Home / Breaking News (page 550)

Breaking News

ಕನಡ ಶಾಲೆಯ ದ್ವಂಸ ಕನ್ನಡಿಗರ ಆಕ್ರೋಶ

ಬೆಳಗಾವಿ-ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ತೀವ್ರಗೊಂಡಿದೆ. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಣೆ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಇಂದು ದುಷ್ಕರ್ಮಿಗಳು ಕನ್ನಡ ಶಾಲೆಯೊಂದಕ್ಕೆ ದ್ವಂಸಗೊಳಿಸಿದ್ದಾರೆ. ಕನ್ನಡ ಶಾಲೆ ಧ್ವಂಸ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.‌ ಹಿಗೇ ಸುಟ್ಟು ಭಸ್ಮವಾದ ದಾಖಲೆಗಳು, ಚೆಪ್ಪಾಪಿಲ್ಲಿಯಾದ ಶಾಲೆಯ ಡೆಸ್ಕಗಳು. ಇದು ಬೆಳಗಾವಿ ನಗರದ ಶಹಾಪುರದ ಭಾರತ ನಗರದ ಕನ್ನಡ ಶಾಲೆ ನಂ.೧೭. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ದುಷ್ಕೃತ್ಯ ಎಸಗಿದ್ದಾರೆ. …

Read More »

ಬೆಳಗಾವಿ ನಗರದ ಕನ್ನಡ ಶಾಲೆಯ ದಾಖಲೆಗಳಿಗೆ ಬೆಂಕಿ

  ಬೆಳಗಾವಿ:ನಗರದ ಶಹಾಪುರ ಭಾರತ ನಗರದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ನಂ೧೭ ರಲ್ಲಿ ಕಿಡಿಗೇಡಿಗಳು ಮಕ್ಕಳ ಡೆಸ್ಕ್ ಮುರಿದು ಕನ್ನಡದ ದಾಖಲೆಗಳಿಗೆ ಬೆಂಕಿ ಹಚ್ವಿದ ಘಟನೆ ಭಾನುವಾರ ಮದ್ಯರಾತ್ರಿ ನಡೆದಿದೆ ದಾಖಲಾತಿಗಳನ್ನು ಮನಬಂದಂತೆ ಸುಟ್ಟಿದ್ದಾರೆ. ಶಹಾಪುರ ಪೊಲೀಸ್ ಠಾಣೆಗೆ ಹೊಂದಿಕೊಂಡಂತೆ ಇರುವ ಈ ಶಾಲೆಗೆ ಶನಿವಾರ ಮತ್ತು ಭಾನುವಾರ ಎರಡು ದಿನ ರಜೆ ಇದ್ದಾಗ ಇಲ್ಲಿ ಕಿಡಿಗೇಡಿಗಳು ಅಂದಾದುಂದಿ ಪಾರ್ಟಿ ಮಾಡಿ ಸರಾಯಿ ಬಾಟಲಿಗಳನ್ನು ಶಾಲೆಯಲ್ಲಿಯೇ ಎಸೆದು …

Read More »

ನಾಡು ನುಡಿ ವಿಚಾರದಲ್ಲಿ ಪ್ರತ್ಯೇಕ ಶಾಸನ ಸಮೀತಿ ರಚಿಸುವ ಚಿಂತನೆ

ಬೆಳಗಾವಿ- ರಾಜ್ಯೋತ್ಸವದ ದಿನ ಎಂಈಎಸ್ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ  ಅದು ರಾಜ್ಯಪಾಲರ ವ್ಯಾಪ್ತಿಗೆ ಬರುತ್ತದೆ ನಾಡು ನುಡಿ ನೆಲ ಜಲದ ವಿಚಾರದಲ್ಲಿ ಹೊಸ ಕಮೀಟಿ ಸೆಟಪ್ ಮಾಡುವ ವಿಚಾರ ಇದೆ ಎಂದು ವಿಧಾನಸಭೆಯ ಅಧ್ಯಕ್ಷ ಕೋಳಿವಾಡ ತಿಳಿಸಿದರು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನದ ಪೂರ್ವ ತಯಾರಿಯ ಪರಶೇಲನೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಅವರು ನಾಡು ನುಡಿಯ …

Read More »

ಮೀಸಲಾತಿಗಾಗಿ ಕುಂದಾ ನಗರಿಯಲ್ಲಿ ಕುರುಬ ಸಮಾಜದ ರಣಕಹಳೆ..!

ಬೆಳಗಾವಿ- ಕುರುಬ ಸಮಾಜವನ್ನು ಪರಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಕುಂದಾನಗರಿ ಬೆಳಗಾವಿಯಲ್ಲಿ ಹಾಲುಮತ ಮಹಾಸಭೆ ವತಿಯಿಂದ ಬೃಹತ್ತ ಪ್ರತಿಭಟನಾ ರ್ಯಾಲಿ ನಡೆಯಿತು ಲಕ್ಷಾಂತರ ಜನ ಕುರುಬ ಸಮುದಾಯದ ಜನ ಸಮಾವೇಶ ಗೊಳ್ಳುವದರ ಮೂಲಕ ಮೀಸಲಾತಿಗಾಗಿ ಐತಿಹಾಸಿಕ ನೆಲದಲ್ಲಿ ರಣಕಹಳೆಯೂದಿದರು ಬೆಳಗಾವಿಯ ಅಶೋಕ ವೃತ್ತದಿಂದ ಆರಂಭಗೊಂಡ ಮೀಸಲಾತಿಯ ಮೆರವಣಿಗೆ ಸಿಪಿಎಡ್ ಮೈದಾನದವರೆ ಸಾಗಿತು ಮೆರವಣಿಗೆಯಲ್ಲಿ ಯುವಕರು ಮಹಿಳೆಯರು ಸೇರಿದಂತೆ ಕುರುಬ ಸಮಾಜದ ಲಕ್ಷಾಂತರ ಜನ ಭಾಗವಹಿಸಿ ಎಲ್ಲರ ಗಮನ ಸೆಳೆದರು ಕರ್ನಾಟಕದಲ್ಲಿನ …

Read More »

ಮೇಯರ್ ಉಪ ಮೇಯರ್ ಗೆ ನೋಟೀಸ್ ಜಾರಿ

ಬೆಳಗಾವಿ- ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಿದ ಬೆಳಗಾವಿ ಪಾಲಿಕೆಯ ಮಹಾಪೌರ ಸರೀತಾ ಪಾಟೀಲ ಹಾಗು ಉಪ ಮೇಯರ್ ಗೆ ಸರ್ಕಾರ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು ಸಮಗ್ರ ವರದಿ ನೀಡುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಕೂಡಾ ಬರೆದು ನಾಡ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಪರಶಿಷ್ಟ ಜಾತಿ ಪರಶಿಷ್ಟ ಪಂಗಡದ ಅನುದಾನ ಬಳಕೆಯಾಗಿಲ್ಲ ಎಸ್ ಎಫ …

Read More »

ಕೆಎಲ್‍ಇ ಶತಮಾನೋತ್ಸವ ಮ್ಯೂಜಿಯಂ ಉದ್ಘಾಟಿಸಿದ ಶಭಾನಾ ,ಆಜ್ಮಿ

  ಶನಿವಾರ  ರಂದು ಲಿಂಗರಾಜ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೆಎಲ್‍ಇ ಶತಮಾನೋತ್ಸವ ಮ್ಯೂಜಿಯಂನ್ನು ಖ್ಯಾತ ನಟಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಪೂರ್ವ ರಾಜ್ಯಸಭಾ ಸದಸ್ಯೆ ಶಭಾನಾ ಆಜ್ಮೀ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಾಮಾಜಿಕ ಕ್ರಾಂತಿಯಲ್ಲಿ ಕೆಎಲ್‍ಇ ಕೊಡುಗೆಯನ್ನು ಕೇವಲ ಕೇಳಿ ತಿಳಿದಿದ್ದೆ ಆದರೆ ಇಲ್ಲಿಗೆ ಬಂದ ನೋಡಿದಾಗ ಅರಿವಾಯಿತು ಅದರ ವಿಸ್ತಾರ ವ್ಯಾಪ್ತಿ ಸಮಾಜ ಪರಿವರ್ತನೆಯಲ್ಲಿನ ಪರಿಶ್ರಮವನ್ನು ತಿಳಿದುಕೊಂಡೆ. ಅಗಧವಾದ ಜ್ಞಾನದಾಸೋಹವನ್ನು ಸಮಾಜಕ್ಕೆ ಧಾರೆಯೆರೆದ ಕೆಎಲ್‍ಇ …

Read More »

ಮೇಯರ್ ಸರೀತಾ ಪಾಟೀಲ ಪಾಲಿಕೆಗೆ ಹಾಜರ್

ಬೆಳಗಾವಿ- ಎಂಈಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ವಿವಾದಕ್ಕೆ ಕಾರಣವಾಗಿರುವ ಬೆಳಗಾವಿ ಪಾಲಿಕೆ ಮೇಯರ್ ಸರೀತಾ ಪಾಟೀಲ ಉಪ ಮೇಯರ್ ಸಂಜಯ ಶಿಂದೆ ಶಾಸಕ ಸಂಬಾಜಿ ಪಾಟೀಲ ಸೇರಿದಂತೆ ಎಲ್ಲ ಎಂಈಎಸ್ ನಗರ ಸೇವಕರು ಪಾಲಿಕೆ ಕಚೇರಿಗೆ ಆಗಮಿಸಿ ಪಾಲಿಕೆಯ ಸಾಮಾನ್ಯ ಸಭೆ ನಡೆಸಲು ಮುಂದಾಗಿದ್ದಾರೆ ಶಾಸಕ ಸಂಬಾಜಿ ಪಾಟೀಲರ ಮನೆಯಲ್ಲಿ ಸಭೆ ನಡೆಸಿ ನೇರವಾಗಿ ಪಾಲಿಕೆ ಕಚೇರಿಗೆ ಆಗಮಿಸಿದ ಅವರು ಸಾಮಾನ್ಯ ಸಭೆ ನಡೆಸಲು ನಿರ್ಧರಿಸಿದ್ದು ಸಭೆಯಲ್ಲಿ ಪಾಲ್ಗೊಳ್ಳುವಂತೆ …

Read More »

ಮೇಯರ್ ಚೇಂಬರ್ ಗೆ ಕಪ್ಪು ಮಸಿ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಸರಿತಾ ಪಾಟೀಲ ಹಾಗು ಉಪ ಮೇಯರ್ ಸಂಜಯ ಶಿಂದೆ ಅವರ ಚೇಂಬರ್ ಬಾಗಿಲಿಗೆ ಹಾಗು ನಾಮಫಲಕಕ್ಕೆ ನಾರಾಯಣ ಗೌಡ ಬಣದ ಕಾರ್ಯಕರ್ತರು ಕಪ್ಪು ಮಸಿ ಬಳಿದು ಎಂಈಎಸ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ ಬೆಳಗ್ಗೆ ಪಾಲಿಕೆ ಕಚೇರಿಗೆ ನುಗ್ಗಿದ ಕರವೇ ಕಾರ್ಯಕರ್ತರು ಕಪ್ಪು ಮಸಿ ಬಳಿದು, ಪಾಲಿಕೆ ಮುಂದೆ ಧರಣಿ ನಡೆಸಿ, ಪಾಲಿಕೆ ಸೂಪರ್ ಸೀಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ

Read More »

ಪ್ಲಾಸ್ಟಿಕ ಅಂಗಡಿಗಳ ಮೇಲೆ ಪಾಲಿಕೆ ಆಯುಕ್ತರ ದಾಳಿ ಆರು ಕ್ವಿಂಟಲ್ ಪ್ಲಾಸ್ಟಿಕ ವಶ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಶುಕ್ರವಾರ ಸಂಜೆ ನಗರದಲ್ಲಿರುವ ಹೋಲ್ ಸೇಲ್ ಪ್ಲಾಸ್ಟಿಕ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು ಆರು ಕ್ವಿಂಟಲ್ ಪ್ಲಾಸ್ಟಿಕ ವಶಪಡಿಸಿಕೊಂಡಿದ್ದಾರೆ ಪಾಲಿಕೆಯ ಆರೋಗ್ಯಾಧಿಕಾರಿ ನಾಡಗೌಡ,ಪರಿಸರ ಅಭಿಯಂತರ ಯದಯಕುಮಾರ ಸೇರಿದಂತೆ ಪಾಲಿಕೆಯ ತಂಡ ಆಯುಕ್ತ ಶಶಿಧರ ಕುರೇರ ಅವರ ನೇತ್ರತ್ವದಲ್ಲಿ ಗಣಪತಿ ಗಲ್ಲಿ, ಮಾರುತಿ ಗಲ್ಲಿ ,ಖಡೇಬಝಾರ ಮಾರುತಿ ಗಲ್ಲಿ ರವಿವಾರ ಪೇಠೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಅಂಗಡಿಗಳ ಮೇಲೆ …

Read More »

ಎಂಈಎಸ್ ಮುಖಕ್ಕೆ ರಾಜ್ ಠಾಕ್ರೆ ಮಂಗಳಾರತಿ

ಬೆಳಗಾವಿ- ನಮ್ಮ ಮಹಾರಾಷ್ಟ್ರದಲ್ಲಿ ನಾನು ಸಿಎಂ ಇದ್ದಾಗ ಇಲ್ಲಿಯ ಮಹಾನಗರ ಪಾಲಿಕೆಯವರು ಮಹಾರಾಷ್ಟ್ರ ಉದಯವಾದ ದಿನ ಯಾರಾದರೂ ಕರಾಳ ದಿನ ಆಚರಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರೆ ಅವರನ್ನು ಒದ್ದು ಜೈಲಿಗೆ ಹಾಕಿಸುತ್ತಿದ್ದೆ ಎಂದು  ಮಹಾರಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಎಂಈಎಸ್ ಮೂಖಕ್ಕೆ ಮಂಗಳಾರತಿ ಮಾಡಿದ್ದಾರೆ ಮಹಾರಾಷ್ಟ್ರದ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ರಾಜ್ ಠಾಖ್ರೆ  ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್ ಕರಾಳ ದಿನ ಆಚರಣೆ …

Read More »