Home / LOCAL NEWS (page 531)

LOCAL NEWS

ಜನೇವರಿ ೨೧ ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ-ಜನವರಿ ೨೧ ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ೧೬ನೇ ಘಟಿಕೋತ್ಸವ ನಡೆಯಲಿದೆ ಎಂದು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದ್ದಾರೆ ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ, ಐಐಟಿ ರೂರ್ಕಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಪ್ರೇಮ್ ಕೃಷ್ಣ ಅವರಿಂದ ಘಟಿಕೋತ್ಸವ ಭಾಷಣ ನಡೆಯಲಿದೆ ೭೫ ವಿದ್ಯಾರ್ಥಿಗಳಿಗೆ ಚಿನ್ನದ ಪದಕ. ಒಟ್ಟು ೭೧೧೧೭ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ. ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿಗೆ ಅತೀ ಹೆಚ್ಚು ೩೨ ಚಿನ್ನದ ಪದಕ- ಕರಿಸಿದ್ದಪ್ಪ ಬೆಂಗಳೂರಿನ …

Read More »

ಕಡಲ ತೀರದ ಬಾನಂಗಳದಲ್ಲಿ ಬಣ್ಣದ ಚಿತ್ತಾರ….!

ಪಣಜಿ:- ಇಲ್ಲಿನ ಮೀರಾಮಾರ ಕಡಲತಡಿ ಎಂದಿನಂತಿರಲಿಲ್ಲ. ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರ, ಚಿಣ್ಣರ ಕೇಕೆ, ಯುವಕ–ಯುವತಿಯರ ಶಿಳ್ಳೆ, ಚಪ್ಪಾಳೆ ಸುರಿಮಳೆ .. ಈ ದೃಶ್ಯಾವಳಿ ಕಂಡುಬಂದಿದ್ದು ಗೋವಾ 3ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ. ಗಾಳಿ ಪಟ ಉತ್ಸವವು ನೋಡುಗರ ಕಣ್ಮನ ಸೆಳೆಯಿತು. ಲೋಹದ ಹಕ್ಕಿಗೆ ಸವಾಲು ಹಾಕಿದಂತೆ ಆಗಸಕ್ಕೆ ಚಿಮ್ಮಿದ ವಿವಿಧ ಚಿತ್ತಾರದ ಗಾಳಿಪಟಗಳು ನೋಡು ಗರನ್ನು ಮಂತ್ರಮುಗ್ಧಗೊಳಿಸಿದವು. ಫೈಟರ್ ಕೈಟ್ , ರಾಷ್ಟ್ರ ಧ್ವಜ ಟ್ರೈನ್ ಕೈಟ್, ಆಕ್ಟೋಪಸ್, …

Read More »

ಅಭಿವೃದ್ಧಿಯ ಪ್ರತಿಧ್ವನಿ…. ಮಹಾಂತೇಶ ಧಣಿ…!

ಬೆಳಗಾವಿ-ವಿದಾನ ಪರಿಷತ್ತಿನಲ್ಲಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಧ್ವನಿ ಎತ್ತಿ ಹತ್ತು ಹಲವು ಯೋಜನೆಗಳನ್ನು ಮಂಜೂರು ಮಾಡಿಸಿ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಿದ ಬೆಳಗಾವಿಯ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಅವರು ಜಿಲ್ಲೆಯ ಅಭಿವೃದ್ಧಿಯ ಪ್ರತಿಧ್ವನಿಯಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ ಇಂದು ಮಹಾಂತೇಶ ಕವಟಗಿಮಠ ಅವರ ಹುಟ್ಟು ಹಬ್ಬದ ದಿನ ಅವರ ಅಭಿಮಾನಿಗಳಿಗೆ ಮತ್ತು ಹಿತೈಶಿಗಳಿಗೆ ಈ ಲೇಖನ ಸಮರ್ಪಣೆ ಮಾಡುತ್ತಿದ್ದೇವೆ ಮಹಾಂತೇಶ ಕವಟಗಿಮಠ ಅವರು ವಿಧಾನ ಪರಿಷತ್ತಿನಲ್ಲಿ ಬೆಳಗಾವಿ …

Read More »

ಬೆಳಗಾವಿ ಮುಂಬೈ ನಡುವೆ ಎಕಾನಾಮಿಕ್ ಕಾರಿಡಾರ್-ದೇಶಪಾಂಡೆ

ಬೆಳಗಾವಿ- ಬೆಂಗಳೂರು ಹಾಗು ಮುಂಬಯಿ ನಡುವೆ ಎಕಾನಾಮಿಕ್ ಕಾರಿಡಾರ್ ನಿರ್ಮಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುರುವ ಹಿನ್ನಲೆಯಲ್ಲಿ ಕೇಂದ್ರ ಸ್ಥಾನದಲ್ಲಿರುವ ಬೆಳಗಾವಿಯ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಕೈಗಾರಿಕೆ ಸಚಿವ ಆರ್ ವ್ಹಿ ದೇಶಪಾಂಡೆ ತಿಳಿಸಿದರು ಬೆಳಗಾವಿಯ ಅಟೋ ನಗರ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಫುಲ ಅವಕಾಶವಿದೆ ಆಹಾರ …

Read More »

ಗೋವಾ ಕಡಲ ಕಿನಾರೆಯಲ್ಲಿ ಬೆಳಗಾವಿ ಗಾಳಿಪಟ

ಬೆಳಗಾವಿ: ಗೋವಾ ಪ್ರವಾಸಿಗರನ್ನು ಬೆಳಗಾವಿಯತ್ತ ಸೆಳೆಯಲು ಮಾಜಿ ಶಾಸಕ ಅಭಯ ಪಾಟೀರು ಮಾಡುತ್ತಿರುವ ಪ್ರಯತ್ನ ಇಂದು ನಿನ್ನೆಯದಲ್ಲ ಹಲವಾರು ವರ್ಷಗಳಿಂದ ಅವರು ಈ ಪ್ರಯತ್ನವನ್ನು ಮುಂದುವರೆಸಿದ್ದಾರೆ ಇದರ ಒಂದು ಭಾಗವಾಗಿ ಅಭಯ ಪಾಟೀರು ಕಳೆದ ಮೂರು ವರ್ಷಗಳಿಂದ ಗೋವಾ ಕಡಲ ಕಿನಾರೆಯಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿದ್ದು ಈ ವರ್ಷದ ಗಾಳಿಪಟ ಉತ್ಸವ ಜನವರಿ 17 ಹಾಗು 18 ರಂದು ಎರಡು ದಿನಗಳ ಕಾಲ ಗೋವಾ ಕಡಲ ಕಿನಾರೆಯಲ್ಲಿ ನಡೆಯಲಿದೆ ಗೋವಾದ …

Read More »

ಬೆಳಗಾವಿ ಎಪಿಎಂಸಿ ಎಂಈಎಸ್ ಗೆ ಸಮಾಧಾನ.ಕಾಂಗ್ರೆಸ್ ಗೆ ವರದಾನ.ಬಿಜೆಪಿಗೆ ಅವಮಾನ

ಬೆಳಗಾವಿ- ಗೆದ್ದವರನೆಲ್ಲ ನಮ್ಮವರೇ ಎಂದು ಭಗವಾ ಪೇಟಾ ಸುತ್ತಿ ,ಬುಟ್ಟಿಗೆ ಹಾಕಿಕೊಂಡ ಎಂಈಎಸ್ ನಾಯಕರು ಬೆಳಗಾವಿ ಎಪಿಎಂಸಿ ಯಲ್ಲಿ ಭಗವಾ ಫಡಕಲಾ..ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಬೆಳಗಾವಿ ಎಪಿಎಂಸಿ ಯಲ್ಲಿ ಒಟ್ಟು ಹನ್ನೆರಡು ಸ್ಥಾನಗಳ ಪೈಕಿ ಎಂಈಎಸ್  ಆರು ಸ್ಥಾನಗಳಲ್ಲಿ ಗೆಲವು ಸಾಧಿಸಿದೆ ಬಿಜೆಪಿ ಕೇವಲ ಹಿರೇಬಾಗೇವಾಡಿಯಲ್ಲಿ ಮಾತ್ರ ಗೆಲವು ಸಾಧಿಸಿದ್ದು ಕಾಂಗ್ರೆಸ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಎಂಈಎಸ್ ಭಧ್ರಕೋಟೆಗೆ ಲಗ್ಗೆ ಇಟ್ಟಿದೆ ಈ ಚುನಾವಣೆಯಲ್ಲಿ ಇನ್ನೊಂದು ವಿಶೇಷ …

Read More »

ಕೊನೆಗೂ ತಾನಾಜಿ ಹೊಡೆದರು ..ಗೆಲುವಿನ ಬಾಜಿ..!

ಬೆಳಗಾವಿ ಎಪಿಎಂಸಿ ನಗರ ಕ್ಷೇತ್ರದಲ್ಲಿ ಹಲವಾರು ಗದ್ದಲಗಳ ನಡುವೆ ಮತ ಎಣಿಕೆ, ಮರು ಮತ ಎಣಿಕೆ ಹೀಗೆ ಎಣಿಕೆಗಳ ಮೇಲೆ ನಾಲ್ಕು ಬಾರಿ ಎಣಿಕೆಯಾದ ನಂತರ ತಾನಾಜಿ ಪಾಟೀಲ ಅಚ್ಚರಿಯ ಗೆಲುವು ಕಂಡಿದ್ದಾರೆ. ಪ್ರತಿಸ್ಪರ್ಧಿ ಚಂದ್ರಕಾಂತ ಕೊಂಡುಸ್ಕರ್ ವಿರುದ್ದ 8 ಮತಗಳ ಅಂತರದಿಂದ ತಾನಾಜಿ ವಿಜಯ ಸಾಧಿಸಿದರು. ಮೊದಲು ಮತ ಎಣಿಕೆ ನಡೆದಾಗ ಚಂದ್ರಕಾಂತ ಅವರು 4 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಗೊತ್ತಾಯಿತು ಇದಕ್ಕೆ ತಾನಾಜಿ ಬೆಂಬಲಿಗರು ಆಕ್ಷೇಪ …

Read More »

ಬೆಂಕಿ ಹಚ್ಚುವ ಹೇಳಿಕೆಯನ್ನು ಸಮರ್ಥಿಸಿಕೊಂಡ- ಪಿ,ರಾಜೀವ

ಬೆಳಗಾವಿ-ನಾನು ಅಧಿಕಾರಿಗಳ ಮೇಲೆ ವರಟಾಗಿ ಮಾತನಾಡಿದ್ರೆ ಅದು ನನ್ನ ವಯಕ್ತಿಕ ಲಾಭಕ್ಕಾಗಿ ಅಲ್ಲ. ಅಧಿಕಾತಿಗಳ ವರ್ತನೆಗಾಗಿ ನಾನು ಬಳಸಿದ ಪದಗಳು ಕಡಿಮೇನೆ.ಅಧಿಕಾರಿಗಳು ಕ್ಷೇತ್ದದ ಜನರ ಕೆಲಸ ಮಾಡದಿದ್ದರೆ ಇನ್ನು ಮುಂದೆ ನನ್ನ ವರಟ ಮಾತುಗಳನ್ನು ಮುಂದುವರೆಸುತ್ತೆನೆ.ಎಂದು ಶಾಸಕ ಪಿ ರಾಜೀವ ಸ್ಟೇಶನ್ ಗೆ ಬೆಂಕಿ ಹಚ್ಚುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪೊಲಿಸ್ ಠಾಣೆ ಬೆಂಕಿ ವಿಚಾರ.ಪ್ರಸ್ತಾಪಿಸಿ ಪತ್ತೆಯಾಗದ ಕೊಲೆ ಪ್ರಕರಣದಲ್ಲಿ ಅಮಾಯಕ ರನ್ನ ಕರೆತಂದು ವಿಚಾರಣೆ …

Read More »

ಮಹದ್ವಾ ರಸ್ತೆಯ ಮನೆಗೆ ಬೆಂಕಿ ಅಪಾರ ಹಾನಿ

ಬೆಳಗಾವಿ- ನಗರದ ಮಹಾದ್ವಾ ರಸ್ರೆಯ ನಾಲ್ಕನೇಯ ಕ್ರಾಸ್ ನಲ್ಲಿರುವ  ಮುರುಕುಟೆ ಅವರಿಗೆ ಸೇರಿದ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಹಾನಿಯಾಗಿದೆ ಮಧ್ಯಾಹ್ನ ಮೂರು ಘಂಟೆ ಸುಮಾರಿಗೆ ಮನೆಯಲ್ಲಿ ಶಾರ್ಟ ಸರ್ಕ್ಯಟ್ ನಿಂದಾಗಿ ಮನೆಯ ತುಂಬೆಲ್ಲ ಬೆಂಕಿ ಹರಡಿ ಮನೆಯಲ್ಲಿನ ಎಲ್ಲ ಸಾಮುಗ್ರಿಗಳು ಸುಟ್ಟು ಭಸ್ಮವಾಗಿವೆ ಅಗ್ನಿ ಶಾಮಕ ದಳ ಹಾಗು ಸ್ಥಳಿಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು ಬೆಂಕಿ ಇನ್ನುವರೆಗೆ ನಿಯಂತ್ರಣಕ್ಕೆ ಬಂದಿಲ್ಲ ಬೆಂಕಿ ಅವಘಡದಿಂದಾಗಿ ಮಹದ್ವಾ ರಸ್ತೆಯಲ್ಲಿ …

Read More »

ಜಿ ಎಸ್ ಟಿ ದಾಖಲಾತಿ ನೊಂದಣಿಗೆ ಜನೇವರಿ ೧೫ ಕೊನೆಯ ದಿನಾಂಕ

ಬೆಳಗಾವಿ- ದೇಶಾದ್ಯಂತ ಏಕರೂಪ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿರುವುದರಿಂದ ರಾಜ್ಯಾದ್ಯಂತ ಎಲ್ಲಾ ವರ್ತಕರು, ವ್ಯಾಪಾರ ವಹಿವಾಟುಗಳನ್ನ ಇದೇ ಜನವರಿ ೧೫ ರೊಳಗಾಗಿ, ಜಿಎಸ್ ಟಿ ಅಡಿಯಲ್ಲ ದಾಖಲಾತಿ ಹಾಗೂ ನೊಂದಣಿ ಮಾಡಿಕೊಳ್ಳಬೇಕು ಎಂದು ವಾಣಿಜ್ಯ ತರಿಗೆ ಜಂಟಿ ಆಯುಕ್ತ ಎಸ್ ಮಿರ್ಜಾ ಅಜ್ಮಲ್ ಹೇಳಿದ್ದಾರೆ. ಬೆಳಗಾವಿಯ ವಿಭಾಗದ ಮೌಲ್ಯವರ್ಧಿತ ತೆರಿಗೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೬ ಡಿಸೆಂಬರ್ ೧೮. ರಿಂದ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ …

Read More »