Breaking News
Home / Breaking News (page 430)

Breaking News

ಬೆಳಗಾವಿ ದಕ್ಷಿಣ …ಅಭಯ ಪಾಟೀಲರಿಂದ ಅಭಿವೃದ್ಧಿಯ ಅಭಿಯಾನ…!!!

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನಾಲ್ಕು ಘಂಟೆಗಳ ಕಾಲ ಸುತ್ತಾಡಿ ಸಮಸ್ಯೆ ಆಲಿಸಿದ ಶಾಸಕ ಅಭಯ ಪಾಟೀಲ ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರ ಕಳೆದ ಐದು ವರ್ಷಗಳಿಂದ ವಂಚಿತವಾಗಿತ್ತು ಆದರೆ ಅಭಯ ಪಾಟೀಲ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಅಭಿಯಾನ ನಡೆಸಿದ್ದಾರೆ ಗುರುವಾರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಬೆಳಿಗ್ಗೆ 8 ಘಂಟೆಯಿಂದ ಮಧ್ಯಾಹ್ನ ಹನ್ನೆರಡು ಘಂಟೆಯವರೆಗೆ ವಡಗಾಂವ,ಖಾಸಬಾಗ ಹಾಗು ಶಹಾಪೂರ …

Read More »

ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿದ್ದು ಯಾಕೆ ಗೊತ್ತಾ…?

ಬೆಳಗಾವಿ – ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಘಟಾನುಘಟಿ ಕಾಂಗ್ರೆಸ್ ಅಭ್ಯರ್ಥಿಗಳನ್ಮು ಸೋಲಿಸಿದವರ್ಯಾರು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ ಆದ್ರೆ ಸೋಲು ಅನುಭವಿಸಿದವರು ಸೋಲಿಸಿದ ನಾಯಕರ ಹೆಸರನ್ನು ಬಹಿರಂಗವಾಗಿ ಹೇಳದೇ ರಾಹುಲ್ ಗಾಂಧಿ ಅವರಿಗೆ ಲಿಖಿತ ದೂರು ನೀಡಿ ನಮ್ಮನ್ನು ಸೋಲಿಸಿದವರಿಗೆ ಸಚಿವ ಸ್ಥಾನ ನೀಡೀದ್ರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ದೂರು ಕೊಟ್ಟ ಹಿನ್ನಲೆಯಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವದು ಸತ್ಯ ಸಂಗತಿಯಾಗಿದೆ …

Read More »

ಮಂತ್ರಿ ಆಗಿಲ್ಲ ಅಂತಾ ಸುಮ್ಮನೇ ಕೂರುವ ಜಾಯಮಾನ ನನ್ನದಲ್ಲ

ಬೆಳಗಾವಿ-ಹಿರಿಯರು ಮಂತ್ರಿ ಮಾಡ್ತೀವಿ ಅಂತ ಹೇಳಿದ್ರು ಯಾಕೋ..? ಏನೋ ..? ಕೊನೆ ಘಳಿಗೆಯಲ್ಲಿ ಮಂತ್ರಿ ಸ್ಥಾನ ತಪ್ಪಿತು ಆದ್ರೆ ಮಂತ್ರಿ ಸ್ಥಾನ ತಪ್ಪಿದೆಯಂತ ಸುಮ್ಮನೇ ಕೂರುವ ಜಾಯಮಾನ ನನ್ನದಲ್ಲ ಕ್ಷೇತ್ರದ ಜನರಿಗೆ ಬಹಳಷ್ಟು ಭರವಸೆ ಕೊಟ್ಟಿದ್ದೀನಿ ಮಂತ್ರಿ ಆಗಿದ್ದರೆ ಅದನ್ನು ಈಡೇರಿಸಲು ಸಾದ್ಯ ಆಗುತ್ತಿರಲಿಲ್ಲ ಕೊಟ್ಟ ಭರವಸೆಗಿಂತಲೂ ದುಪ್ಪಟ್ಟು ಕೆಲಸ ಮಾಡಿ ತೋರೀಸ್ತೀನಿ ಅಂತಾ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಮ್ಮ ಅಸಮಾಧಾನ ಹೊರ ಹಾಕುವದರ ಜೊತೆಗೆ …

Read More »

ಸತೀಶ್ ಗೆ ತಪ್ಪಿದ ಸಚಿವ ಸ್ಥಾನ ಬೆಂಬಲಿಗರಿಂದ ರಾಜೀನಾಮೆ ಬೆದರಿಕೆ

ಬೆಳಗಾವಿ- ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಅವರ ಬಬಲಿಗ ಜಿಲ್ಲಾ ಪಂಚಾಯ್ತಿ ಸದಸ್ಯರು ತಾಪಂ ಸದಸ್ಯರು ಎಪಿಎಂಸಿ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯ್ತಿಯ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ್ ಕಟಾಂಬ್ಳೆ ನೇತ್ರತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸತೀಶ್ ಜಾರಕಿಹೊಳಿ ಬೆಂಬಲಿಗರು ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತೇವೆ ಎಂದು …

Read More »

ಚನ್ನಮ್ಮ ವೃತ್ತದಲ್ಲಿ ಸತೀಶ್ ಬೆಂಬಲಿಗರಿಂದ ಬಸ್ಸಿನ ಮೇಲೆ ಕಲ್ಲು ತೂರಾಟ

ಬೆಳಗಾವಿ- ಭವಿಷ್ಯ ದಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಸತೀಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಡಿರುವ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಬೆಳಗಾವಿಯಲ್ಲಿ ತೀವ್ರ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ ಬೆಳಿಗ್ಗೆ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೇಲೆ ದಾಳಿ ಮಾಡಿ ಬ್ಯಾನರ್ ಹರಿದು ಹೂವಿನ ಕುಂಡೆ ಒಡೆದು ಆಕ್ರೋಶ ವ್ಯೆಕ್ತಪಡಿಸಿದ ಬೆನ್ನಲ್ಲಿಯೇ ವಾಲ್ಮೀಕಿ ಸೇನೆಯ ಕಾರ್ಯಕರ್ತರು …

Read More »

ಸತೀಶ್ ರಮೇಶ್ ಜಾರಕಿಹೊಳಿಗಿಂತ ಪಕ್ಷ ದೊಡ್ಡದು – ರಮೇಶ್ ಜಾರಕಿಹೊಳಿ

ಬೆಳಗಾವಿ -ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಅವರ ಬೆಂಬಲಿಗರು ಇಂದು ಮಧ್ಯಾಹ್ನ ಅದ್ಧೂರಿಯಾಗಿ ಬರಮಾಡಿಕೊಂಡ್ರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದ ಜನರ ನಿರೀಕ್ಷೆಯಂತೆ ಸಮ್ಮೀಶ್ರ ಸರ್ಕಾರ ಕೆಲಸ ಮಾಡಲಿದೆ. ಸತೀಶ ಜಾರಕಿಹೊಳಿ ಅಸಮಾಧಾನ ವಿಚಾರ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರ ಬೇಕು. ಆದರೇ ಸಂದರ್ಭಕ್ಕೆ ಅನುಸಾರವಾಗಿ ತ್ಯಾಗ ಮನೋಭಾವ ಇರಬೇಕು.ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು ಯಾರಾದ್ರು ಮಧ್ಯಸ್ಥಿಕೆ ವಹಿಸಿದ್ರೆ ಸತೀಶಗೆ ಸಚಿವ ಸ್ಥಾನ ಬಿಟ್ಟು‌ಕೊಡಲು …

Read More »

ಸತೀಶ ಜಾರಕಿಹೊಳಿಗೆ ಕೈ ತಪ್ಪಿದ ಸಚಿವ ಸ್ಥಾನ ಬೆಂಬಲಿಗರ ಅಸಮಾಧಾನ…!!!

ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಸತೀಶ ಬೆಂಬಲಿಗರಿಗೆ ಅಸಮಾಧಾನ ಬೆಳಗಾವಿ: ಸಚಿವ ಸ್ಥಾನ ಕೈ ತಪ್ಪಿದಕ್ಕೆ ಆಕ್ರೋಶಗೊಂಡ ಸತೀನ ಶ ಜಾರಕಿಹೊಳಿ ಬೆಂಬಲಿಗರು ಇಂದು ಕ್ಲಬ್ ರಸ್ತೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿ ಎದುರು ದಾಂದಲೆ ನಡೆಸಿದರು. ಸತೀಶ ಜಾರಕಿಹೊಳಿ ಸಂಸ್ಥಾಪಕ ಅಧ್ಯಕ್ಷರಾಗಿರುವ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮುಗಿಸಿ ಬಳಿಕ ಕಾಂಗ್ರೆಸ್ ಕಚೇರಿಗೆ ತೆರಳಿದರು. ಕಾಂಗ್ರೆಸ್ ಕಚೇರಿ ಎದುರು ಇಟ್ಟಿದ್ದ ಹೂವಿನ ಕುಂಡ ಹಾಗೂ ರಾಷ್ಟ್ರೀಯ, …

Read More »

ನಗರದಲ್ಲಿ ಗಲೀಜು,ಪಾಲಿಕೆ ಅಧಿಕಾರಿಗಳ ವಿರುದ್ಧ ಅಭಯ ಪಾಟೀಲ ಗರಂ…!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ನಗರದ ಇಬ್ಬರು ಶಾಸಕರು ಪಾಲಿಕೆಯಲ್ಲಿ ತುರ್ತು ಸಭೆ ನಡೆಸಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ವಿಭಾಗದ ಅಧಿಕಾರಿಗಳು ಶಾಸಕ ಅಭಯ ಪಾಟೀಲ ಅನಿಲ ಬೆನಕೆ ಹಾಗು ಮೇಯರ್ ಉಪಮೇಯರ್ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಸಭೆಯಲ್ಲಿ ಮಾತನಾಡಿದ ಅಭಯ ಪಾಟೀಲ ಬೆಳಗಾವಿ ನಗರದ ಸ್ವಚ್ಛತೆಗಾಗಿ ಪಾಲಿಕೆ ವತಿಯಿಂದ ಪ್ರತಿ ವರ್ಷ ನಲವತ್ತು …

Read More »

ಅಂತೂ ಇಂತೂ ಬೆಳಗಾವಿಗೆ ಕೆಎಟಿ ಆಗುವ ಕಾಲ ಕೂಡಿ ಬಂತು….!!

ಬೆಳಗಾವಿ- ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಇಂದು ಕೆಎಟಿ ಕಚೇರಿ ಕಟ್ಟಡ ನಿರ್ಮಾಣಕ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಶೀಲಿಸಿ ತಿಂಗಳಲ್ಲಿ ಕಾಮಗಾರಿಯನ್ಬು ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಿದರು ಕರ್ನಾಟಕ ಅಡಳಿತಾತ್ಮಕ ನ್ಯಾಯ ಮಂಡಳಿಯ ಚೇರಮನ್ ಅವರ ಜೊತೆ ಬೆಳಗಾವಿಯ ಕೆಎಟಿ ಕಚೇರಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಕೆಎಟಿ ಕಚೇರಿ ಕಟ್ಟಡದ ವಿಷಯದಲ್ಲಿ ವಿಳಂಬ ಆಗಬಾರದು ತಿಂಗಳ ನಂತರ ಕೆಎಟಿ …

Read More »