೋ ಕೇಸ್ ದಾಖಲಿಸಿ ಕೊಂಡಿರುವ ಪೋಲೀಸರು ಆತನನ್ನು ಬಂಧಿಸಿದ್ದಾರೆ ನೆರೆಯ ವಿರೋಧಿ ರಾಷ್ಟ್ರದ ಇಬ್ಬರನ್ನು ಒತ್ತಾಯಪೂರ್ವಕವಾಗಿ …

Read More »

ಬೆಳಗಾವಿ ರಸ್ತೆಗಳ ಸುಧಾರಣೆಗೆ 200 ಕೋಟಿ ಕೊಡದಿದ್ದರೆ ಬೆಳಗಾವಿ ಬಂದ್ ಗೆ ಕರೆ ,ಬಿಜೆಪಿ ಎಚ್ಚರಿಕೆ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳೆಲ್ಲವೂ ಹದಗೆಟ್ಟು ಹೋಗಿದ್ದು, ಈ ರಸ್ತೆಗಳ ದುರಸ್ತಿಗೆ ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಬೆಳಗಾವಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಂಸದರ ಗೃಹ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಚಳಿಗಾಲದ ಅಧಿವೇಶನ ನಡೆಸುವುದು ಕಠಿಣವಾಗುತ್ತದೆ. ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ …

Read More »

ಬೆಳಗಾವಿಯಲ್ಲಿ ಬಕ್ರೀದ ಸಂಬ್ರಮ

ಬೆಳಗಾವಿ- ತ್ಯಾಗ ಬಲಿದಾನದ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಬೆಳಗಾವಿಯಲ್ಲಿ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು ಮಳೆಯನ್ನು ಲೆಕ್ಕಿಸದೇ ಮುಸ್ಲೀಂ ಬಾಂಧವರು ಈದಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಬೆಳಿಗ್ಗೆ 9 ಘಂಟೆಗೆ ಪ್ರಥಮ ಕಂತಿನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು 10 ಘಂಟೆಗೆ ಎರಡನೇಯ ಕಂತಿನ ಪ್ರಾರ್ಥನೆ ನಡೆಯಿತು ಹಬ್ಬದ ನಿಮಿತ್ಯ ಬೆಳಗಾವಿ ನಗರದ ವಿವಿಧ ಬಡಾವಣೆಗಳ ಮಸೀದಿಗಳಲ್ಲಿಯೂ ಕೂಡಾ ಮುಸ್ಲೀಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು ಈದಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ …

Read More »

ಉಕ್ಕಿದ ಮಹಾದಾಯಿ ಖಾನಾಪೂರ ತಾಲ್ಲೂಕಿನ 4 ಹಳ್ಳಿಗಳ ಸಂಪರ್ಕ ಕಡಿತ?

ಬೆಳಗಾವಿ- ಪಶ್ಚಿಮ ಘಟ್ಟದಲ್ಲಿ ನರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಹಾದಾಯಿ ಮತ್ತು ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು ತಾಲ್ಲೂಕಿನ 4 ಹಳ್ಳಿಗಳು ಸಂಪರ್ಕ ಕಡಿತವಾಗಿದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹದಿಮೂರು ಹಳ್ಳಿಗಳು ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನ ಬಿದಿರಿನ ಪಲ್ಲಕ್ಕಿಯಲ್ಲಿ ಹೊತ್ತು ಹೊಳಿ ದಾಟಿದ ಗವಾಳಿ ಗ್ರಾಮಸ್ಥರು ಮಹಿಳೆಯನ್ನು ಖಾನಾಪೂರ ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಗವಾಳಿ ಗ್ರಾಮ ಸಂಪರ್ಕ ಕಳೆದುಕೊಂಡ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನ …

Read More »