Breaking News

LOCAL NEWS

101 ಎಂಈಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವದು ಕಾಂಗ್ರೆಸ್ ಶಡ್ಯಂತ್ರ- ಸುರೇಶ ಅಂಗಡಿ ಆರೋಪ

ಮೋಹನ್ ಮೋರೆಯಿಂದ ಯು ಟರ್ನ…ಸುರೇಶ ಅಂಗಡಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಬೆಳಗಾವಿ- ನಾಮಪತ್ರ ವಾಪಸ್ ಪಡೆದಿರುವ ಮೋಹನ್ ಮೋರೆ ಯು ಟರ್ನ ಪಡೆದು ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರನ್ನು ಬೆಂಬಲಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಸುರೇಶ ಅಂಗಡಿ ಅವರ ಗೃಹ ಕಚೇರಿಯಲ್ಲಿ ಮೋಹನ್ ಮೋರೆ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು ಈ ಸಂಧರ್ಭದಲ್ಲಿ ಮಾತನಾಡಿದ ಸುರೇಶ ಅಂಗಡಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮಗೆ ಅಭೂತಪೂರ್ವ ಬೆಂಬಲ ವ್ಯೆಕ್ತವಾಗುತ್ತಿದ್ದು ಹಲವಾರು …

Read More »

ಮಂಡ್ಯ ಚುನಾವಣೆಯಲ್ಲಿ ಗುಡುಗಲಿದ್ದಾಳೆ ಬೆಳಗಾವಿಯ ಲೇಡಿ ಟೈಗರ್…

*ಬೆಳಗಾವಿ:-* ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದ್ದು ಬೆಳಗಾವಿಯ ರೈತ ಮಹಿಳೆಯೋಬ್ಬಳು ಸುಮಲತಾ ಅಂಬರೀಶ್ಗೆ ಸಪೋರ್ಟ್ ಮಾಡಲು ಕುಮಾರಸ್ವಾಮಿ ವಿರುದ್ದ ತೋಡೆತಟ್ಟಲು ಮಂಡ್ಯಕ್ಕೆ ತೆರಳಲು ನಿರ್ಧರಿಸಿದ್ದಾಳೆ. ಬೆಳಗಾವಿಯ ರೈತ ಮಹಿಳೆ ಜಯಶ್ರೀ ಗುರಣ್ಣವರ್ ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಕಬ್ಬಿನ ಬಾಕಿ ಬಿಲ್ ಗೆ ಸಂಬಂದಿಸಿದಂತೆ ಕುಮಾರಸ್ವಾಮಿ ವಿರುದ್ದ ಸಮರಸಾರಿದ್ದಳು ಈಗ ಸುಮಲತಾ ವಿರುದ್ದ ಕುಮಾರಸ್ವಾಮಿ ಪುತ್ರ ಸ್ಫರ್ಧೆ ಮಾಡಿರುವುದರಿಂದ ಗಂಡು ಮೆಟ್ಟಿದ ನೆಲದ ಹೆಣ್ಣು ಜಯಶ್ರೀ …

Read More »

ಬೆಳಗಾವಿಯಲ್ಲಿ ಬರೊಬ್ಬರಿ 22 ಜನರಿಂದ ದೇಹದಾನ.

ಬೆಳಗಾವಿ – ಬೆಳಗಾವಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ರಾಜ್ಯದ ಗಮನ ಸೆಳೆಯುವ ಮಹತ್ವದ ಕಾರ್ಯವೊಂದು ನಡೆದಿದೆ ಹುಕ್ಕೇರಿ ಹಿರೇಮಠದ ಶ್ರೀಗಳ ಸಾನಿದ್ಯದಲ್ಲಿ ಬರೊಬ್ಬರಿ 22ಜನ ದೇಹದಾನ ಮಾಡುವ ಒಪ್ಪಿಗೆ ಪತ್ರ ನೀಡಿದ್ದಾರೆ ಜೊತೆಗೆ ಇಬ್ಬರು ಅಂಗದಾನ ಮಾಡುವ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ ಇಂದು ಸಂಜೆ ಹುಕ್ಕೇರಿ ಶ್ರೀ ಗಳು ಬೆಳಗಾವಿಯ ಮಠದಲ್ಲಿ ದೇಹದಾನ.ಮತ್ತು ಅಂಗದಾನ ಮಾಡಿದ ದಾನಿಗಳನ್ನು ಸತ್ಕರಿಸಿದ್ದಾರೆ ಬೆಳಗಾವಿಯ ಭೀಮ್ಸ ಮತ್ತು …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉದ್ಯೋಗದಲ್ಲೂ ಶೇ 30 ರಷ್ಟು ಮೀಸಲಾತಿ

*ಬೆಳಗಾವಿ:-* ಮೋದಿ ಸರಕಾರ ಜನಸಾಮಾನ್ಯರಿಗೆ ಸುಳ್ಳು ಭರವಸೆಗಳ ಮೂಲಕ ದಾರಿತಪ್ಪಿಸುತ್ತಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದರು ಬೆಳಗಾವಿಯ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಮಾಡಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇವಲ ರಾಜಕೀಯ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ಉದ್ಯೋಗದಲ್ಲೂ ಶೇ 30 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೋಳ್ಳುತ್ತಿದೆ. ಸುಪ್ರೀಂಕೋರ್ಟ್ನ ನಾಲ್ಕು ಹಿರಿಯ ನ್ಯಾಯಾಧೀಶರು ತಮ್ಮಗಾಗುತ್ತಿರುವ ಅನ್ಯಾಯದ …

Read More »

18 ರಂದು ಬೆಳಗಾವಿಗೆ ನರೇಂದ್ರ ಮೋದಿ…

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರೀಲ್ 18 ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರ ಮಾಡಲಿದ್ದಾರೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ದಲ್ಲಿ ಎಪ್ರಿಲ್ 18 ರಂದು ವಿಜಯ ಸಂಕಲ್ಪ ಸಮಾವೇಶ ನಡೆಸಲು ಬಿಜೆಪಿ ನಾಯಕರು ನಿರ್ಧರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ ಸಂಸದ ಸುರೇಶ ಅಂಗಡಿ ಮತ್ತು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಘಟಪ್ರಭಾದಲ್ಲಿ ಸಮಾವೇಶ ನಡೆಯುವ ಜಾಗೆಯನ್ನು ಪರಿಶೀಲಿಸಿದ್ದಾರೆ. ಘಟಪ್ರಭಾ ದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ …

Read More »

ಬೆಳಗಾವಿಯಲ್ಲಿ 76 ರಲ್ಲಿ ಎರಡೇ ಎರಡು ನಾಮಪತ್ರಗಳು ತಿರಸ್ಕ್ರತ

ಬೆಳಗಾವಿ ಸುದ್ದಿ *ಬೆಳಗಾವಿ:-* ಬೆಳಗಾವಿ ಕ್ಷೇತ್ರದಲ್ಲಿ ಎರಡು ನಾಮಪತ್ರಗಳು ತಿರಸ್ಕ್ರತವಾಗಿವೆ ಒಟ್ಟು 76 ನಾಮಪತ್ರಗಳು ಸಲ್ಲಿಕೆಯಾಗಿದ್ದು ಇವುಗಳಲ್ಲಿ 74 ನಾಮಪತ್ರಗಳು ಕ್ರಮಬದ್ದವಾಗಿದ್ದು ಎರಡು ನಾಮಪತ್ರಗಳು ತಿರಸ್ಕ್ರತಗೋಂಡಿವೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 101 ಎಂಇಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಘೋಷಿಸಿದ್ದರು ಆದರೆ ಎಂಇಎಸ್ಸಿನ ನೂರಾಒಂದರ ಕನಸು ಕೋನೆಗು ಮೂರಾಬಟ್ಟೆಯಾಯಿತು. ಬೈಲಹೋಂಗಲದ ದಯಾನಂದ ಗುರುಪುತ್ರಯ್ಯಾ ಚಿಕ್ಕಮಠ ಹಾಗೂ ಬೆಳಗಾವಿಯ ಚವಾಟಗಲ್ಲಿಯ ಖುರ್ಷಿದಾಬಾನು ಅಸ್ಲಂ ನದಾಫ್ ಈ ಇಬ್ಬರ ನಾಮಪತ್ರಗಳು ತಿರಸ್ಕ್ರತ ಗೋಂಡಿವೆ.

Read More »

ಪಿ ಎಸ್ ಐ ಅವಟಿ ದರ್ಪಕ್ಕೆ ಬೀದುಗಿಳಿದ ಲಾಯರ್ಸ್

*ಬೆಳಗಾವಿ ಸುದ್ದಿ:-* ಬೆಳಗಾವಿ:- ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪೋಲಿಸ್ ಅಧಿಕಾರಿ ವಿರುದ್ದ ನ್ಯಾಯವಾದಿಗಳು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ತಮ್ಮ ಕಕ್ಷಿದಾರನ ದೂರು ದಾಖಲಿಸಲು ಹಿಂದೇಟು ಹಾಕಿದ್ದಕ್ಕೆ ಪ್ರಶ್ನೆ ಮಾಡಿದ ನ್ಯಾಯವಾದಿಗೆ ಅಥಣಿ ಪಿ ಎಸ್ ಐ ಯು ಎಸ್ ಅವಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದುಆರೋಪಿಸಿನ್ಯಾಯವಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯವಾದಿ ಬಿ ಆರ್ ರಾವ್ ಮೇಲೆ ಹಲ್ಲೆಗೆ ಯತ್ನಿಸಿದ ಅಥಣಿ ಪಿ ಎಸ್ ಐ …

Read More »

ಬಾಜಾ ಭಜಂತ್ರಿಯೊಂದಿಗೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಶಕ್ತಿ ಪ್ರದರ್ಶನ..

ಬಾಜಾ ಭಜಂತ್ರಿಯೊಂದಿಗೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಶಕ್ತಿ ಪ್ರದರ್ಶನ ಬೆಳಗಾವಿ- ನಗರದ ಸಮಾದೇವಿ ಮಂದಿರ,ಹನುಮಾನ ಮಂದಿರದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿ ಸಾವಿರಾರು ಜನ ಬೆಂಬಲಿಗರೊಂದಿಗೆ ಮೆರವಣಿಗೆ ಹೊರಡಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಇಂದು ತಮ್ಮ ಶಕ್ತಿ ಪ್ರದರ್ಶಿಸಿದರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಆರ್ ಅಶೋಕ ,ಪ್ರಭಾಕರ ಕೋರೆ ಸೇರಿದಂತೆ ಬಿಜೆಪಿ ಶಾಸಕರು ಸಾಥ್ ನೀಡಿದರು ಮೆರವಣಿಗೆಯಲ್ಲಿ ವಾದ್ಯಮೇಳಗಳ ತಾಳಕ್ಕೆ ತಕ್ಕಂತೆ ಬಿಜೆಪಿಯ …

Read More »

ಕೈದಿಗಳಿಗೂ ಮತದಾನ ಮಾಡಲು ಚಾನ್ಸ ಕೊಡಿ….ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ…!!

ಬೆಳಗಾವಿ- ಜೈಲಿನಲ್ಲಿರುವ ವಿಚಾರಾಧೀನ ಮತ್ತು ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ನೀಡಬೇಕೆಂದು ಸಮಾಜ ಸೇವಕನೊಬ್ಬ ಫಲಕ ಬರೆದುಕೊಂಡು ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ . ಬೈಲಹೊಂಗಲ ಮೂಲದ ವ್ಹಿಜಿ ಬಾಳೆಕುಂದ್ರಿ ಎಂಬ ಸಮಾಜಸೇವಕ ಸುಡು ಬಿಸಿಲಲ್ಲಿ ಟೋಪಿ ಹಾಕಿಕೊಂಡು ಕರಿ ಹಲಗೆಯ ಮೇಲೆ ದೇಶ ವಿದೇಶದಲ್ಲಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ಕೊಡಿ ಎಂದು ಬರೆದು ಪ್ರೋಟೆಸ್ಟ ಮಾಡುತ್ತಿರುವದು ವಿಶೇಷ …

Read More »

ರಾಮದುರ್ಗದ ತಿಮ್ಮಾಪೂರಿನಲ್ಲಿ ವಿದ್ಯುತ್ ತಂತಿ ತುಳಿದು ನಾಲ್ವರ ದುರ್ಮರಣ

ರಾಮದುರ್ಗದ ತಿಮ್ಮಾಪೂರಿನಲ್ಲಿ ವಿದ್ಯುತ್ ತಂತಿ ತುಳಿದು ನಾಲ್ವರ ದುರ್ಮರಣ ಬೆಳಗಾವಿ-ತುಂಡಾಗಿದ್ದ ಬಿದ್ದಿದ್ದ ತಂತಿ ತುಳಿದು ನಾಲ್ವರ ದುರ್ಮರಣ ಹೊಂದಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ ರೇವಪ್ಪಾ ಕಲ್ಲೋಳಿ(೩೫), ಹೆಂಡತಿ ರತ್ನವ್ವಾ ಕಲ್ಲೋಳಿ(೩೦), ಮಗ ಸಚ್ಚೀನ್ (೮), ರೇವಪ್ಪನ ಅಣ್ಣನ ಮಗ ಕ್ರಿಷ್ಣಾ ಮೃತ ದುರ್ದೈವಿಗಳಾಗಿದ್ದಾರೆ ನಿನ್ನೆ ಸಂಜೆ ಮಳಿಗಾಳಿಗೆ ತುಂಡಾಗಿ ಬಿದ್ದ ತಂತಿ. ಹೆಸ್ಕಾಂ ಅಧಿಕಾರಿಗಳಿಗೆ ತಂತಿ ತೆರವುಗೊಳಿಸುವಂತೆ ಕೇಳಿದರು ಕ್ಯಾರೆ ಎಂದಿದರ ಸಿಬ್ಬಂದಿ. …

Read More »