Breaking News

ವಿಕೆಂಡ್ ಮದ್ಯರಾತ್ರಿ ಕಳ್ಳರ ಕೈಚಳಕ,ನಗರದಲ್ಲಿ ಅಂಗಡಿಗಳ ಸರಣಿ ಕಳ್ಳತನ

ಬೆಳಗಾವಿ-ಬೆಳಗಾವಿ ನಗರದ ಡಾ ಬಿ ಆರ್ ಅಂಬೇಡ್ಕರ್ ರಸ್ತೆಯಲ್ಲಿರುವ ಎ ಡನ್ ಡಿ ಗ್ಲೋಬಲ್ ದೇಸಿ ಅಂಗಡಿ ಸೇರಿದಂತೆ ರವಿವಾರ ಪೇಠೆಯ ಹಲವಾರು ಅಂಗಡಿಗಳ ಸರಣಿ ಕಳ್ಳತನ ನಡೆದಿ ಬೆಳಗಾವಿಯ ಭೀಮ್ಸ ಮೆಡಿಕಲ್ ಕಾಲೇಜು ಎದುರಿನ ಆರ್ ಎನ್ ಡಿ ದೇಸಿ ಗ್ಲೋಬಲ್ ಅಂಗಡಿಯ ಶೆಟರ್ ಮುರಿದು ಅಂಗಡಿಯಲ್ಲಿರುವ ಬಟ್ಟೆ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಬಟ್ಟೆಗಳನ್ನು ದೋಚಲಾಗಿದೆ ಸ್ಥಳಕ್ಕೆ ಮಾರ್ಕೆಟ್ ಪೋಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ …

Read More »

ಬೆಳಗಾವಿ ಎಪಿಎಂಸಿ ಎಂಈಎಸ್ ಗೆ ಸಮಾಧಾನ.ಕಾಂಗ್ರೆಸ್ ಗೆ ವರದಾನ.ಬಿಜೆಪಿಗೆ ಅವಮಾನ

ಬೆಳಗಾವಿ- ಗೆದ್ದವರನೆಲ್ಲ ನಮ್ಮವರೇ ಎಂದು ಭಗವಾ ಪೇಟಾ ಸುತ್ತಿ ,ಬುಟ್ಟಿಗೆ ಹಾಕಿಕೊಂಡ ಎಂಈಎಸ್ ನಾಯಕರು ಬೆಳಗಾವಿ ಎಪಿಎಂಸಿ ಯಲ್ಲಿ ಭಗವಾ ಫಡಕಲಾ..ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಬೆಳಗಾವಿ ಎಪಿಎಂಸಿ ಯಲ್ಲಿ ಒಟ್ಟು ಹನ್ನೆರಡು ಸ್ಥಾನಗಳ ಪೈಕಿ ಎಂಈಎಸ್  ಆರು ಸ್ಥಾನಗಳಲ್ಲಿ ಗೆಲವು ಸಾಧಿಸಿದೆ ಬಿಜೆಪಿ ಕೇವಲ ಹಿರೇಬಾಗೇವಾಡಿಯಲ್ಲಿ ಮಾತ್ರ ಗೆಲವು ಸಾಧಿಸಿದ್ದು ಕಾಂಗ್ರೆಸ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಎಂಈಎಸ್ ಭಧ್ರಕೋಟೆಗೆ ಲಗ್ಗೆ ಇಟ್ಟಿದೆ ಈ ಚುನಾವಣೆಯಲ್ಲಿ ಇನ್ನೊಂದು ವಿಶೇಷ …

Read More »

ಕೊನೆಗೂ ತಾನಾಜಿ ಹೊಡೆದರು ..ಗೆಲುವಿನ ಬಾಜಿ..!

ಬೆಳಗಾವಿ ಎಪಿಎಂಸಿ ನಗರ ಕ್ಷೇತ್ರದಲ್ಲಿ ಹಲವಾರು ಗದ್ದಲಗಳ ನಡುವೆ ಮತ ಎಣಿಕೆ, ಮರು ಮತ ಎಣಿಕೆ ಹೀಗೆ ಎಣಿಕೆಗಳ ಮೇಲೆ ನಾಲ್ಕು ಬಾರಿ ಎಣಿಕೆಯಾದ ನಂತರ ತಾನಾಜಿ ಪಾಟೀಲ ಅಚ್ಚರಿಯ ಗೆಲುವು ಕಂಡಿದ್ದಾರೆ. ಪ್ರತಿಸ್ಪರ್ಧಿ ಚಂದ್ರಕಾಂತ ಕೊಂಡುಸ್ಕರ್ ವಿರುದ್ದ 8 ಮತಗಳ ಅಂತರದಿಂದ ತಾನಾಜಿ ವಿಜಯ ಸಾಧಿಸಿದರು. ಮೊದಲು ಮತ ಎಣಿಕೆ ನಡೆದಾಗ ಚಂದ್ರಕಾಂತ ಅವರು 4 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಗೊತ್ತಾಯಿತು ಇದಕ್ಕೆ ತಾನಾಜಿ ಬೆಂಬಲಿಗರು ಆಕ್ಷೇಪ …

Read More »

ಬೆಂಕಿ ಹಚ್ಚುವ ಹೇಳಿಕೆಯನ್ನು ಸಮರ್ಥಿಸಿಕೊಂಡ- ಪಿ,ರಾಜೀವ

ಬೆಳಗಾವಿ-ನಾನು ಅಧಿಕಾರಿಗಳ ಮೇಲೆ ವರಟಾಗಿ ಮಾತನಾಡಿದ್ರೆ ಅದು ನನ್ನ ವಯಕ್ತಿಕ ಲಾಭಕ್ಕಾಗಿ ಅಲ್ಲ. ಅಧಿಕಾತಿಗಳ ವರ್ತನೆಗಾಗಿ ನಾನು ಬಳಸಿದ ಪದಗಳು ಕಡಿಮೇನೆ.ಅಧಿಕಾರಿಗಳು ಕ್ಷೇತ್ದದ ಜನರ ಕೆಲಸ ಮಾಡದಿದ್ದರೆ ಇನ್ನು ಮುಂದೆ ನನ್ನ ವರಟ ಮಾತುಗಳನ್ನು ಮುಂದುವರೆಸುತ್ತೆನೆ.ಎಂದು ಶಾಸಕ ಪಿ ರಾಜೀವ ಸ್ಟೇಶನ್ ಗೆ ಬೆಂಕಿ ಹಚ್ಚುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪೊಲಿಸ್ ಠಾಣೆ ಬೆಂಕಿ ವಿಚಾರ.ಪ್ರಸ್ತಾಪಿಸಿ ಪತ್ತೆಯಾಗದ ಕೊಲೆ ಪ್ರಕರಣದಲ್ಲಿ ಅಮಾಯಕ ರನ್ನ ಕರೆತಂದು ವಿಚಾರಣೆ …

Read More »

ಮಹದ್ವಾ ರಸ್ತೆಯ ಮನೆಗೆ ಬೆಂಕಿ ಅಪಾರ ಹಾನಿ

ಬೆಳಗಾವಿ- ನಗರದ ಮಹಾದ್ವಾ ರಸ್ರೆಯ ನಾಲ್ಕನೇಯ ಕ್ರಾಸ್ ನಲ್ಲಿರುವ  ಮುರುಕುಟೆ ಅವರಿಗೆ ಸೇರಿದ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಹಾನಿಯಾಗಿದೆ ಮಧ್ಯಾಹ್ನ ಮೂರು ಘಂಟೆ ಸುಮಾರಿಗೆ ಮನೆಯಲ್ಲಿ ಶಾರ್ಟ ಸರ್ಕ್ಯಟ್ ನಿಂದಾಗಿ ಮನೆಯ ತುಂಬೆಲ್ಲ ಬೆಂಕಿ ಹರಡಿ ಮನೆಯಲ್ಲಿನ ಎಲ್ಲ ಸಾಮುಗ್ರಿಗಳು ಸುಟ್ಟು ಭಸ್ಮವಾಗಿವೆ ಅಗ್ನಿ ಶಾಮಕ ದಳ ಹಾಗು ಸ್ಥಳಿಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು ಬೆಂಕಿ ಇನ್ನುವರೆಗೆ ನಿಯಂತ್ರಣಕ್ಕೆ ಬಂದಿಲ್ಲ ಬೆಂಕಿ ಅವಘಡದಿಂದಾಗಿ ಮಹದ್ವಾ ರಸ್ತೆಯಲ್ಲಿ …

Read More »

ಜಿ ಎಸ್ ಟಿ ದಾಖಲಾತಿ ನೊಂದಣಿಗೆ ಜನೇವರಿ ೧೫ ಕೊನೆಯ ದಿನಾಂಕ

ಬೆಳಗಾವಿ- ದೇಶಾದ್ಯಂತ ಏಕರೂಪ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿರುವುದರಿಂದ ರಾಜ್ಯಾದ್ಯಂತ ಎಲ್ಲಾ ವರ್ತಕರು, ವ್ಯಾಪಾರ ವಹಿವಾಟುಗಳನ್ನ ಇದೇ ಜನವರಿ ೧೫ ರೊಳಗಾಗಿ, ಜಿಎಸ್ ಟಿ ಅಡಿಯಲ್ಲ ದಾಖಲಾತಿ ಹಾಗೂ ನೊಂದಣಿ ಮಾಡಿಕೊಳ್ಳಬೇಕು ಎಂದು ವಾಣಿಜ್ಯ ತರಿಗೆ ಜಂಟಿ ಆಯುಕ್ತ ಎಸ್ ಮಿರ್ಜಾ ಅಜ್ಮಲ್ ಹೇಳಿದ್ದಾರೆ. ಬೆಳಗಾವಿಯ ವಿಭಾಗದ ಮೌಲ್ಯವರ್ಧಿತ ತೆರಿಗೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೬ ಡಿಸೆಂಬರ್ ೧೮. ರಿಂದ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ …

Read More »

ಸಂಕ್ರಾಂತಿಯ ಸಡಗರದಲ್ಲಿ ಕುಂದಾ ನಗರಿ

ಬೆಳಗಾವಿ-ಬರಗಾಲದ ಸಂಕಷ್ಟದಲ್ಲಿಯೂ ಸಂಕ್ರಾಂತಿಯ ಉತ್ಸಾಹ ಕುಗ್ಗಿಲ್ಲ ನಗರದಲ್ಲಿ ಹಬ್ಬದ ಖರೀದಿ ಜೋರಾಗಿದ್ದು ಕುಂದಾನಗರಿ ಬೆಳಗಾವಿಯಲ್ಲಿ ಹಬ್ಬದ ಸಡಗರ ಮನೆಮಾಡಿದೆ ಬೆಳಗಾವಿ ಪೇಠೆಯಲ್ಲಿ ಹಬ್ಬದ ಖರೀದಿಗಾಗಿ ಹಳ್ಳಿಯ ಜನ ಮುಗಿಬಿದ್ದಿದ್ದಾರೆ ಬಿಳಿ ಯಳ್ಳು ತಿಳಗುಳ ಮಾರಾಟ ಜೋರಾಗಿ ನಡೆದಿದೆ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದರೂ ಜನರ ಉತ್ಸಾಹದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಉತ್ರರ ಕರ್ನಾಟಕದಲ್ಲಿ ವಿಶೇಷವಾಗಿ ಸಂಕ್ರಾಂತಿ ಹಬ್ಬದ ದಿನ ಉಟದ ಬುತ್ತಿ ಕಟ್ಟಿಕೊಂಡು ಹೊಳೆಯ ದಂಡೆಗೆ ಹೋಗುತ್ತಾರೆ ಹೊಳೆಯಲ್ಲಿ ಸ್ನಾನ …

Read More »

ಮಾನಿಕ್ ಸರ್ಕಾರಗೆ ಬಸವಶ್ರೀ ಪ್ರಶಸ್ತಿ

ಬೆಳಗಾವಿ: ಈ ಬಾರಿಯ ಬಸವ ಶ್ರೀ ಪ್ರಶಸ್ತಿಗೆ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾನಿಕ್ ಸರ್ಕಾರ ಭಾಜನರಾಗಿದ್ಸಾರೆ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ಕೃಷಿಕ ಹಾಗೂ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ ಅವರಿಗೆ 2017 ನೇ ಸಾಲಿನ ರಾಷ್ಟ್ರೀಯ ಬಸವ ಕೃಷಿಕ ಪ್ರಶಸ್ತಿಯನ್ನು ಜ.15 ರಂದು ಬೆಳಿಗ್ಗೆ 10 ಗಂಟೆಗೆ ಕೂಡಲ ಸಂಗಮದ ಬಸವ ವೇದಿಕೆಯಲ್ಲಿ …

Read More »

ಕಡೋಲಿ ಮತಗಟ್ಟೆಯಲ್ಲಿ ಗಲಾಟೆ ಜಿಪಂ ಉಪಾಧ್ಯಕ್ಷ ಕಟಾಂಬ್ಳೆಯಿಂದ ಗ್ರಾಪಂ ಸದಸ್ಯನಿಗೆ ಕಪಾಳ ಮೋಕ್ಷ

ಬೆಳಗಾವಿ- ಬೆಳಗಾವಿ ಸಮೀಪದ ಕಡೋಲಿ ಎಪಿಎಂಸಿ ಮತಗಟ್ಟೆಯಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಅವರು ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಚವ್ಹಾಣಗೆ ಕಪಾಳ ಮೋಕ್ಷ ಮಾಡಿ ಮತಗಟ್ಟೆ ಆರಣದಲ್ಲಿಯೇ ಎಳೆದಾಡಿ ಗಲಾಟೆ ಮಾಡಿದ ಘಟನೆ ನಡೆದಿದೆ ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಚವ್ಹಾಣ ವೃದ್ದ ಮಹಿಳೆಯೊಬ್ಬಳನ್ನು ಮತಗಟ್ಟೆಗೆ ಕರೆತಂದಾಗ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬ್ಳೆ ಆತನ ಜೊತೆ ಜಗಳಕ್ಕಿಳಿದು ಆತನಿಗೆ ಎಳೆದಾಡಿ ಕಪಾಳ ಮೋಕ್ಷ ಮಾಡಿದ ಪ್ರಸಂಗ ಅಲ್ಲಿ ನಡೆದಿದೆ …

Read More »

ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ವೀರ ಸನ್ಯಾಸಿಯ ಜಯಂತಿ ಉತ್ಸವ

ಬೆಳಗಾವಿ-ದೇಶ ಕಂಡ ಮಹಾನ್ ಸನ್ಯಾಸಿ ಯುವಕರ ಸ್ಪೂರ್ತಿಯ ಸೆಲೆ ಸಹೋದರ ಸಹೋದರರಿಯರೇ ಎಂಬ ಎರಡೇ ಎರಡು ಅಕ್ಷರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹಿಂದು ಧರ್ಮದ ಸಂಸ್ಕೃತಿಯ ಝಲಕ್ ತೋರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು ಬೆಳಗಾವಿಯ ವಿವೇಕ್ ಮಾರ್ಗದಲ್ಲಿರುವ ಆಶ್ರಮದಿಂದ ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಮೆರವಣಿಗೆಗೆ ಸಂಸದ ಸುರೇಶ ಅಂಗಡಿ ಸೇರಿದಂತೆ ಜಿಲ್ಲೆಯ ಗಣ್ಯರು ಹಾಗು ಅಧಿಕಾರಿಗಳು …

Read More »