Breaking News
Home / Breaking News (page 400)

Breaking News

ಮಠಗಳ ಸೇವೆ ಅಮೋಘ – ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ-ಮಠಗಳ ಧಾರ್ಮಿಕ ಶೈಕ್ಷಣಿಕ ,ಸಾಮಾಜಿಕ ಸೇವೆ ಅಮೋಘವಾಗಿದ್ದು ಮಠಗಳು ಇಲ್ಲದೇ ಹೋಗಿದ್ದರೆ ಸಮಾಜ ದಾರಿ ತಪ್ಪಿ ಅನಾಗರಿಕತೆ ತಾಂಡವಾಡುತ್ತಿತ್ತು ಮಠಗಳ ಸೇವೆಯಿಂದ ಸರ್ಕಾರದ ಜವಾಬ್ದಾರಿಯೂ ಕಡಿಮೆಯಾಗಿದೆ ಪ್ರಸ್ತುತ ಸಮಾಜದಲ್ಲಿ ಬೆಳವಣಿಗೆಯಲ್ಲಿ ಮಕ್ಕಳಲ್ಲಿ ಸಂಸ್ಕಾರದ ಜೊತೆಗೆ ಸಮಾಜ ಸೇವೆ ದೇಶ ಭಕ್ತಿಯನ್ನು ಬಿತ್ತಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು ಶನಿವಾರ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಸುವಿಚಾರ ಚಿಂತನ-12 ಬೆಳಗಾವಿ …

Read More »

ಬೆಳಗಾವಿ ಜಿಲ್ಲೆಗೆ ಕೇಂದ್ರದ ಬರ ಅದ್ಯಯನ ತಂಡ ಭೇಟಿ

ಬೆಳಗಾವಿ : ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ ಮುಂಗಾರು ಬೆಳೆಹಾನಿ ಆಗಿರುವ ಕುರಿತು ಒಂದು ವಾರದೊಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಪಶು ಸಂಗೋಪನೆ ಇಲಾಖೆಯ ನಿರ್ದೇಶಕ ಮಹೇಶ್ ಹೇಳಿದರು. ಅವರು ಶನಿವಾರ ಜಿಲ್ಲೆಗೆ ಭೇಟಿ ನೀಡಿದ್ದ ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿ ಕ್ರಾಸ್ ಬಳಿಯ ಹೊಲದಲ್ಲಿ ಹಾನಿಗೊಳಗಾಗಿರುವ ಹತ್ತಿ ಮತ್ತು ಸೂರ್ಯಕಾಂತಿ ಬೆಳೆಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೆಳೆಹಾನಿ …

Read More »

ಶಬರಿಮಲೆ ತೀರ್ಪು ಮರು ಪರಶೀಲನೆಗೆ ಅಯ್ಯಪ್ಪನ ಭಕ್ತರ ಆಗ್ರಹ

ಬೆಳಗಾವಿ : ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವಂತೆ ನೀಡಿರುವ ಸುಪ್ರಿಂ ತೀರ್ಪುನ್ನು ಮರುಪರಿಶೀಲನೆ ನಡೆಸುವಂತೆ ಒತ್ತಾಯಿಸಿ ಹಿಂದೂಪರ ವಿವಿಧ ಸಂಘಟನೆಗಳು ಹಾಗೂ ಬೆಳಗಾವಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ನೇತೃತ್ವದಲ್ಲಿ  ಶನಿವಾರ  ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಾಧೀಶರಿಗೆ ಮನವಿ ಸಲ್ಲಿಸಿದರು. ಐತಿಹಾಸಿಕ ಹಿನ್ನೆಲೆಯುಳ್ಳ ಶಬರಿಮಲೆ ದೇವಸ್ಥಾನದಲ್ಲಿ 10ರ ವಯಸ್ಸಿನೊಳಗೆ ಹಾಗೂ 50 ವಯಸ್ಸು ಮೇಲ್ಪಟ್ಟ ಮಹಿಳರನ್ನು ಹೊರತುಪಡಿಸಿ,  ಮಹಿಳೆಯರಿಗೆ ಪ್ರವೇಶ ನಿಷೇಧಿಸಿದರುವುದು ಪಾರಂಪರಿಕವಾಗಿದೆ. …

Read More »

ಐದು ವರ್ಷದಲ್ಲಿ 20 ಸಾವಿರ ಹುದ್ದೆ ಭರ್ತಿ- ಪರಮೇಶ್ವರ

ಬೆಳಗಾವಿ 362 ಪ್ರಶಿಕ್ಷಣಾರ್ಥಿಗಳು 40 ಕ್ಕೂ ಹೆಚ್ಚು‌ ಮಹಿಳೆಯರು 9 ತಿಂಗಳು ತರಬೇತಿ ಪಡೆದು ಸೇವೆಗೆ ಸಿದ್ಧರಾಗಿರುವದು ಪ್ರಮುಖ ವಾಗಿದ್ದು ಎಲ್ಲ ಸವಾಲುಗಳನ್ನು ಎದುರಿಸಲು ಸನ್ನಧ್ಧರಾಗಬೇಕೆಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಯಾವುದೇ ಸಂದರ್ಭದಲ್ಲಿ ರಾಜ್ಯದ ನಾಡು, ನುಡಿ, ಜಲದ ಹಿತ ಕಾಪಾಡುವುದರಲ್ಲಿ ಕರ್ನಾಟಕ ಪೊಲೀಸ್ ಬಹಳ ಸಾಧನೆ ಮಾಡಿದೆ. ಪ್ರಶಿಕ್ಷಣಾರ್ಥಿಗಳಿಗೆ ಹಿರಿಯ ಪೊಲೀಸ್ …

Read More »

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶಾಸಕ ಅಭಯ ಪಾಟೀಲರಿಂದ ಒನ್ ಪಾಯಿಂಟ್ ಅಜೆಂಡಾ….!!!

ಬೆಳಗಾವಿ- ಉತ್ತರ ಕರ್ನಾಟಕ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತ ವಾಗಿದ್ದು ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯ ಹಿತದೃಷ್ಠಿಯಿಂದ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಒತ್ತಾಯಿಸಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಆರೋಗ್ಯ,ಶಿಕ್ಷಣ,ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ತಾರತಮ್ಯ ನಿವಾರಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತ್ಯೇಕ ವಾಗಿ ಕೃಷಿ ಬಜೆಟ್ ಮಂಡಿಸಿದ …

Read More »

ರೈತರಿಂದ‌ ವಿಭಿನ್ನ, ವಿಶಿಷ್ಟ ಪ್ರತಿಭಟನೆ ಡಿಸಿ ಕಚೇರಿ ಎದುರು ಸ್ನಾನ…ತೆಲೆ ಮೇಲೆ ಕಲ್ಲು…ಕಣ್ಣೀರು…!!!?

ಬೆಳಗಾವಿ-ಕಬ್ಬಿನ ಎಫ್ ಆರ್ ಪಿ ದರವನ್ನು ಕಾರ್ಖಾನೆಗಳಿಂದ ಖಾತ್ರಿಪಡಿಸಬೇಕು ಕಬ್ಬಿನ ಬಾಕಿ ಬಿಲ್ ಕೊಡದ ಕಾರ್ಖಾನೆಗಳನ್ನು ಬಂದ್ ಮಾಡಬೇಕು ಎಂದು ರೈತರು ನಿನ್ನೆಯಿಂದ ಆರಂಭಿಸಿರುವ ಧರಣಿ ಅಹೋ ರಾತ್ರಿ ನಡೆದು ಬೆಳಿಗ್ಗೆ ವಿಭಿನ್ನ ವಿಶಿಷ್ಟ ಸ್ವರೂಪ ಪಡೆದುಕೊಂಡಿದೆ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ರೈತರು ಸ್ನಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು ಅಹೋರಾತ್ರಿ ಧರಣಿ ನಡೆಸಿದ್ದ ರೈತರು ಡಿಸಿ ಕಚೇರಿಯ ಮುಂಭಾಗದಲ್ಲಿರುವ ನಳದಲ್ಲಿ ಸ್ನಾನ ಮಾಡುವ ಮೂಲಕ ತಮ್ಮ …

Read More »

ತಾಸುಗಟ್ಟಲೆ ಭಾಷಣ ಬಿಗಿದವರು ಮನೆಗೆ…ಭಾಷಣ ಕೇಳಿದವರು ಕೊರೆಯುವ ಚಳಿಗೆ…..!!!!

ಬೆಳಗಾವಿ: ನಗರದಲ್ಲಿ ಇಂದು ಬೆಳಗ್ಗೆಯಿಂದಲೇ ರೈತರನ್ನು ಹುರುದುಂಬಿಸಿ ತಾಸು ಗಂಟೆ ರೈತರ ಪರವಾಗಿ ಭಾಷಣ ಮಾಡಿ ಗಂಟಲು ಹರಿದುಕೊಂಡು ಕಬ್ಬಿನ ಬಾಕಿ ಬಿಲ್ ಕೊಡಲೇಬೇಕು ಎಂದು ಪುಕಾರು ಹಾಕಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಣೆ ಮಾಡಿದ ರೈತ ನಾಯಕರು ಅಹೋರಾತ್ರಿ ಧರಣಿಯಲ್ಲಿ ಮುಗ್ದ ರೈತರನ್ನು ಕೊರೆಯುವ ಚಳಿಯಲ್ಲಿ ಬಿಟ್ಟು ಪಲಾಯನಗೈದಿದ್ದಾರೆ‌. ಪ್ರಸಕ್ತಸಾಲಿನ ಕಬ್ಬಿನ ದರವನ್ನು ನಿಗದಿ ಮಾಡಬೇಕು ಹಾಗೂ ಎಫ್ ಆರ್ ಪಿ ದರ ಕೊಡಿಸಬೇಕು. ಕಬ್ಬಿನ ಬಾಕಿ ಬಿಲ್ …

Read More »

ಡಿಸೆಂಬರ್ 10 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10ರಿಂದ 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಹತ್ತು ದಿನಗಳ ಕಲಾಪ ನಡೆಸಲು ತೀರ್ಮಾನಿಸಲಾಗಿದ್ದು ಮುಂದಿನ ಸೋಮವಾರ ನಡೆಯುವ ಸಚಿವ ಸಭೆಯಲ್ಲಿ ಈ ನಿರ್ಧಾರಕ್ಕೆ ಅಧಿಕೃತ ವಾಗಿ ನಿರ್ಣಯ ದೊರೆಯಲಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ …

Read More »

ಬೆಳಗಾವಿಗೆ ರಾಜಮಾತಾ ಒಡೆಯರ್ ಭೇಟಿ

ಬೆಳಗಾವಿ ಜನಕಲ್ಯಾಣಕ್ಕೆ ರಾಜಕಾರಣ ಅನಿವಾರ್ಯವಲ್ಲ. ರಾಜರಜಾರಣದಿಂದ ದೂರವುಳಿದು ಜನಕಲ್ಯಾಣ ಮಾಡಬಹುದು. ಚುನಾವಣೆಗೆ ಯಾವ ಕಾರಣಕ್ಕೂ ನಾನು ಸ್ಪರ್ಧಿಸುವುದಿಲ್ಲ. ಎಲ್ಲ ಪಕ್ಷದವರು ಹದಿನೈದು ವರ್ಷಗಳಿಂದ ಚುನಾವಣೆ ಸಮೀಪಿಸಿದಾಗ ಸಂಪರ್ಕಿಸುತ್ತಾರೆ. ಚುನಾವಣೆ ಸ್ಪರ್ದಿಸಲು ಇಚ್ಚೆ ಇದೆಯಾ ಎಂದು ಕೇಳುತ್ತಾರೆ. ಆದರೆ ನಾನು ಮಾತ್ರ ಚುನಾವಣೆಗೆ ಸ್ಪರ್ದಿಸುವುದಿಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ ಹೇಳಿದರು. ಬುಧವಾರ ಕೆಎಲ್ಇ ಪಿಸಿಯೋಥೆರಪಿ ಕೇಂದ್ರವನ್ನು ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತ‌ನಾಡಿದರು. ಟಿಪ್ಪು ಸುಲ್ತಾನನಿಂದ ನಮ್ಮ ಕುಟುಂಬಕ್ಕೆ ತೊಂದರೆಯಾಗಿದೆ. ನಮ್ಮ ರಾಜ …

Read More »

ಟಿಪ್ಪು ಜಯಂತಿ ಕುರಿತು ಗೊಂದಲ ಬೇಡ- ಜಯಮಾಲಾ

ಬೆಳಗಾವಿ ಟಿಪ್ಪು ಜಯಂತಿ ಆಚರಣೆಯನ್ನು ನಮ್ಮ ರಾಜ್ಯದಲ್ಲಿ ಆಚರಣೆ ಮಾಡದೆ ಬೇರೆ ಎಲ್ಲಿ ಆಚರಣೆ ಮಾಡಬೇಕು ? ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಜಯಮಾಲ ಪ್ರಶ್ನಿಸಿದರು. ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಬ್ರಿಟಿಷ್ ರ ವಿರುದ್ದ ಹೋರಾಟ ಮಾಡಿದ ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಣೆ ಮಾಡಲು ಕೆಲವರು ವಿರೋಧ ಮಾಡುತ್ತಿದ್ದಾರೆ‌. ಚರಿತ್ರೆಯಲ್ಲಿ ರಾಜ್ಯ ಬಾರ ಮಾಡುವಾಗವ ಕೆಲವರ ಹತ್ಯೆಮಾಡಿ ಮಾಡಿದ್ದಾರೆ. ಇದೊಂದು ಚರ್ಚೆಯಾಗುವುದುದಾದರೆ …

Read More »