Breaking News

Breaking News

5 ಲಕ್ಷ ₹ ಡಿಮ್ಯಾಂಡ್ ಮಾಡಿದ ಇಬ್ಬರು ಸೆಟಲ್ಮೆಂಟ್ ಗಿರಾಕಿಗಳು ಅರೆಸ್ಟ್

ಬೆಳಗಾವಿ-ಎಸಿಬಿ ಅಧಿಕಾರಿ ಎಂದು ಧಮಕೀ ಹಾಕಿ,ಐದು ಲಕ್ಷ ರೂ ಡಿಮ್ಯಾಂಡ್ ಮಾಡಿದ ಇಬ್ಬರು ಖಿಲಾಡಿಗಳನ್ನು ಬಂಧಿಸುವಲ್ಲಿ ಬೈಲಹೊಂಗಲ ಪೋಲೀಸರು ಯಶಸ್ವಿಯಾಗಿದ್ದಾರೆ. ಬೈಲಹೊಂಗಲದ ಕೃಷಿ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿ ನಾನು ಎಸಿಬಿ ಅಧಿಕಾರಿ ಮಾತಾಡೋದು,ನೀನು ಬೆಳಗಾವಿಯಲ್ಲಿ ಬಹಳ ಆಸ್ತಿ ಮಾಡಿದ್ದೀಯಾ,ನಾಳೆ ದೊಡ್ಡ ಪ್ರಾಬ್ಲಂ ಆಗುತ್ತೆ,ಐದು ಲಕ್ಷ ರೂ ಕೊಟ್ಟು ಸೆಟಲ್ಮೆಂಟ್ ಮಾಡಕೋ ಎಂದು ಧಮಕಿ ಹಾಕಿದ ಇಬ್ಬರು ಸೆಟಲ್ಮೆಂಟ್ ಗಿರಾಕಿಗಳನ್ನು ಬೈಲಗೊಂಗಲ ಪೋಲೀಸರು ಜೈಲಿಗೆ ಕಳಿಸಿ ಪರ್ಮನೆಂಟ್ ಸೆಟಲ್ಮೆಂಟ್ ಮಾಡಿಸಿದ್ದಾರೆ. ಆರೋಪಿತರಾದ …

Read More »

ಟೋಪಿಗೂ ಮಾಸ್ಕ್ ಹಾಕಿ,ಬಸ್ ಏರಿ, ಟೋಲ್ ದಾಟಿದ ವಾಟಾಳ್…..!

ಬೆಳಗಾವಿ-ಬೆಳಗಾವಿಯ ಸಮಸ್ಯೆಗಳ ಕುರಿತು ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಹಿರೇಬಾಗೇವಾಡಿ ಟೋಲ್ ಬಳಿ ಪೋಲೀಸರ ವಶವಾಗುತ್ತಿದ್ದ ವಾಟಾಳ್ ನಾಗರಾಜ್ ಈ ಬಾರಿ ಪೋಲೀಸರ ಕಣ್ಣು ತಪ್ಪಿಸಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತಲುಪುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರತಿ ಬಾರಿ ಕಾರಿನಲ್ಲಿ ಬೆಳಗಾವಿಗೆ ಬರುವಾಗ ಹಿರೇಬಾಗೇವಾಡಿ ಟೋಲ್ ನಾಕಾದ ಬಳಿ ಪೋಲೀಸರ ಕೈಗೆ ಸಿಗುತ್ತಿದ್ದ ವಾಟಾಳ್ ನಾಗರಾಜ್ ಈ ಬಾರಿ ಧಾರವಾಡದವರೆಗೆ ಕಾರಿನಲ್ಲಿ ಬಂದು ಧಾರವಾಡದಲ್ಲಿ ವೇಷ ಬದಲಾಯಿಸಿ ಕಾರಿನಿಂದ ಇಳಿದು ಬಸ್ ಏರಿ …

Read More »

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ,ರೈತರ ಪ್ರತಿಭಟನೆ

ಬೆಳಗಾವಿಯಲ್ಲಿ ಪ್ರತಿಭಟನೆಗಳ ಮಹಾಪೂರ…. ಬೆಳಗಾವಿ- ಅತ್ತ ಬೆಂಗಳೂರಿನಲ್ಲಿ ವಿಧಾನಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಇತ್ತ ಬೆಳಗಾವಿಯಲ್ಲಿ ಪ್ರತಿಭಟನೆಗಳು ಜೋರಾಗಿಯೇ ನಡೆಯುತ್ತಿವೆ. ಬೆಳಗಾವಿ ಸಮೀಪದ ಸಾಂಬ್ರಾ ಗ್ರಾಮದಲ್ಲಿ ಸರ್ಕಾರಿ ಗಾಯರಾಣದ ಜಾಗೆಯಲ್ಲಿ ಗ್ರಾಮ ಪಂಚಾಯತಿ ಯವರು ಕಚರಾ ಡಿಪೋ ಮಾಡಲು ಹೊರಟಿರುವದನ್ನು ವಿರೋಧಿಸಿ ಗ್ರಾಮದ ರೈತರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚರಾ ಡಿಪೋಗೆ ತೀವ್ರ ವಿರೋಧ ವ್ಯೆಕ್ತ ಪಡಿಸಿದರು. ಸಾಂಬ್ರಾ ಗ್ರಾಮದ ರೈತರ ಜಮೀನನ್ನು ಈಗಾಗಲೇ ಏರ್ ಫೋರ್ಸ್ …

Read More »

ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ,ಕ್ರಾಂತಿವೀರ ರಾಯಣ್ಣ

ಬೆಳಗಾವಿ-ಮನೆಗೊಬ್ಬ ರಾಯಣ್ಣ,ಮತ್ತೆ ಹುಟ್ಟಿ ಬಾರಣ್ಣಾ,ಮನೆಗೊಬ್ಬ ಚೆನ್ನಮ್ಮ ಮತ್ತೆ ಹುಟ್ಟಿ ಬಾರಮ್ಮ,ಎಂಬ ಘೋಷವಾಕ್ಯ ಈಗ ನಿಜವಾಗುತ್ತಿದೆ,ಯಾಕಂದ್ರ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಈಗ ಅಭಿಮಾನದ ಕ್ರೇಜ್ ಶುರುವಾಗಿದೆ‌. ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನುಷ್ಠಾನಗೊಳಿಸಿದ ಬಳಿಕ,ರಾಯಣ್ಣನ ಅಭಿಮಾನಿಗಳ ಹೃದಯದಿಂದ ಅಭಿಮಾನ ಸೆಲೆ ಹೊರ ಹೊಮ್ನುತ್ತಲೇ ಇದೆ. ಯುವಕರು ಚಿತ್ರ ರಂಗದ ನಟ,ನಟಿಯರ ಟ್ಯಾಟು ಬಿಡಿಸಿಕೊಂಡು ತಮ್ಮ ಅಭಿಮಾನ ವ್ಯೆಕ್ತ ಪಡಿಸಿದ್ದನ್ನು ನಾವೆಲ್ಲ ನೋಡಿದ್ದೇವೆ,ಆದ್ರೆ ಈಗ ಬೆಳಗಾವಿ ಸಮೀಪದ ಮಾರ್ಕಂಡೇಯ ನಗರದ …

Read More »

ಬೆಳಗಾವಿಯಲ್ಲೇ ಉದಯವಾಗಿದೆ RCB….!

ಬೆಳಗಾವಿ-ಈಗ ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ ಗಡಿ ಭಾಗದ ಬೆಳಗಾವಿಯಲ್ಲಿ IPL ನಶೆ ಯಾವ ರೀತಿ ಏರಿದೆ ಅಂದ್ರೆ RCB ರಾಯಲ್ ಚಾಲೇಂಜ್ ಬೆಂಗಳೂರು ತಂಡದ ಹೆಸರಿನಲ್ಲಿ ಧಾಬಾ ಶುರುವಾಗಿದೆ ಈ RCB ಧಾಭಾ ಶುರುವಾಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಗ್ರಾಮದ ಬಳಿ ಸದಲಗಾ ರಸ್ತೆಯಲ್ಲಿ, ಈ RCB ಧಾಬಾ IPL ಮ್ಯಾಚ್ ಗಳು ಶುರುವಾದ ದಿನವೇ ಉದ್ಘಾಟನೆಯಾಗಿದೆ. ಕರ್ನಾಟಕದ ಪರವಾಗಿ ಆಟವಾಡುವ RCB ತಂಡ ಈ ಬಾರಿ …

Read More »

ಬೆಳಗಾವಿಯ ಹಳ್ಳಿಗೊಂದು ಫಾರೇನ್ ಲುಕ್….!

ಬೆಳಗಾವಿ- ಹತ್ತು ಸಾವಿರ ಜನಸಂಖ್ಯೆವುಳ್ಳ ಬೆಳಗಾವಿ ಮಹಾನಗರದ ಪಕ್ಕದಲ್ಲಿರುವ, ಪುಟ್ಟ ಹಳ್ಳಿಯೊಂದಕ್ಕೆ ಫಾರೇನ್ ಲುಕ್ ಕೊಡಲು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಯೋಜನೆ ರೂಪಿಸಿದ್ದಾರೆ. ಈ ಸೌಭಾಗ್ಯ ಬೆಳಗಾವಿ ಮಹಾನಗರದ ಮಡಿಲಲ್ಲಿರುವ ಯರಮನಾಳ ಗ್ರಾಮಕ್ಕೆ ಒದಗಿ ಬರಲಿದೆ. ಈ ಗ್ರಾಮದಲ್ಲಿ ಈಗಾಗಲೇ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾಲ್ಕು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ,ಈ ಗ್ರಾಮದಲ್ಲಿ 100% ಚರಂಡಿ ಇದೆ,ಕಾಂಕ್ರೀಟ್ ರಸ್ತೆಗಳು ಇವೆ,ಜೊತೆಗೆ …

Read More »

ಸನದಿ ಸಾಹಿತ್ಯ ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ

ಬೆಳಗಾವಿ: ಬೆಳಗಾವಿಯ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಮಟ್ಟದ ‘ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ’ಗೆ 2019 ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಸ್ವರಚಿತ ಕವನ ಸಂಕಲನಗಳನ್ನು ಆಹ್ವಾನಿಸಿದೆ. ಕವನ ಸಂಕಲನ ಕನಿಷ್ಟ 50 ಪುಟ ಹೊಂದಿದ್ದು, ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಿರಬೇಕು. ಈ ಪ್ರಶಸ್ತಿ ಉದಯೋನ್ಮೂಖ ಬರಹಗಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ನೀಡುತ್ತಿರುವದರಿಂದ 35 ವರ್ಷ ಒಳಗಿರುವವರು ಕೃತಿ ಕಳಿಸಬೇಕು. ಪ್ರಶಸ್ತಿ 5000 /ರೂ ನಗದು, …

Read More »

ನದಿಗಳ ಒತ್ತುವರಿ ತೆರವು ಮಾಡಲು ಆಪರೇಷನ್ ಆರಂಭ

ಬೆಳಗಾವಿ, ಸೆ.19(ಕರ್ನಾಟಕ ವಾರ್ತೆ): ಮಲಪ್ರಭಾ, ಘಟಪ್ರಭಾ ನದಿತೀರದ ಒತ್ತುವರಿ ಪ್ರವಾಹಕ್ಕೆ ಕಾರಣವಾಗಿದೆ. ಆದ್ದರಿಂದ ನದಿತೀರದ ಒತ್ತುವರಿ ಕುರಿತು ಸಮಗ್ರ ಸಮೀಕ್ಷೆ ಕೈಗೊಂಡ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಸಮಸ್ಯೆಗಳ ನಿವಾರಣೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು. ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಒತ್ತುವರಿ ಜಾಗದ ಸಮಸ್ಯೆಗಳ ಕುರಿತು ಸುವರ್ಣ ವಿಧಾನ ಸೌಧದಲ್ಲಿ ಶನಿವಾರ ನಡೆದ …

Read More »

ಯುನಿವರ್ಸಿಟಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ತು ಲ್ಯಾಪ್ ಟಾಪ್….

ರಾಚವಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ———————————————————— ವಿವಿ ದಶಮಾನೋತ್ಸವ-ಪದವಿ ವಂಚಿತರಿಗೆ ಸುವರ್ಣಾವಕಾಶ: ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಬೆಳಗಾವಿ,-: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ/ಪಂಗಡಗಳ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ವಿತರಿಸಿದರು. ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಶನಿವಾರ(ಸೆ.19) ನಡೆದ ಸಮಾರಂಭದಲ್ಲಿ ಲ್ಯಾಪ್‌ಟಾಪ್ ಗಳನ್ನು ನೀಡಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ …

Read More »

ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ- ಸತೀಶ್ ಜಾರಕಿಹೊಳಿ

ಬೆಳಗಾವಿ: ಮದ್ಯಂತರ ಅಧಿವೇಶನ ಬೆಳಗಾವಿಯಲ್ಲಿ ನಡೆಸಲು ಸರ್ಕಾರದ ಬಳಿ ಇಚ್ಚಾಶಕ್ತಿಯ ಕೊರತೆ ಕಾಣುತ್ತಿದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿ ಅಧಿವೇಶನ ನಡೆದರೆ ಈ ಭಾಗದ ಹಲವು ಸಮಸ್ಯೆಗಳ ಇತ್ಯರ್ಥ ವಾಗುತ್ತವೆ ಇಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ ಅಲ್ಲದೇ ರಾಜ್ಯಪಾಲರ ಭಾಷಣ ಸುವರ್ಣಸೌಧದಲ್ಲಿ ನಡೆಯಬೇಕು. ವರ್ಷದಲ್ಲಿ ಒಮ್ಮೆಯಾದರೂ ಸಚಿವ ಸಂಪುಟ ಸಭೆ ಕರೆಯಬೇಕು …

Read More »
Sahifa Theme License is not validated, Go to the theme options page to validate the license, You need a single license for each domain name.