Breaking News

ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಹೊಸ ಎಂಟ್ರಿ

ಬೆಳಗಾವಿ-ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಗೆ ಸಚಿವ ರಮೇಶ ಜಾರಕಿಹೊಳಿ‌ ಅವರು ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ್ ಜತೆಗೆ ಡಿಸಿಸಿ ಬ್ಯಾಂಕಿಗೆ ಆಗಮಿಸಿದ್ದಾರೆ.

ಖಾನಾಪುರ ನಿರ್ದೇಶಕ ಸ್ಥಾನಕ್ಕೆ ಇಬ್ಬರ ನಡುವೆ ಪವರ್ ಫುಲ್ ಫೈಟ್ ನಡೆಯುತ್ತಿದೆ.
ಮಾಜಿ ಶಾಸಕ ಅರವಿಂದ ಪಾಟೀಲ್, ಶಾಸಕಿ ಅಂಜಲಿ ನಿಂಬಾಳ್ಕರ್ ನಡುವೆ ಫೈಟ್ ನಡೆಯುತ್ತಿದ್ದು
ಅರವಿಂದ ಪಾಟೀಲ್ ಜತೆಗೆ ರಮೇಶ ಜಾರಕಿಹೊಳಿ‌ ಮಾತುಕತೆ ಆರಂಭವಾಗಿದೆ. ಈ ಚರ್ಚೆಯಲ್ಲಿ ರಮೇಶ್ ಕತ್ತಿ ಮಹಾಂತೇಶ್ ಕವಟಗಿಮಠ ಉಪಸ್ಥಿತರಿದ್ದಾರೆ.

ಖಾನಾಪುರ ನಿರ್ದೇಶಕ ಅವಿರೋಧ ಆಯ್ಕೆ ಹಿನ್ನೆಲೆ ‌
ಖಾನಾಪುರ ಅವಿರೋಧ ಆಗದೇ ಇದ್ರೆ ಇನ್ನೂಳಿದ ಮೂರು ಕ್ಷೇತ್ರದಲ್ಲಿ ಕಗ್ಗಂಟು ಎದುರಾಗಲಿದ್ದು,ಅರವಿಂದ್ ಪಾಟೀಲ ಅವರನ್ನು ಕಣದಿಂದ ಹಿಂದಕ್ಕೆ ಸರಿಸಲು ಎಲ್ಲ ರೀತಿಯ ಕಸರತ್ತು ಶುರುವಾಗಿದೆ.

ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದ್ದು ಈ ದಿನ ಜಿಲ್ಲಾ ಮಂತ್ರಿ ರಮೇಶ್ ಜಾರಕಿಹೊಳಿ ಅವರ ಜೊತೆ ಅರವಿಂದ್ ಪಾಟೀಲರು ಬ್ಯಾಂಕಿಗೆ ಆಗಮಿಸಿದ್ದು,ರಮೇಶ್ ಜಾರಕಿಹೊಳಿ ಅವರು ಮಾದ್ಯಮಗಳ ಎದುರು ಅರವಿಂದ್ ಪಾಟೀಲ್ ನಮ್ಮ ಕ್ಯಾಂಡಿಡೇಟ್ ಎಂದು ಹೇಳಿದ್ದು ವಿಶೇಷವಾಗಿತ್ತು

Check Also

ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…

ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ …

Leave a Reply

Your email address will not be published. Required fields are marked *