ಲಕ್ಷ್ಮೀ ಹೆಬ್ಬಾಳಕರ್ ನಮ್ಮ ಪಾರ್ಟಿಯ ಇಂಪಾರ್ಟಂಟ್ ಲೀಡರ್- ಡಿಕೆಶಿ

ಬೆಂಗಳೂರು- ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಂತರ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಮೌನ ಮುರಿದಿದ್ದಾರೆ ಲಕ್ಷ್ಮೀ ಹೆಬ್ಬಾಳಕರ್ ನಮ್ಮ ಪಾರ್ಟಿಯ ಇಂಪಾರ್ಟೆಂಟ್ ಲೀಡರ್ ಎಂದು ಡಿಕೆಶಿ ಹೇಳಿದ್ದಾರೆ

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಜಾರಕೊಹೊಳಿ ಸಹೋದರರ ಬಗ್ಗೆ ನನಗೆ ಗೊತ್ತಿದೆ ಅವರು ನಮ್ಮ ಪಕ್ಷದ ನಿಷ್ಠರು ಅನೇಕ ವಿಚಾರದಲ್ಲಿ ಅವರು ನನಗೆ ಅನೇಕ ಬಾರಿ ಬೆಳಗಾವಿಗೆ ಕರೆದಿದ್ದರು ಅವರು ಕರೆದಾಗಲೆಲ್ಲಾ ಬೆಳಗಾವಿಗೆ ಹೋಗಿದ್ದೇನೆ ಅವರಿಗೆ ಸಹಾಯ ಮಾಡಿದ್ದೇನೆ ಮುಂದೆಯೂ ಸಹಾಯ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ

ಜಾರಕೊಹೊಳಿ ಬ್ರದರ್ಸ್ ಆಗಲಿ ಬೇರೆ ಯಾವ ಶಾಸಕರು ಬಿಜೆಪಿಗೆ ಹೋಗುವದಿಲ್ಲ ಜಾರಕೊಳಿ ಅವರು ನನ್ನ ಬ್ರದರ್ಸ್ ಇದ್ದಹಾಗೆ ಸತೀಶ ಜಾರಕಿಹೊಳಿ ಎಐಸಿಸಿ ಆಸ್ತಿ ಎಂದು ಡಿಕೆಶಿ ತಿಳಿಸಿದ್ದಾರೆ

ಬಿಜೆಪಿ ಅವರು ಯಾವ ಪಾನ್ ಮೂವ್ ಮಾಡ್ತಾರೋ ಮಾಡಲಿ ನನಗೆ ಯಾವ ಪಾನ್ ಮೂವ್ ಮಾಡಬೇಕು ಗೊತ್ತಿದೆ ಹೊಸದಾಗಿ ಗೆದ್ದ ಶಾಸಕರು ಪಕ್ಷ ಬಿಟ್ಟು ಹೋಗುವದಿಲ್ಲ ಆನಂದ್ ಸಿಂಗ್ ನನ್ನ ಪರ್ಸನಲ್ ಪ್ರೆಂಡ್ ಯಾರೊಬ್ಬರೂ ಪಾರ್ಟಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಡಿಕೆಶಿ ಸ್ಪಷ್ಟಪಡಿದ್ದಾರೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *