Breaking News

ವೀರಭದ್ರ ನಗರ ಶಿವಾಜಿ ನಗರದಲ್ಲಿ ಕಲ್ಲು ತೂರಾಟ ಹಲವರಿಗೆ ಗಾಯ

ಬೆಳಗಾವಿ- ವೀರಭದ್ರ ನಗರದ ಸಾಯಿ ಮಂದಿರ ಹತ್ತಿರದಲ್ಲಿ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಹಲಾವರು ಜನ ಗಾಯಗೊಂಡಿದ್ದು ವಾಹನಗಳು ಜಖಂ ಆಗಿರುವ ಘಟನೆ ನಡೆದಿದೆ ಸಾಯಿ ಮಂದಿರದ ಹತ್ತಿರದಲ್ಲಿ ಮೆರವಣಿಗೆಯ ಮೂಲಕ ಅಲ್ಲಿಯ ಗಣೇಶ ಮೂರ್ತಿಯನ್ನು ಸಾಗಿಸುವ ಸಂಧರ್ಭದಲ್ಲಿ ಕರೆಂಟ್ ಹೋಗಿದೆ ಈ ಸಂಧರ್ಭದಲ್ಲಿ ಕಿಡಗೇಡಿಗಳು ಶಿವಾಜಿ ನಗರ ಮತ್ತು ವೀರಭದ್ರ ನಗರದ ಹಲವು ಕಡೆ ಕಲ್ಲು ತೂರಾಟ ನಡೆಸಿದಾಗ ಜನ ಓಡಾಡಿದ ಪರಿಣಾಮ ಈ ಎರಡೂ ಪ್ರದೇಶಗಳಲ್ಲಿ …

Read More »

ವಿಘ್ನ ನಿವಾರಕನಿಗೆ ಭಕ್ತಿ ಪೂರ್ವಕ ವಿದಾಯ

ಬೆಳಗಾವಿ- ವಿಶಿಷ್ಟ, ವಿಭಿನ್ನ, ಅದ್ದೂರಿ ಗಣೇಶೋತ್ಸವ ಆಚರಣೆಗೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ಕುಂದಾ ನಗರಿಯಲ್ಲಿ ವಿಘ್ನ ನಿವಾರಕ,ವಿನಾಯಕನಿಗೆ ಭಕ್ತಿಪೂರ್ವಕ ವಿದಾಯ ಮಾಡಲಾಯಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಏಕದಂತನಿಗೆ ವಿಶೇಷ ಪೂಜೆ ನೆರವೇರಿಸಿ ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಮೇಯರ್ ಚಿಕ್ಕಲದಿನ್ನಿ ಸಂಸದ ಸುರೇಶ ಅಂಗಡಿ,ಶಾಸಕರಾದ ಅಭಯ ಪಾಟೀಲ ,ಅನೀಲ ಬೆನಕೆ,ಜಿಲ್ಲಾಧಿಕಾರಿ ಬೊಮ್ಮನಹಳ್ಳಿ,ನಗರ ಪೋಲೀಸ್ ಆಯುಕ್ತ ರಾಜಪ್ಪ ,ಪಾಲಿಕೆ ಆಯುಕ್ತ ಶಶಿಧರ ಕುರೇರ,ಜಿಪಂ …

Read More »

ರೆಫೆಲ್ ಹಗರಣ ತನಿಖೆಗೆ ಒತ್ತಾಯಿಸಿ ಕೈ ಪ್ರತಿಭಟನೆ

ಬೆಳಗಾವಿ: ಕೇಂದ್ರ ಸರ್ಕಾರವು ಮಾಡಿರುವ ರಫೇಲ್ ಹಗರಣದ ತನಿಖೆ ಮಾಡುವಂತೆ ಆಗ್ರಹಿಸಿ ಸೆ. ೨೬ ರಂದು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿ ಪಿ.ಸಿ.ಮೋಹನ ತಿಳಿಸಿದರು. ನಗರದ ಕ್ಲಬ್ ರಸ್ತೆಯ ಕಾಂಗ್ರೆಸ್‌ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಹಗರಣ ದೇಶ ರಕ್ಷಣೆಯ ಭಾವನಾತ್ಮಕ  ವಿಚಾರವಾಗಿದೆ. ರಫೇಲ್ ಹಗರಣದಲ್ಲಿ ₹ ೬೦ ಸಾವಿರ ಕೋಟಿ …

Read More »

ವಿಟಿಯು ಅವ್ಯೆವಹಾರ..ಪ್ರೋಫೆಸರ್ ಯೋಗಾನಂದ ಅರೆಸ್ಟ್

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ (ವಿಟಿಯು)ಲ್ಯಾಬ್ ಸಾಧನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿ ಉಪನ್ಯಾಸಕ ಯೋಗಾನಂದ ಎನ್ನುವವರನ್ನು ಬೆಳಗಾವಿ ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮಹೇಶಪ್ಪ ಅವರು ವಿಟಿಯು ಕುಲಪತಿಯಾಗಿದ್ದಾಗ ಲ್ಯಾಬ್ ಸಾಧನ ಖರೀದಿಯಲ್ಲಿ ಆರು ಕೋಟಿ ರೂ. ಅವ್ಯವಹಾರ ನಡೆದಿದೆ. ವಿವಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಈಗಿನ ರಿಜಿಸ್ಟ್ರಾರ್ ಜಗನ್ನಾಥ ಅವರು ಮಹೇಶಪ್ಪ ಸೇರಿ ನಾಲ್ವರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು …

Read More »

ಬೆಳಗಾವಿ ಕಾರ್ಪೋರೇಶನ್ ಇಲೆಕ್ಷನ್ ದಲ್ಲಿ ಸಿಂಬಾಲ್ ಫೈಟ್…..!!!!!

ಬೆಳಗಾವಿ- ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾಷೆ ಆಧಾರಿತ ಫೈಟ್ ಗೆ ಬ್ರೇಕ್ ಬೀಳುವ ಎಲ್ಲ ಲಕ್ಷಣಗಳು ಕಂಡು ಬಂದಿವೆ ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳು ಸಿಂಬಾಲ್ ಆಧಾರಿತ ಫೈಟ್ ಗೆ ತಯಾರಿ ಮಾಡಿಕೊಳ್ಳುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ ಬಿಜೆಪಿ ಪಕ್ಷ ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರ್ಮ ಕೊಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದ್ದು ಅದಕ್ಕೆ …

Read More »

ರಮೇಶ್ ಬೆಂಗಳೂರಿಗೆ ಹೋಗಿದ್ದಾರೆ ಸಂಜೆ ನಾನೂ ಹೋಗುತ್ತೇನೆ

ಬೆಳಗಾವಿ- ರಮೇಶ ಜತೆಗೆ ಮಾತಕುತೆ ಮಾಡಲು ಆಗಿಲ್ಲ ರಮೇಶ ಜಾರಕಿಹೊಳಿ‌ ಬೆಂಗಳೂರಿಗೆ ಹೋಗಿದ್ದಾರೆ. ಸಂಜೆ ನಾನು ಬೆಂಗಳೂರಿಗೆ ತೆರಳುತ್ತಿದ್ದೇನೆ. ಎಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಮೇಶ ಜಾರಕಿಹೊಳಿ‌ ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರ. ಇಂತಹ ಯಾವುದೇ ಪ್ರಸ್ತಾಪನೆ ಇಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸರ್ಕಾರ ಕೊಡುತ್ತೆವೆ ಎಂದು ಸರೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ ಹೈಕಮಾಂಡ್ ನಿಂದ ದೆಹಲಿಗೆ ಬುಲಾವ್ ವಿಚಾರ.ರಾಜ್ಯ ಉಸ್ತುವಾರಿ …

Read More »

ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ್ ಜಾರಕಿಹೊಳಿ ಹಾಜರ್

ಬೆಳಗಾವಿ-ರಾಷ್ಟ್ರಪತಿಗಳನ್ನು ಸ್ವಾಗತಿಸಲು ಬೆಳಗಾವಿಯ ಸಾಂಬ್ರಾ ಎರಪೋರ್ಟ ಗೆ ಸಚಿವ ರಮೇಶ ಜಾರಕಿಹೋಳಿ ಆಗಮಿಸಿದರು ಸರ್ಕಾರಿ ವಾಹನ ಬಿಟ್ಟು ಎಸ್ಕಾಟ್ ಇಲ್ಲದೇ ಖಾಸಗಿ ವಾಹನದಲ್ಲಿ ಸಚಿವ ರಮೇಶ ಜಾರಕಿಹೋಳಿ ಏರ್ ಪೋರ್ಟ್ ಗೆ ಆಗಮಿಸಿ ಅನೇಕ ಉಹಾಪೋಹಗಳಿಗೆ ತೆರೆಎಳೆದರು ಈ ಸಂಧರ್ಭದಲ್ಲಿ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದಾಗ ಮಿಡಿಯಾದವರು ನಿವು ಬೆಂಕಿ ಹಚ್ಚೋರು ನಡೀರಿಪಾ.ಎಂದು‌ ಮಾದ್ಯಗಳಿಕೆ ಹೇಳುತ್ತಾ ಎರಪೋರ್ಟ ಒಳಗೆ ನಡೆದ ಸಚಿವ ರಮೇಶ ಜಾರಕಿಹೋಳಿ. ಪ್ರೋಟೋಕಾಲ್ ಪ್ರಕಾರ ರಾಷ್ಟ್ರಪತಿ ಮುಖ್ಯಮಂತ್ರಿಗಳನ್ನು …

Read More »

ಡಿ ಕೆ ಶಿವಕುಮಾರ್ ಧೈರ್ಯವಾಗಿ ಬೆಳಗಾವಿಗೆ ಬನ್ನಿ- ಶಂಕರ ಮುನವಳ್ಳಿ

ಬೆಳಗಾವಿ ಡಿ.ಕೆ.ಶಿವಕುಮಾರ ಅವರೇ ದೈರ್ಯದಿಂದ‌ ಬೆಳಗಾವಿಗೆ ಬನ್ನಿ‌ ಇದು ಜಾರಕಿಹೊಳಿ‌ ಅವರ ಸ್ವತಲ್ಲ ಯಾರಿಗೂ ಭಯ ಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಗೆ ಬ್ಲ್ಯಾಕ್ ಮೇಲ್‌ ಮಾಡುವರನ್ನು ವಜಾ ಮಾಡಿ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಹೇಳಿದರು. ಕಾಂಗ್ರೆಸ್ ಜಾರಕಿಹೊಳಿ‌ ಸಹೋದರರ ಸ್ವತಲ್ಲ. ಪಕ್ಷದಲ್ಲಿದ್ದುಕೊಂಡು ರಾಹುಲ ಗಾಂಧಿ‌ ಅವರನ್ನು ಪ್ರಧಾನಿ ಹುದ್ದೆಯಲ್ಲಿದ್ದ ಕೆಳಗಿಳಿಸುವ ಹುನ್ನಾರವನ್ನು ಜಾರಕಿಹೊಳಿ‌ ಸಹೋದರರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬೆಳಗಾವಿಯಲ್ಲಿ ‌ಸಚಿವ ಡಿಕೆಶಿ ಅವರನ್ನು‌ ಜಿಲ್ಲೆಯಿಂದ …

Read More »

ಬೆಳಗಾವಿ ಜಿಲ್ಲೆ ವಿಭಜಿಸಿ ದುರಂತ ನಾಯಕರಾಗಬೇಡಿ,ಸಿಎಂ ಕುಮಾರಸ್ವಾಮಿಗೆ ಕನ್ನಡ ಸಂಘಟನೆಗಳ ಎಚ್ಚರಿಕೆ

ಬೆಳಗಾವಿ ರಾಜಕೀಯ ದುರುದ್ದೇಶಕ್ಕಾಗಿ ಬೆಳಗಾವಿ ಜಿಲ್ಲಾ ವಿಭಜನೆ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಬಾರದು ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 1997ರಲ್ಲಿ ಬೆಳಗಾವಿ‌ ಜಿಲ್ಲೆಯನ್ನು ಜಿ.ಎಚ್.ಪಟೇಲರು ವಿಭಜನೆ ಮಾಡಲು‌ ನಿರ್ಣಯ ತೆಗೆದುಕೊಂಡಾಗ ಅದಕ್ಕೆ ಜನರು‌ ವಿರೋಧ ಮಾಡಿದಾಗ ಅದನ್ನು‌ ಹಿಂದೆ ತೆಗೆದುಕೊಂಡರು. ಆದರೆ ಕುಮಾರಸ್ವಾಮಿ ಅವರು ಗಡಿ ವಿಷಯದ‌ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವ್ಯಕ್ತವಾಗುತ್ತಿದೆ. ಜಿಲ್ಲಾ ವಿಭಜನೆ …

Read More »

ಬೆಳಗಾವಿ ಗಣೇಶೋತ್ಸವಕ್ಕೆ ಫಾರೇನ್ ಗೆಸ್ಟ್,…ವ್ಹಾರೇ..ವ್ಹಾ…!!!

ಬೆಳಗಾವಿ- ಬೆಳಗಾವಿಯಲ್ಲಿ ನಡೆಯುವ ಗಣೇಶೋತ್ಸವ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದ್ದು ಬೆಳಗಾವಿಯಲ್ಲಿ ನಡೆಯುವಂತಹ ಅದ್ಧೂರಿ ಗಣೇಶೋತ್ಸವ ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿ ನಡೆಯುವುದಿಲ್ಲ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದ ಜನರನ್ನು ಆಕರ್ಷಿಸುತ್ತಿದ್ದ ಬೆಳಗಾವಿ ಗಣೇಶೋತ್ಸವಕ್ಕೆ ಈಗ ವಿದೇಶಿಗರನ್ನು ಆಕರ್ಷಿಸುತ್ತಿರುವದು ಬೆಳಗಾವಿಯ ಹೆಮ್ಮೆ ಇಂದು ಬೆಳಗಾವಿ ನಗರದ ರವಿವಾರ ಪೇಟೆಯ ಗಣೇಶ ಮಂಡಳದವರು ಗಣೇಶನನ್ನು ಅದ್ದೂರಿ ಮೆರವಣಿಗೆ ಮೂಲಕ ತರುವಾಗ ಇಬ್ಬರು ವಿದೇಶಿಗರು ಗಣಪತಿ ಬಪ್ಪಾ ಮೋರೆಯಾ ಎಂದು ಬರೆಯಲಾದ ಟೋಪಿ ಹಾಕಿ …

Read More »