ಬಾರ್ ಒಳಗೆ, ಬಿಡಲಿಲ್ಲ, ಎಂಎಲ್ಎ ಫೋನ್ ರಿಸೀವ್ ಮಾಡಲಿಲ್ಲ,

ಬೆಳಗಾವಿಯ ಗಾಂಧಿ ನಗರದಲ್ಲಿ ಬ್ಲೇಡ್ ಹಲ್ಲೆಯಿಂದ ಗಾಯಗೊಂಡಿರುವ ಮಹ್ಮದ ಕೈಫ್ ಬಾಗವಾನ್

ಬೆಳಗಾವಿ- ಇತ್ತೀಚಿಗೆ ಕುಡಿದ ಅಮಲಿನಲ್ಲಿ ಶಾಸಕ ಅನೀಲ ಬೆನಕೆ ಅವರ ಕಚೇರಿಯ ಮೇಲೆ ಕಲ್ಲು ತೂರಾಟ ಮಾಡಿ ಕಿಡಕಿ ಗಾಜುಗಳನ್ನು ಧ್ವಂಸ ಮಾಡಿದ್ದ ಆರೋಪಿಯನ್ನು ಮಾರ್ಕೆಟ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಬಾರ್ ವೊಂದಕ್ಕೆ ಹೋಗಿದ್ದ ಸತ್ಯಂ ಜ್ಯೋತೀಬಾ ನಾಯಕ್ ಎಂಬಾತನನ್ನು ಬಾರ್ ಒಳಗೆ ಬಿಟ್ಟಿಲ್ಲ, ಸಿಟ್ಟಿಗೆದ್ದ ಈತ ನೇರವಾಗಿ ಶಾಸಕ ಅನೀಲ ಬೆನಕೆ ಅವರಿಗೆ ಫೋನ್ ಮಾಡಿದ್ದಾನೆ,ಅವರೂ ಫೋನ್ ರಿಸೀವ್ ಮಾಡದೇ ಇರುವದರಿಂದ ನೇರವಾಗಿ ಚವ್ಹಾಟ ಗಲ್ಲಿಗೆ ತೆರಳಿದ ಸತ್ಯಂ ನಾಯಕ್ ಶಾಸಕ ಅನೀಲ ಬೆನಕೆ ಕಚೇರಿಯ ಮೇಲೆ ಕಲ್ಲು ಎಸೆದು ಕಿಡಕಿ ಗಾಜುಗಳನ್ನು ದ್ವಂದ ಮಾಡಿ ಪರಾರಿ ಆಗಿದ್ದ

ಆದ್ರೆ ಇಂದು ಬೆಳಿಗ್ಗೆ ಮಾರ್ಕೆಟ್ ಠಾಣೆಯ ಪೋಲೀಸರು ಈತನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

ಬೆಳಗಾವಿಯಲ್ಲಿ ಬ್ಲೇಡ್ ವಾರ್ ಯುವಕನಿಗೆ ಗಂಭೀರ ಗಾಯ….!!

ಬೆಳಗಾವಿ-ಬೆಳಗಾವಿಯಲ್ಲಿ ಸಣ್ಣ ಹುಡುಗರ ಮಧ್ಯ ವಾದ ಆಗಿದೆ,ಈ ವಾದ ವಿವಾದದಲ್ಲಿ ಓರ್ವ ಯುವಕನ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಲಾಗಿದ್ದು ಈತ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿಯಯ ನ್ಯು ಗಾಂಧಿ ನಗರದಲ್ಲಿ ನಡೆದಿದೆ.

ಇಂದು ಸಂಜೆ ಸಣ್ಣ ಹುಡುಗರ ನಡುವೆ ಗಾಂಧಿ ನಗರದಲ್ಲಿ ಗಲಾಟೆಯಾಗಿದೆ ಈ ಗಲಾಟೆ ಬ್ಲೇಡ್ ವಾರ್ ಆಗಿದ್ದು ಘರ್ಷಣೆಯಲ್ಲಿ ಮಹ್ಮದ ಕೈಫ್ ಬಾಗವಾನ್ (17 ) ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೋಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *