Breaking News

ಖಡೇಬಝಾರ್ ಪೋಲೀಸರ ಖಾಕಿ ಖದರ್….ಒಂದು ಕೋಟಿ ರೂ ಬಂಗಾರ ಸಮೇತ ಮೂವರು ವಂಚಕರ ಅಂದರ್ ….!!!!!

ಒಂದು ಕೋಟಿ ರೂ ಬಂಗಾರ ಸಮೇತ ಮೂವರು ಖದೀಮರ ಅರೆಸ್ಟ

ಬೆಳಗಾವಿ- ಬೆಳಗಾವಿಯ ಬಾಪಟ ಗಲ್ಲಿಯ ಕಾಳಿಕಾ ದೈವಜ್ಞ ಸೌಹಾರ್ದ ಸೊಸೈಟಿ ಯಲ್ಲಿ ಗ್ರಾಹಕರು ಅಡುವಿಟ್ಟ ನಾಲ್ಕು ಕೆಜಿ ಬಂಗಾರದ ಆಭರಣಗಳನ್ನು ಕದ್ದು ಈ ಆಭರಣಗಳನ್ನು ಮಣಿಪ್ಪುರಂ,ಮುತ್ತೂಟ ಫೈನಾನ್ಸಲ್ಲಿ ಅಡುವಿಟ್ಟು ಲಕ್ಷಾಂತರ ರೂ ಸಾಲ ಪಡೆದು ಮಜಾ ಮಾಡಿದ ಮೂವರು ಜನ ವಂಚರನ್ನು ಬಂಧಿಸಿರುವ ಖಡೇಬಝಾರ್ ಪೋಲೀಸರು ಬಂಧಿಸಿ ಒಂದು ಕೋಟಿ ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ

ಸೊಸೈಟಿಯ ಮ್ಯಾನೇಜರ್ ಮಂಗೇಶ ಶಿರೋಡಕರ ಹಾಗು ಇಬ್ಬರು ಸೇರಿ ಗ್ರಾಹಕರ ಚಿನ್ನವನ್ನು ಬೇರೆ ಬ್ಯಾಂಕಿನಲ್ಲಿ ಅಡುವಿಟ್ಡು ಮೋಸ ಮಾಡಿದ್ದರು ಈ ಕುರಿತು ಬ್ಯಾಂಕಿನ ಚೇರಮನ್ ಖಡೇಬಝಾರ್ ಪೋಲೀಸರಿಗೆ ದೂರು ನೀಡಿದ್ದರು ದೂರು ದಾಖಲಿಸಿಕೊಂಡ ಪೋಲೀಸರು ಮೂರೇ ದಿನದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಒಂದು ಕೋಟಿ ರೂ ಬೆಲೆಯ ಚಿನ್ನಾಭರಣ ವಶ ಪಡಿಸಿಕೊಂಡಿರುವ ಖಡೇಬಝಾರ್ ಪೋಲೀಸರು ಖಾಕಿ ಖದರ್ ತೋರಿಸಿದ್ದಾರೆ

ಸೊಸೈಟಿಯ ಮ್ಯಾನೇಜರ್ ಮಂಗೇಶ ಶಿರೋಡಕರ ,ಮಾರಿಹಾಳ ಗ್ರಾಮದ ಶ್ರೀಶೈಲ ಯಮನಪ್ಪಾ ತಾರಿಹಾಳ,ಮಾರುತಿ ರಾಯ್ಕರ್ ಬಂಧಿತ ಆರೋಪಿತರಾಗಿದ್ದಾರೆ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.