Breaking News

LOCAL NEWS

ಬೆಳಗಾವಿ ಎಪಿಎಂಸಿ,ಅತಂತ್ರ.ಅಧಿಕಾರ ಹಿಡಿಯಲು ಕಾಂಗ್ರೆಸ್,ಬಿಜೆಪಿ ,ರಣತಂತ್ರ..!

ಬೆಳಗಾವಿ-  ಫೆ ೧೮ ರಂದು ಬೆಳಗಾವಿ ಎಪಿಎಂಸಿ,ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಕಸರತ್ತು ನಡೆಸಿದರೆ ಎಂಈಎಸ್ ಎರಡೂ ಪಕ್ಷಗಳನ್ನು ಮೀರಿಸಿ ಎಪಿಎಂಸಿಯಲ್ಲಿ ಅಧಿಕಾರ ಹಿಡಿಯುವ ತಂತ್ರ ರೂಪಿಸಿದೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಾಧಿಸಲು ಕೇವಲ ಒಬ್ಬ ಸದಸ್ಯನ ಬೆಂಬಲ ಬೇಕಾಗಿದೆ ಆದರೆ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾಗಿದ್ದು ಒಂದು ಗುಂಪು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ ಎಂಈಎಸ್ …

Read More »

ಕಿತ್ತೂರ ತಾಲ್ಲೂಕು ಪಂಚಾಯತಿ ರಚನೆ, ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ..

ಬೆಳಗಾವಿ- ವೀರ ರಾಣಿ ಕಿತ್ತೂರ ಚನ್ನಮಾಜಿಯ ಹೋರಾಟದ ನೆಲ ಐತಿಹಾಸಿಕ ಕಿತ್ತೂರನ್ನು ಪೂರ್ಣ ಪ್ರಮಾಣದ ತಾಲ್ಲೂಕು ಮಾಡಲು ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಿದ್ದಾರೆ ಕಿತ್ತೂರು ತಾಲ್ಲೂಕಿನಲ್ಲಿ ಈಗಾಗಲೇ ತಾಲೂಕಾ ದಂಡಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಜೊತೆಗೆ ಕಿತ್ತೂರಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಗೊಂಡಿದೆ,ಜೊತೆಗೆ ಕಿತ್ತೂರು ತಾಲ್ಲೂಕಿಗೆ ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಎನ್ ಜಯರಾಂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆನ್ನು …

Read More »

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಪ್ರಕಾಶ ಹುಕ್ಕೇರಿ

ಇಟಗಿ ಕ್ರಾಸ್ ಬಳಿ ಕ್ರೂಸರ್-ಲಾರಿ ನಡುವೆ ಢಿಕ್ಕಿ, ಕ್ರೂಸರ್ ನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವು, ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅದೇ ಮಾರ್ಗದಿಂದ ಸಂಚರಿಸುತ್ತಿದ್ದ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ ಕಿತ್ತೂರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ  ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಟಗಿ ಕ್ರಾಸ್,ಬಳಿ ಈ ಘಟನೆ ನಡೆದಿದೆ ಯಕ್ಸಂಬಾ ಪಟ್ಟಣದ ನಿವಾಸಿ ಸತ್ಯಪ್ಪ ಪೂಜಾರಿ (೫೦) ಮೃತ ದುರ್ದೈವಿ,ಯಾಗಿದ್ದಾನೆ …

Read More »

ಮೇಯರ್ ಖುರ್ಚಿಗಾಗಿ ಹಗ್ಗ ಜಗ್ಗಾಟ..ಆಕಾಂಕ್ಷಿಗಳ ಕಿತ್ತಾಟ.ಎಂಈಎಸ್ ಗುಂಪಿನಲ್ಲಿ ಸಂಕಟ..!

ಬೆಳಗಾವಿ-ಮಾರ್ಚ ಐದರಂದು ಮೇಯರ್ ಸರೀತಾ ಪಾಟೀಲರ ಅಧಿಕಾರದ ಅವಧಿ ಮುಗಿಯಲಿದ್ದು ಮೇಯರ್ ಹಾಗು ಡೆಪ್ಯುಟಿ ಮೇಯರ್ ಖುರ್ಚಿಗಾಗಿ ಈಗಿನಿಂದಲೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಹಾಗು ಮರಾಠಿ ಗುಂಪಿನ ನಡುವೆ ಹಗ್ಗ ಜಗ್ಗಾಟ ಶುರುವಾಗಿದೆ ಮೇಯರ್ ಸ್ಥಾನವನ್ನು ಪ್ರ ವರ್ಗ 1 ಉಪ ಮಹಾಪೌರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಟ್ಟು ೫೮ ಜನ ಸದಸ್ಯರಿದ್ದು ಇದರಲ್ಲಿ ಓರ್ವ ಸದಸ್ಯನಿಗೆ ಮತದಾನದ ಹಕ್ಕಿಲ್ಲ ೫೭ ಸದಸ್ಯರಲ್ಲಿ …

Read More »

ಬೆಳಗಾವಿ ನಗರಕ್ಕೆ ಶೀಘ್ರದಲ್ಲಿಯೇ ಪಾಸ್ ಪೋರ್ಟ ಸೇವಾ ಕೇಂದ್ರ

ಬೆಳಗಾವಿ- ರಾಜ್ಯದ ಎರಡನೇಯ ರಾಜಧಾನಿ ಗಡಿನಾಡ ಗುಡಿಗೆ ಈಗ ಮತ್ತೊಂದು ಅಭಿವೃದ್ಧಿಯ ಕಿರೀಟ ದಕ್ಕಿದೆ,ಸಂಸದ ಸುರೇಶ ಅಂಗಡಿ ಅವರ ಸತತ ಪ್ರಯತ್ನ ಫಲ ನೀಡಿದ್ದು ಬೆಳಗಾವಿ ನಗರಕ್ಕೆ ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಸಮ್ಮತಿ ಸೂಚಿಸಿದೆ ಈ ಕುರಿತು ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಸಂಸದ ಸುರೇಶ ಅಂಗಡಿ ಕೇಂದ್ರದ ವಿದೇಶಾಂಗ ಸಚಿವಾಲಯ ಬೆಳಗಾವಿಗೆ ಪಾಸ್ ಪೋರ್ಟ ಸೇವಾ ಕೇಂದ್ರ ಪೋಸ್ಟ್ ಆಫೀಸ್ ಮಂಜೂರು …

Read More »

ಸಾಮಾಜಿಕ ಪ್ರ,ಜ್ಞೆ ಮೂಡಿಸಿದ ಶಾಲಾ ಮಕ್ಕಳ ಪ್ರೊಜೆಕ್ಟ…!

ಬೆಳಗಾವಿ ಇಲ್ಲಿನ ಕ್ಯಾಂಪ ಪ್ರದೇಶದಲ್ಲಿರುವ ಮುಸ್ಲಿಂ ಎಜುಕೇಶನ ಸೊಸೈಟಿಯ ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ವಿಜ್ಞಾನ ಮತ್ತು ಕಲಾ ಪ್ರದರ್ಶನ ಗಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ಕಚ್ಚಾವಸ್ತುಗಳನ್ನು ಬಳಕೆ ಮಾಡಿ ನಿರ್ಮಿಸಿದ್ದ ಮಳೆ ನೀರು ಸಂಗ್ರಹಣೆ ಮತ್ತು ಶುದ್ಧೀಕರಣ ಘಟಕ, ಜೈವಿಕ ಇಂಧನ, ಗಾಳಿವಿದ್ಯುತ,  ಜಲ ವಿದ್ಯುತ, ಸೌರಶಕ್ತಿ, ಕುಡಿಯುವ ನೀರು ಸಂಗ್ರಹಿಸುವ ವಿಧಾನ, ಸಾವಯವ ಕೃಷಿ, ಗೊಬ್ಬರ ಬಳಕೆ ವಿಧಾನ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಇನ್ನು ಅನೇಕ …

Read More »

ವಾರ್ಡುಗಳ ಡೀ.ಲಿಮಿಟೇಶನ್..ಪಾಲಿಕೆ ಅಧಿಕಾರಿಗಳಿಗಿಲ್ಲ..ಟೇನ್ ಶನ್…!

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಬೆಳಗಾವಿ ನಗರದ ವಾರ್ಡುಗಳನ್ನು ಪುನರ್ ವಿಂಗಡನೆ ಮಾಡುವಂತೆ ೨೦೧೬ ಜುಲೈ ೨೫ ರಂದು ಬೆಳಗಾವಿ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿ ಬರೊಬ್ಬರಿ ಏಳು ತಿಂಗಳು ಗತಿಸಿದರೂ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಇನ್ನುವರೆಗೆ ಯಾವದೇ ರೀತಿಯ ಕ್ರಮ ಕೈಗೊಂಡಿಲ್ಲ ವಾರ್ಡಗಳ ಪುನರ್ ವಿಂಗಡನೆ ಕುರಿತು ಜಿಲ್ಲಾಧಿಕಾರಿಳ ಆದೇಶ ಪಾಲಿಕೆ ಆಯುಕ್ತರ ಕೈ ಸೇರಿ ಏಳು ತಿಂಗಳು ಗತಿಸಿವೆ ಆದರೆ ಇನ್ನುವರೆಗೆ ಈ …

Read More »

ಮರಾಠಾ ಕ್ರಾಂತಿ ಮೋರ್ಚಾಗೆ ಮುಸ್ಲಿಂ ಮುಖಂಡರ ಬೆಂಬಲ

ಬೆಳಗಾವಿ- ಬೆಳಗಾವಿ ನಗರದಲ್ಲಿ ಫೆ ೧೬ ರಂದು ನಡೆಯಲಿರುವ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಮುಸ್ಲಿಮ ಮುಖಂಡರು ಬೆಂಬಲ ಸೂಚಿಸಿದ್ದಾರೆ ಫೆ ೧೬ ರಂದು ಬೆಳಗಾವಿಯ ಎಂಈಎಸ್ ಹಾಗು ವಿವಿಧ ಮರಾಠಿ ಭಾಷಿಕ ಸಂಘಟನೆಗಳು ವಿಶೇಷ ಮೀಸಲಾತಿಗಾಗಿ ಕ್ರಾಂತಿ ಮೋರ್ಚಾ ಆಯೋಜಿಸಿವೆ ಇದರಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ ಎಂದು ಎಂಈಎಸ್ ನಾಯಕರು ರೀಲು ಬಿಡುತ್ತಿದ್ದಾರೆ ಶನಿವಾರ ಬೆಳಗಾವಿ ನಗರದ ಶಹಾಪೂರ,ವಡಗಾಂವ ಜಮಾತಿನ ಮುಖಂಡರು ಮೇಯರ್ ಸರೀತಾ ಪಾಟೀಲ …

Read More »

ಕೃಷ್ಣಾ ನಿನ್ನನ್ನು ಬಿಟ್ಟು ಇರಲಾರೆವು…ಬೇರೆ ಪಕ್ಷಕ್ಕೆ ನಿಮ್ಮನ್ನು ಬಿಡಲಾರೆವು

ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಮನನೊಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿ ಕೃಷ್ಣಾ ನಿಮ್ಮನ್ನು ಬಿಟ್ಟು ಇರಲಾರೆವು ಬೇರೆ ಪಕ್ಷಕ್ಕೆ ಹೋಗಲು ನಿಮ್ಮನ್ನು ಬಿಡಲಾರೆವು ಎನ್ನುವ ಮನದಾಳದ ಇಂಗಿತವನ್ನು ಹೊರಹಾಕಿದರು ಶಂಕರ ಮುನವಳ್ಳಿ ಅವರ ನೇತ್ರತ್ವದಲ್ಲಿ ಸಭೆ ಸೇರಿದ ಬೆಳಗಾವಿ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರು ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ …

Read More »

ನಾಡ ವಿರೋಧಿ ಟೀ ಶರ್ಟ ಮಾರುತ್ತಿದ್ದ ಯುವಕನ ಬಂಧನ..

ಬೆಳಗಾವಿ-ಬೆಳಗಾವಿ ನಗರದಲ್ಲಿ ಫೆ ೧೬ ರಂದು ಮರಾಠಾ ಕ್ರಾಂತಿ ಮೋರ್ಚಾ ನಡೆಯಲಿದೆ ಈ ಮೋರ್ಚಾಗೆ ಸಂಬಂಧಿಸಿದಂತೆ ಕೊಲ್ಹಾಪೂರದಿಂದ ಬೆಳಗಾವಿಗೆ ಬಂದು ನಾಡ ವಿರೋಧಿ ಟೀ ಶರ್ಟ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಖಡೇ ಬಝಾರ ಪೋಲೀಸರು ತಮ್ಮ ವಶಕ್ಜೆ ಪಡೆದು ವಿಚಾರಣೆ ನಡೆಸಿದ್ದಾರೆ ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎನ್ನುವ ಸಂದೇಶ ಬಿಂಬಿಸುವ ಟೀ ಶರ್ಟಗಳನ್ನು ಮತ್ತು ಶಾಲ್ ಗಳನ್ನು ಈತ ಬೆಳಗಾವಿಯ ಖಡೇ ಬಝಾರ ಮತ್ತು ಗಣಪತಿ ಗಲ್ಲಿಯಲ್ಲಿ ಮಾರಾಟ …

Read More »