ಮಹದಾಯಿ ನದಿ ನೀರು ಕುಡಿದ ಸಚಿವ ಡಿಕೆಶಿ

ಬೆಳಗಾವಿ- ಕಳಸಾ ಬಂಡೂರಿ ಹಾಗೂ ಮಹಾದಾಯಿ ನದಿ ನೀರು ಹಂಚಿಕೆ ಕುರಿತು ನ್ಯಾಯಾಧೀಕರಣ ತೀರ್ಪು ನೀಡಿದ ನಂತರ ರಾಜ್ಯದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕಳಸಾ ಬಂಡೂರಿ ನಾಲೆ ಪ್ರದೇಶಕ್ಕೆ ಭೇಟಿ ನೀಡಿದರು

ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೂಂದಿಗೆ ಕಳಸಾ ಬಂಡೂರಿ ನಾಲೆ ಪ್ರದೇಶವನ್ನು ಎರಡು ಘಂಟೆಗೂ ಹೆಚ್ಚು ಕಾಲ ಸುತ್ತಾಡಿದ ನೀರಾವರಿ ಸಚಿವರು ಮಹಾದಾಯಿ ನದಿ ನೀರು ಕುಡಿದು ಎಲ್ಲರ ಗಮನ ಸೆಳೆದರು

ಶಾಸಕಾರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಕೋನರೆಡ್ಡಿ ಸೇರಿದಂತೆ ಇನ್ನಿತರರು ಸಚಿವ ಡಿಕೆಶಿಗೆ ಸಾಥ್ ನೀಡಿದರು.

ಕಳಸಾ ಬಂಡೂರಿ ನಾಲೆಯ ಕಾಮಗಾರಿ ಪರಶೀಲನೆ ಮಾಡಿದ ಅವರು ಅಧಿಕಾರಿಗಳಿಂದ ನಾಲೆಯ ಕುರಿತು ಮಾಹಿತಿ ಪಡೆದರು

Check Also

ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ : ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ

ಸಂಕೇಶ್ವರ : ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಇಬ್ಬರು ಸಹೋದರರು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ …

Leave a Reply

Your email address will not be published. Required fields are marked *