ಡಿಸಿಸಿ ಬ್ಯಾಂಕ್ ಚುನಾವಣೆ ಕೊನೆಯ ಕ್ಷಣದಲ್ಲಿ ಮ್ಯಾಜಿಕ್….!!

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕಿನ ಖಾನಾಪೂರ ಕ್ಷೇತ್ರದ ಚುನಾವಣೆಯ ದಿಕ್ಕು ಬದಲಾಗಿದೆ,ಕೆಲವರ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದ್ದು,ಈ ಕ್ಷೇತ್ರದ ಇಬ್ಬರು ಮತದಾರರು ಕೋರ್ಟ್ ಆದೇಶ ಪಡೆದು ಕೊನೆಯ ಘಳಿಗೆಯಲ್ಲಿ ಮತದಾನ ಮಾಡುವ ಮೂಲಕ ಫಲಿತಾಂಶದ ದಿಕ್ಸೂಚಿಯನ್ನೇ ಬದಲಾಯಿಸಿದ್ದಾರೆ.

ರೈತ ಮಖಂಡ ಮಲ್ಲಿಕಾರ್ಜುನ ವಾಲಿ ಅವರ ಜೊತೆ ಇನ್ನೊಬ್ಬ ಮತದಾರ ಮತದಾನ ಮಾಡುವ ಮೂಲಕ ಫಲಿತಾಂಶದ ಕುರಿತು ಅಚ್ಚರಿ ಮೂಡಿಸಿದ್ದು ಖಾನಾಪೂರದಲ್ಲಿ ಯಾರೇ ಗೆದ್ದರೂ ಒಂದು ಮತದ ಅಂತರದಿಂದ ಎಂದು ಹೇಳಲಾಗುತ್ತಿದೆ.

ಮತದಾನ ಮಾಡಿದ ಮಲ್ಲಿಕಾರ್ಜುನ ವಾಲಿ,ಯಾರು ಮಾಡ್ತಾರೆ ಜಾಗ ಖಾಲಿ ಎನ್ನುವಂತಾಗಿದ್ದು ಇನ್ನು ಕೆಲವೇ ಕ್ಷಣಗಳಲ್ಲಿ ಮತದಾನದ ಅವಧಿ ಮುಕ್ತಾಯವಾಗಲಿದೆ.
ನಾಲ್ಕು ಗಂಟೆಯ ಬಳಿಕ ಮತ ಎಣಿಕೆ ಕಾರ್ಯ ಶುರುವಾಗಲಿದ್ದು,ಎಲ್ಲ ವಿದ್ಯಮಾನಗಳ ಮೇಲೆ ಹದ್ದಿಣ ಕಣ್ಣಿಟ್ಟಿರುವ ಲೀಡರ್ ಗಳು ಸಂಕಮ್ ಹೊಟೇಲ್ ನಲ್ಲಿ ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದು ಅದ್ಯಕ್ಷರಾಗುವ ಸಾಧ್ಯತೆ ಇರುವವರು ನಿರಂತರವಾಗಿ ಮೀಸೆ ತಿರುಗಿಸುವಲ್ಲಿ ಬ್ಯುಸಿಯಾಗಿದ್ದಾರೆ.

Check Also

ರೇಖಾ ಗುಪ್ತಾ ದೆಹಲಿ ಸಿಎಂ ಇಂದು ಪ್ರಮಾಣ ವಚನ

ಬೆಳಗಾವಿ- ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಕೊಡುತ್ತಾರೆ ಎನ್ನುವ ವಿಚಾರ ಈಗ ಮತ್ತೊಮ್ಮೆ ಸಾಭೀತಾಗಿದೆ. ಪ್ರಥಮ ಬಾರಿಗೆ …

Leave a Reply

Your email address will not be published. Required fields are marked *