Home / Breaking News (page 551)

Breaking News

ಸಮಿತಿಗೆ ಶಾಕ್..ಮೇಯರ್ ಚೇಂಬರ್ ಗೆ..ಲಾಕ್…!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗು ಉಪ ಮೇಯರ್ ಇಬ್ಬರೂ ಮಾಡಬಾರದ ಕಿತಾಪತಿ ಮಾಡಿ ಈಗ ಫೋನ್ ಸ್ವಿಚ್ ಆಫ್ ಮಾಡಿ ನಾಟ್ ರೀಚೇಬಲ್ ಆಗಿರುವದು ಹಾಸ್ಯಾಸ್ಪದದ ಸಂಗತಿಯಾಗಿದೆ ರಾಜ್ಯೋತ್ಸವದ ದಿನ ಎಂಈಎಸ್ ಕರಾಳ ದಿನ ಆಚರಿಸಿತ್ತು ಈ ಕರಾಳ ದಿನಾಚರಣೆಯಲ್ಲಿ ಮೇಯರ್ ಸರೀತಾ ಪಾಟೀಲ,ಹಾಗು ಉಪ ಮೇಯರ್ ಸಂಜಯ ಶಿಂಧೆ ಶಾಸಕರಾದ ಅರವಿಂದ ಪಾಟೀಲ ಸಂಬಾಜಿ ಪಾಟೀಲ ಮತ್ತು ಕೆಲವು ನಗರ ಸೇವಕರು ಭಾಗವಹಿಸಿದ್ದರು ಸರ್ಕಾರ ಈಗ …

Read More »

ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ,ಗಡಿಯಲ್ಲಿ ಕರವೇ ಕಿಡಿ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಸೇರಿದಂತೆ ಎಂಈಎಸ್ ನಗರ ಸೇವಕರು ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಪುಂಡಾಟಿಕೆ ಪ್ರದರ್ಶಿಸಿದ್ದು ರಾಜ್ಯ ಸರ್ಕಾರ ಕೂಡಲೇ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಒತ್ತಾಯಿಸಿ ಕರವೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಟೆಂಟ್ ಹಾಕಿದೆ ಪಾಲಿಕೆಯನ್ನು ಸೂಪರ್ ಸೀಎ್ ಮಾಡಬೇಕು ಶಾಸಕ ಸಂಬಾಜಿ ಪಾಟೀಲ ಹಾಗು ಅರವಿಂದ ಪಾಟೀಲರ ಸದಸ್ಯತ್ವ ರದ್ದು ಮಾಡಬೇಕು ಎಂದು ಕರವೇ ಒತ್ತಾಯಿಸಿದೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದರೆ …

Read More »

ಮದುವೆಯಾಗಿ ಎರಡು ಮಕ್ಕಳಾದರೂ ಶಾಧಿ ಭಾಗ್ಯದ ಹಣ ಬಂದಿಲ್ಲ..!

ಬೆಳಗಾವಿ- ರಾಜ್ಯದಲ್ಲಿ ಶಾಧಿ ಭಾಗ್ಯ ಯೋಜನೆಯಲ್ಲಿ ೨೮ ಸಾವಿರ ಅರ್ಜಿಗಳು ಬಾಕಿ ಇವೆ ಅದಕ್ಕಾಗಿ ಕೂಡಲೇ ೧೦೦ ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದ್ದು ಅನುದಾನ ನೀಡುವದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಅಲ್ಪಸಂಖ್ಯಾತ,ಹಿಂದುಳಿದ,ಹಜ್ ಇಲಾಖೆಯ ಕಾರ್ಯದರ್ಶಿ ಮಹ್ಮದ ಮೋಹಸೀನ ತಿಳಿಸಿದ್ದಾರೆ ಬೆಳಗಾವಿ:ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ, ಹಜ್ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸೀನ್ ಇಲಾಖೆಗಳ ಪ್ರಗತಿ ಪರಿಶೀಲನೆ ಇಂದು ಡಿಸಿ ಕಚೇರಿ ಸಭಾಂಗಣದಲ್ಲಿ ನಡೆಸಿದರು. ಜಿಲ್ಲಾಧಿಕಾರಿ …

Read More »

ಮೇಯರ್ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ..!

ಬೆಳಗಾವಿ- ಗಡಿಯಲ್ಲಿ ನಾಡವಿರೋಧಿ ಎಂಈಎಸ್ ಪುಂಡಾಟಿಕೆ ವಿಪರೀತವಾಗಿದೆ ಮೇಯರ್ ಆದ ಮರು ದಿನ ಮಹಾರಾಷ್ಟ್ರ ಮುಖ್ಯಮಂತ್ರಿ ದವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಗಡಿವಿವಾದದ ಕುರಿತು ಸಮಾಲೋಚನೆ ಮಾಡಿ ಪುಂಡಾಟಿಕೆ ಪ್ರದರ್ಶಿಸಿದ್ದ ಮೇಯರ್ ಸರೀತಾ ಪಾಟೀಲ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸವಾಲು ಹಾಕಿದ್ದು ಇವರ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ ನೇತಾಡುತ್ತಿದೆ ರಾಜ್ಯೋತ್ಸವದ ದಿನ ಎಂಈಎಸ್ ಆಯೋಜಿಸಿದ್ಧ ಕರಾಳ ದಿನಾಚರಣೆಯಲ್ಲಿ ಶಾಸಕ ಸಂಬಾಜಿ ಪಾಟೀಲ,ಅರವಿಂದ ಪಾಟೀಲ.ಮೇಯರ್ ಸರೀತಾ ಪಾಟೀಲ ಉಪ …

Read More »

ಬೆಳಗಾವಿಯ,ಕಣ..ಕಣದಲ್ಲಿ ಸಿಡಿದ ಕನ್ನಡದ ಕಿಡಿ..!

ಬೆಳಗಾವಿ- ಗಡಿನಾಡ ಗುಡಿಯಲ್ಲಿ ಸ್ವಾಭಿಮಾನಿ ಕನ್ನಡಿಗರ ಸಿಂಹ ಘರ್ಜನೆಯಿಂದಾಗಿ ಬೆಳಗಾವಿ ನಗರದ ಕಣ ಕಣದಲ್ಲಿ ಕನ್ನಡದ ಸ್ವಾಭಿಮಾನದ ಕಿಡಿ ಸಿಡಿಯಿತು ಕನ್ನಡದ ಬಾವುಟ ಬಾನೆತ್ತರದಲ್ಲಿ ಹಾರಾಡಿ ಬೆಳಗಾವಿ ಎಂದೆಂದಿಗೂ ಕನ್ನಡದ ನೆಲ ಎನ್ನುವ ಸಂದೇಶ ಸಾರಿತು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ರಾಜ್ಯೋತ್ಸವಕ್ಕೆ ಚಾಲನೆ ನೀಡುತ್ತದ್ದಂತೆಯೇ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಕನ್ನಡದ ಅಭಿಮಾನದ ಹೊಳೆಯೇ ಹರಿದು ಬಂದಿತು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ಕನ್ನಡಮ್ಮನ …

Read More »

ಅನಾಥ ಮಕ್ಕಳ ಕಂಗಳಲ್ಲಿ ಬೆಳಕು ಮೂಡಿಸಿದ ಜಿಲ್ಲಾಧಿಕಾರಿ

ಅಪ್ಪ – ಅವ್ವನ ಮಡಿನಲ್ಲಿ ಹಬ್ಬದ ಸಂಭ್ರಮ ಉಲ್ಲಾಸ ಕಾಣಬೇಕಾದ ಮಕ್ಕಳಿಗೆ  ಅಪ್ಪ ಅವ್ವ  ಬಂಧುಗಳು ಅನ್ನುವವರೆ ಇಲ್ಲದಾದಾಗ ಮಕ್ಕಳ ಮನಸ್ಥಿತಿ ಹೇಗಿರಬೇಡ? ಅಂಥ ಮಕ್ಕಳನ್ನು ಮಡಿಲಿಗೆ ಕರೆದುಕೊಂಡು ಮಕ್ಕಳ ಕಣ್ಣಲ್ಲಿ ಒಬ್ಬ ಉನ್ನತ ಅಧಿಕಾರಿ ಚುಕ್ಕೆ ಚಂದಿರಿನ ಬೆಳಕು ಮೂಡಿಸಿದಾಗ ಮಕ್ಕಳ ಉಲ್ಲಾಸದ ಭಾವ ಹೇಗೆ ರೆಕ್ಕೆ ಬಿಚ್ಚಿ ಹಾರಾಡಬೇಡ? ಇಂಥ ಒಂದು ಮಾನವೀಯ ಅಂತಃಕರಣ ದ ಪ್ರಸಂಗಕ್ಕೆ ಬೆಳಗಾವಿ ಜಿಲ್ಲಾಧಿಕಾರಿಗಳ ನಿವಾಸದ ಆವರಣ ಇಂದು ಸಂಜೆ ಸಾಕ್ಷಿಯಾಗಿತ್ತು! …

Read More »

ಬೆಳಗಾವಿಯಲ್ಲಿ ಗುಡಿ ಪಾಡವಾ ಸ್ಪೇಶಲ್,ಎಮ್ಮೆಗಳ ಫ್ಯಾಶನ್ ಶೋ…!

ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ದೀಪಾವಳಿಯ ಗುಡಿ ಪಾಡವಾ ದಿನ ಎಮ್ಮೆಗಳ ಆಕರ್ಷಕ ಓಟ ನಡೆಯುತ್ತದೆ ಗವಳಿ ಸಮಾಜದ ಜನ ಈ ದಿನ ತಮ್ಮ ಎಮ್ಮೆ ಕೋಣ ಗಳನ್ನು ಶೃಂಗರಿಸಿ ಗಲ್ಲಿ ಗಲ್ಲಿಗಳಲ್ಲಿ ಓಡಿಸುತ್ತಾರೆ ಗುಡಿ ಪಾಡವಾ ದಿನ ಬೆಳಗಾವಿ ನಗರದ ಗವಳಿ ಗಲ್ಲಿ ಚವ್ಹಾಟ ಗಲ್ಲಿ ಗೋಂದಳಿ ಗಲ್ಲಿ ಗಳಲ್ಲಿ ಎಮ್ಮೆಗಳ ಓಟ ನೋಡಲು ಜನ ಸೇರುತ್ತಾರೆ ಆರಂಭದಲ್ಲಿ ಗವಳಿಗರು ತಮ್ಮ ತಮ್ಮ ಗಲ್ಲಿಗಳಲ್ಲಿ ಎಮ್ಮೆಗಳಿಗೆ ಹೆಂಡ ಕುಡಿಸಿ …

Read More »

ಸುವರ್ಣಸೌಧ ಖಾಲಿ…ಖಾಲಿ..ಇಲಿ,ಹೆಗ್ಗಣಗಳು ಜ್ವಾಲಿ..ಜ್ವಾಲಿ…!

ಬೆಳಗಾವಿ- ಉತ್ತರ ಕರ್ನಾಟಕದ ಶಕ್ಕಿಯ ಸೌಧ,ಸುವರ್ಣ ವಿಧಾನ ಸೌಧ ವರ್ಷವಿಡಿ ಖಾಲಿ ಇರುವದರಿಂದ ಇಲಿ ಹೆಗ್ಗಣಗಳು ಇದನ್ನು ಹೈಜ್ಯಾಕ್ ಮಾಡಿಕೊಂಡಿದ್ದು ಇವುಗಳ ಕಾಟ ವಿಪರೀತವಾಗಿದೆ ಇದು ಲೋಕೋಪಯೋಗಿ ಇಲಾಖೆಗೆ ಕಿರಿಕಿರಿಯಾಗಿದೆ ಅಧಿವೇಶನದ ಸಂಧರ್ಭದಲ್ಲಿ ಮಂತ್ರಿಗಳ ಎದುರಲ್ಲಿ ಇಲಿ ಹೆಗ್ಗಣಗಳು ಸುಳಿದಾಡಿದರೆ ಫಜೀತಿ ಆಗಬಹುದಲ್ಲ ಎಂದು ಹೆದರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೆಗ್ಗಣಗಳ ಹುತ್ತುಗಳನ್ನು ಮುಚ್ಚುವ ಕಾರ್ಯಾಚರಣೆ ಆರಂಭಿಸಿದ್ದಾರೆ ಬೆಳಗಾವಿಯಲ್ಲಿ ಐದು ನೂರು ಕೋಟಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಿಸಲಾಗಿದೆ …

Read More »

ಕನ್ನಡದ ಹಬ್ಬಕ್ಕೆ ಸಜ್ಜಾಗುತ್ತಿದೆ ಕ್ರಾಂತಿಯ ನೆಲ ಬೆಳಗಾವಿ…..!

ಬೆಳಗಾವಿ-ಗಡಿನಾಡ ಗುಡಿ ಕರ್ನಾಟಕದ ಕೀರೀಟ ಗಂಡು ಮೆಟ್ಟಿನ ನೆಲ ಐತಿಹಾಸಿಕ ಕ್ರಾಂತಿಯ ನೆಲ ಈಗ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ಸಜ್ಜಾಗುತ್ತಿದೆ ಬೆಳಗಾವಿ ನಗರದ ವೀರಾಣಿ ಚನ್ನಮ್ಮ ವೃತ್ತ , ಸಂಗೊಳ್ಳಿ ರಾಯಣ್ಣ ವೃತ್ತ ,ಜಿಲ್ಲಾಧಿಕಾರಿಗಳ ಕಚೇರಿ ಆವರಣ ಸೇರಿದಂತೆ ನಗರದ  ಎಲ್ಲ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ ಅದಲ್ಲದೆ ನಗರದ ಸಿಪಿಎಡ್ ಮೈದಾನದಲ್ಲಿ ಧ್ವಜಾರೋಹನಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಜಿಲ್ಲಾಧಿಕಾರಿ ಎನ್ ಜೈರಾಮ ಅವರು ಈ ಬಾರಿ ಕನ್ನಡದ …

Read More »

ಆನೆ ತುಳಿತಕ್ಕೆ ಓರ್ವನ ಬಲಿ

ಬೆಳಗಾವಿ-ಆನೆ ತುಳಿತ ಬೊಮ್ಮನಕೊಪ್ಪ ಗ್ರಾಮದ ವಾಸುದೇವ ಮಿರಾಸಿ ನಾಗರಗಾಳಿ ಕಾಡಿನಲ್ಲಿ ಸಾವೊನ್ನೊಪ್ಪಿದ ಘಟನೆ ನಡೆದಿದೆ ನಾಗರಗಾಳಿ ಗ್ರಾಮದ ಗದ್ದೆಗಳಿಗೆ ನುಗ್ಗಿದ ಆನೆಗಳ ಹಿಂಡನ್ನು ಓಡಿಸುವಾಗ ಈ ಘಟನೆ ನಡೆದಿದ್ದು ಈ ಘಟನೆಯಲ್ಲಿ ಇಬ್ಬರು ವನ ಪಾಲಕರೂ ನಾಪತ್ತೆಯಾಗಿದ್ದಾರೆ ಎಂಬ ವಿಷಯ ನಾಗರಗಾಳಿ ಗ್ರಾಮಸ್ಥರನ್ನು ಕಾಡುತ್ತಿದ್ದು ಇದು ಕೇವಲ ವದಂತಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಸಮಾಧಾನ ಹೇಳುತ್ತಿದ್ದಾರೆ ಡಿಸಿಎಫ್ ಬಿ. ವಿ. ಪಾಟೀಲ ಸ್ಥಳಕ್ಕೆ ದೌಡಾಯಿಸಿದ್ದಾರೆ

Read More »