Breaking News

ಎಂ.ಸ್ಯಾಂಡ್ ಸಂಘದ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ್

ಗೋಕಾಕ: ಕರ್ನಾಟಕ ಎಮ್-ಸ್ಯಾಂಡ್ ಅಸೋಸಿಯೇಶನ್ ಕ್ಷೇಮಾಭಿವೃದ್ಧಿ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಚಂದ್ರಶೇಖರ ಕೊಣ್ಣೂರ ಅವರು ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ಸವದತ್ತಿ ತಾಲೂಕಿನ ಯರಗಟ್ಟಿ ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾಗಿ ಅವರನ್ನು ಆಯ್ಕೆ ಮಾಡಲಾಗಿದ್ದು ಉಪಾಧ್ಯಕ್ಷರಾಗಿ ಸಂಜುಗೌಡ ಕುಪ್ಪಸಗೌಡರ, ಕಾರ್ಯದರ್ಶಿಯಾಗಿ ಪಾಂಡುರಂಗ ರೆÀಡ್ಡಿ, ಖಜಾಂಚಿಯಾಗಿ ಶ್ರೀಶೈಲ ವರ್ಜಿ ಅವರು ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ಪ್ರಮೋದ ರೆಡ್ಡಿ, ರಂಗನಾಥ ಭಜಂತ್ರಿ, ನವೀನಕುಮಾರ ಮಗದುಮ್ಮ, ಸುರೇಶ ಸಂಗೊಳ್ಳಿ, ಗೋಪಾಲ ಮಗದುಮ್ಮ, ಟಿ.ಸಿ.ಬಂಡಿವಡ್ಡರ, ಕಿಶೋರಕುಮಾರ ರಾಟಿ, ಪಿ.ಜಿ ಚೌಗುಲೆ, ಎಚ್.ಜಿ.ಗಾಡಿವಡ್ಡರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *