LOCAL NEWS

೧೭ ಜನ ಹಿಂಡಲಗಾ ಜೈಲು ಹಕ್ಕಿಗಳಿಗೆ ಬಿಡುಗಡೆಯ ಭಾಗ್ಯ..೧೮ ಅರ್ಜಿಗಳು ರಿಜೆಕ್ಟ

ಬೆಳಗಾವಿ-ಸನ್ನಢತೆ ಆಧಾರದ ಮೇಲೆ ಹಿಂಡಲಗಾ ಕೇಂದ್ರ ಕಾರಾಗೃಹದ 17 ಕೈದಿಗಳು ಜನವರಿ 26 ರ ಗಣಜಾಜ್ಯೋತ್ಸವದಿನ ಸರ್ಕಾರದಿಂದ ಬಿಡುಗಡೆ ಭಾಗ್ಯ ಕಾಣಲಿದ್ದಾರೆ. ಸನ್ನಢತೆ ಆಧಾರದ ಮೇಲೆ ಐತಿಹಾಸಿಕ ಹಿಂಡಲಗಾ ಕೇಂದ್ರ ಕಾರಾಗೃಹದ 25 ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಕಾರಾಗೃಹದ ಅಧೀಕ್ಷಕರ ರಾಜ್ಯ ಗೃಹಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು. ಒಟ್ಟಾರೆ ಕೈದಿಗಳ ಚಾರಿತ್ರ್ಯ, ಸನ್ನಡತೆ, ಶಿಕ್ಷೆಯ ಅವಧಿಯಲ್ಲಿ ಅವರ ಸ್ವಭಾವ ಮತ್ತು ಕೆಲಸ ಕಾರ್ಯಗಳನ್ನು ಪರಿಗಣಿಸಿ, ರಾಜ್ಯ ಗೃಹ ಸಚಿವಾಲಯವು 17 ಕೈದಿಗಳಿಗೆ ಬಿಡುಗಡೆ …

Read More »

ಸತೀಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಿ-ಶಂಕರ ಮುನವಳ್ಳಿ

ಬೆಳಗಾವಿ-ಮಾಜಿ ಸಚಿವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಈ ಹಿಂದೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಅವರನ್ನು ಕೂಡಲೇ ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಅವರು ಜಿಲ್ಲಾ ಮಂತ್ರಿಗಳಾಗಿದ್ದಾಗ ಪಕ್ಷಕ್ಕಾಗಿ ಏನೂ ಮಾಡಿಲ್ಲ ಪಕ್ಷದ ಸಂಘಟನೆಗೂ …

Read More »

ಬೈಲಹೊಂಗಲದ ಕೃಷಿ ಮೇಳಕ್ಕೆ ಅದ್ಧೂರಿ ಚಾಲನೆ

ಬೆಳಗಾವಿ/ಬೈಲಹೊಂಗಲ:(ಸಂಗೊಳ್ಳಿ ರಾಯಣ್ಣ ಸಭಾಂಗಣ) ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದೀ ಯೋಜನೆ ವತಿಯಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ವಿದ್ಯಾನಗರದ ಮೂಗಿಯವರ ಹೊಲದಲ್ಲಿ ಆಯೋಜಿಸಿರುವ 37ನೇ ರಾಜ್ಯ ಕೃಷಿ ಮೇಳ ಉದ್ಘಾಟನೆಯಾಯಿತು.. ಕೃಷಿ ವಸ್ತು ಪ್ರದರ್ಶನವನ್ನು ಗಣಿ ಭೂವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಉದ್ಘಾಟಿಸಿದರು. ಕೃಷಿ ಯಂತ್ರೋಪಕರಣ ವಿಭಾಗವನ್ನು ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‍ಇ ಆಡಳಿತ ಮಂಡಳಿ ಚೇರಮನ ಡಾ. ಪ್ರಭಾಕರ ಕೋರೆ, ಕರಕುಶಲ ವಸ್ತುಪ್ರದರ್ಶನವನ್ನು ಬೆಳಗಾವಿ ಸಂಸದ ಸುರೇಶ ಅಂಗಡಿ …

Read More »

ಸಿಎಂ ಸಿದ್ಧರಾಮಯ್ಯ, ಯಡಿಯೂರಪ್ಪಗೆ ,ಕಾಮನ್ ಸೆನ್ಸ ಇಲ್ಲ-ಕುಮಾರಸ್ವಾಮಿ

ಬೆಳಗಾವಿ- ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ಪ್ರಕರಣ. ಐಟಿ ದಾಳಿ ವಿಚಾರಕ್ಕೆ ರಾಜಕೀಯ ಬಣ್ಣ ಕಟ್ಟಲ್ಲ. ಪಕ್ಷಕ್ಕಿಂತ ಹೆಚ್ಚಾಗಿ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಲು ಕೆಲ ನಾಯಕರು ಐಟಿ ರೇಡ್ ಮಾಡಿಸಿದ್ದಾರೆ ಎಂಬ ಆರೋಪವಿದೆ. ಈ ರೇಡ್ ಗಳು ಕೇವಲ ಕಾಟಾಚಾರಕ್ಕೆ ಸಿಮೀತವಾಗಬಾರದು.ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾದ್ಯಮಗಳ …

Read More »

ರಾಯಣ್ಣನ ಉತ್ಸವ, ಮುಖ್ಯಮಂತ್ರಿಗಳಿಂದ ಉದ್ಘಾಟನೆ

.ಬೆಳಗಾವಿ- ಕ್ರಾಂತಿ ವೀರ ,ರಾಣಿ ಚನ್ನಮ್ಮಾಜಿಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಉತ್ಸವ ಇದೇ ತಿಂಗಳ ೨೭ ರಿಂದ ಆರಂಭ ವಾಗಲಿದ್ದು ಈ ಉತ್ಸವವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ ಕ್ರಾಂತಿಯ ನೆಲ ಶೂರರ ನಾಡು ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಈ ಉತ್ಸವವ ಜನೇವರಿ ೨೭ ಹಾಗು ೨೮ ರಂದು ಎರಡು ದಿನಗಳ ಕಾಲ ನಡೆಯಲಿದೆ ಕಿತ್ತೂರ ಉತ್ಸವಕ್ಕೆ ಬಾರದ ಮುಖ್ಯಮಂತ್ರಿ ರಾಯಣ್ಣನ ಉತ್ಸವಕ್ಕೆ ಬರುತ್ತಿರುವದರಿಂದ …

Read More »

ನಾಳೆಯಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವೈ- ಫೈ ಸೇವೆ

ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ ಈ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ರೋಗಿಗಳ ಮನರಂಜನೆಗಾಗಿ ಬಿಎಸ್ಎನ್ಎಲ್ ನಾಳೆ ಬುಧವಾರದಿಂದ ವೈಫೈ ಸೇವೆ ಆರಂಭವಾಗಲಿದೆ ಬುಧವಾರ ಬೆಳಿಗ್ಗೆ ೧೧ ಘಂಟೆಗೆ ಬಿಎಸ್ಎನ್ಎಲ್ ಜಿಲ್ಲಾ ಮುಖ್ಯ ವ್ಯೆವಸ್ಥಾಪಕ ತ್ಯಾಗಿ ಅವರು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವೈಫೈ ಸೇವೆಗೆ ಚಾಲನೆ ನೀಡಲಿದ್ದಾರೆ ಏಸಿಯಾ ಖಂಡದಲ್ಲಿಯೇ ಸ್ವಚ್ಛ ಮತ್ತು ಬೃಹತ್ತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾವ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಮೋಬೈಲ್ ನೆಟವರ್ಕ …

Read More »

ಸುರೇಶ ಅಂಗಡಿ ಅವರ ಎರಡನೇಯ ಅಭಿವೃದ್ಧಿಯ ಮೈಲಿಗಲ್ಲು…

  ಬೆಳಗಾವಿ:ನಗರದಲ್ಲಿ ಮೊಟ್ಟಮೊದಲ ರೈಲ್ವೇ ಓವರ್ ಬ್ರಿಡ್ಜ್ ಕಪಿಲೇಶ್ವರ ಮಂದಿರದ ಬಳಿ ನಿರ್ಮಾಣಗೊಂಡು ಸೆವೆಗೆ ಸಮರ್ಪಣೆಯಾದ ಬಳಿಕ ಈಗ ಎರಡನೇ ಓವರ್ ಬ್ರಿಡ್ಜ್ ಕಾಮಗಾರಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಹಳೆ ಪಿಬಿ ರಸ್ತೆಯ ಬಾಜಿ ಮಾರ್ಕೇಟ್ ಬಳಿ ಓವರ್ ಬ್ರಿಡ್ಜ್ ಕಾಮಗಾರಿಗೆ ಬೆಳಗಾವಿ ಸಂಸದ ಸುರೇಶ ಅಂಗಡಿ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಸುಮಾರು ೨೫.೦೪ ಕೋಟಿ ವೆಚ್ಚದಲ್ಲಿ ಬರುವ ಮೇ ತಿಂಗಳ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯಲಿದೆ. …

Read More »

ಪಾರ್ಕಿಂಗ್ ಸ್ಥಳವಾಯ್ತು ಮೋಡಕಾ ಬಝಾರ್

ಬೆಳಗಾವಿ- ಬೆಳಗಾವಿ ನಗರದ ಖಂಜರ್ ಗಲ್ಲಿಯಲ್ಲಿನ ಗುಜ್ಜರಿ ಅಂಗಡಿಗಳನ್ನು ತೆರವು ಮಾಡಿ ನಂತರ ಉದ್ಭವಿಸಿದ ನಕಲಿ ಗೋರಿಯನ್ನು ತೆಗೆದು ಬರೊಬ್ಬರಿ ಎರಡು ವರ್ಷಗಳು ಗತಿಸಿವೆ ಆದರೂ ಪಾಲಿಕೆ ಅಧಿಕಾರಿಗಳು ಈ ಸ್ಥಳದಲ್ಲಿ ಪಾರ್ಕಿಂಗ್ ಶುರು ಮಾಡದೇ ಇರುವದರಿಂದ ಗುಜ್ಜರಿ ವ್ಯಾಪಾರಿಗಳು ಪಾರ್ಕಿಂಗ್ ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ವಿಷಯದಲ್ಲಿ ಯಾರ ಮರ್ಜಿ ಕಾಯುತ್ತಿದ್ದಾರೆ ಗೊತ್ತಿಲ್ಲ ಖಂಜರ ಗಲ್ಲಿಯ ಪಾರ್ಕಿಂಗ್ ಸ್ಥಳ ಈಗ ಬೇ ವಾರಸಾ ಅಂದ್ರೆ …

Read More »

ಬೆಳಗಾವಿಯಲ್ಲಿ, ಮೌಂಸ ಸಾಗಿಸುತ್ತಿದ್ದ ಟಾಟಾ ಎಸ್ ಗೆ ಬೆಂಕಿ

ಬೆಳಗಾವಿ- ಬೆಳಗಾವಿಯಿಂದ ಕಣಬರ್ಗಿ ಕಡೆಗೆ ಮೌಂಸ ಸಾಗಿಸುತ್ತಿದ್ದ ಟಾಟಾ ಎಸ್ ವಾಹನಕ್ಕೆ ಕೆಲವು ಕಿಡಗೇಡಿಗಳು ಬೆಂಕಿ ಹಚ್ವಿದ ಘಟನೆ ಬೆಳಗಾವಿಯ ಅಟೋನಗರದ ಬಳಿ ನಡೆದಿದೆ ಬೆಳಗಾವಿಯದ ಕಣಬರ್ಗಿಯ ಕಡೆಗೆ ಹೊರಟಿದ್ದ ಟಾಟಾ ಎಸ್ ವಾಹನ ಅಟೋನಗರದ ಬಳಿ ಹೊತ್ತಿ ಉರಿದಾಗ ಅದನ್ನು ಆರಿಸಲು ಕೆಲವರು ಪ್ರಯತ್ನಿಸಿದ್ದಾರೆ ಆದರೆ ವಾಹನದಲ್ಲಿ ಮೌಂಸ ಇರುವದನ್ನು ನೋಡಿ ದೂರ ಸರಿದಿದ್ದಾರೆ ಮೌಂಸದಿಂದ ತುಂಬಿಕೊಂಡಿದ್ದ ಟಾಟಾ ಎಸ್ ವಾಹನದ ಮುಂಬಾಗ ಸುಟ್ಟಿದೆ ಮೌಂಸವೂ ಬೆಂಕಿಗಾಹುತಿಯಾಗಿದೆ ವಾಹನದಲ್ಲಿದ್ದ …

Read More »

ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಬೆಳಗಾವಿಗೆ ಬೋಯಿಂಗ್..ಸುರೇಶ ಅಂಗಡಿ ಪ್ಲ್ಯಾನಿಂಗ್

ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ಧಾಣದ  ಅಭೀವೃದ್ಧ  ಕಾಮಗಾರಿ  ಭರದಿಂದ ನಡೆದಿದೆ ಮಾರ್ಚ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ.ಇನ್ನೆರಡು ದಿನದಲ್ಲಿ ಕಾಮಗಾರಿಯನ್ನು ಪರಶೀಲಿಸಿ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಕಾಲಮಿತಿಯಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮುಗಿಸುವಂತೆ ವಿಮಾಣ ಯಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವದು ಎಂದು ಸಂಸದ ಸುರೇಶ ಅಂಗಡಿ ಬೆಳಗಾವಿ ಸುದ್ಧೀ ಡಾಟ್ ಕಾಮ್ ಗೆ ತಿಳಿಸಿದ್ದಾರೆ ಮಾರ್ಚ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ …

Read More »