Breaking News
Home / Breaking News / ಉದ್ಯಮಿ ರೋಹನ್ ರೇಡೇಕರ ಶವ ಚೋರ್ಲಾ ಘಾಟ್ ನಲ್ಲಿ ಪತ್ತೆ, ಡಾನ್ ರಶೀದ ಮಲಬಾರಿಯ 11 ಜನ ಸಹಚರರ ಬಂಧನ

ಉದ್ಯಮಿ ರೋಹನ್ ರೇಡೇಕರ ಶವ ಚೋರ್ಲಾ ಘಾಟ್ ನಲ್ಲಿ ಪತ್ತೆ, ಡಾನ್ ರಶೀದ ಮಲಬಾರಿಯ 11 ಜನ ಸಹಚರರ ಬಂಧನ

  • ಬೆಳಗಾವಿ- ನಗರದ ಪ್ರಸಿದ್ದ ಉದ್ಯಮಿಯೊಬ್ಬರ ಮಗ ರೋಹನ್ ರೇಡೇಕರ ಶವ ಚೋರ್ಲಾ ಘಾಟನಲ್ಲಿ ಪತ್ತೆಯಾಗಿದ್ದು ರೋಹನ್ ರೇಡೇಕರ್ ನನ್ನು ಅಪಹರಿಸಿ ಆತನ ಹತ್ಯೆಗೈದ ಅಂಡರ್ ವರ್ಲ್ಡ್ ಡಾನ್ ಛೋಟಾ ಶಕೀಲನ ಬಲಗೈ ಭಂಟ ರಶೀದ ಮಲಬಾರಿಯ ಹನ್ನೊಂದು ಜನ ಸಹಚರರನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ

ಬೆಳಗಾವಿ ಪೋಲಿಸರಿಂದ ಭೂಗತ ಪಾತಕಿ ರಶೀದ್ ಮಲಬಾರಿ ಸಹಚರರ ಬಂಧನ. ಮಾಡಲಾಗಿದೆ ಬೆಳಗಾವಿ ಪೋಲಿಸರ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ

ರಶೀದ ಮಲಬಾರಿ ಭೂಗತ ಪಾತಕಿ ಚೋಟಾ ಶಕೀಲ್ ಬಲಗೈ ಬಂಟ ಎಂದು ಹೇಳಲಾಗಿದ್ದು ಮಾಮು” ಎಂಬ ಹೆಸರಿನಲ್ಲಿ ಬೆಳಗಾವಿಯಲ್ಲಿ ವರ್ಷಗಳ ಕಾಲ ಅಡಗಿಕೊಂಡಿದ್ದ ರಶೀದ್ ಮಲಬಾರಿಯ ಹನ್ನೊಂದು ಜನ ಈಗ ಬೆಳಗಾವಿ ಪೋಲೀಸರ ವಶದಲ್ಲಿದ್ದಾರೆ

ರಶೀದ್ ಮಲಬಾರಿಗೆ ಕೆಲವು ಸ್ಥಳೀಯ ರಾಜಕಾರಣಿಗಳು ಮತ್ತು ನಗರ ಸೇವಕರು ಆಶ್ರಯ ನೀಡಿದ್ದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ ಈ ಮಾಹಿತಿಯನ್ನು ರಶೀದ ಮಲಬಾರಿಯ ಸಹಚರರು ಬೆಳಗಾವಿ ಪೋಲೀಸರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ

ಬೆಳಗಾವಿ ಉದ್ಯಮಿಯೊಬ್ಬರ ಪುತ್ರ ರೋಹನ್ ರೇಡೆಕರ್ ೨೪ ಅಪಹರಿಸಿ ಹತ್ಯೆಗೈದಿದ್ದ ರಶೀದ ಮಲಬಾರಿ ಗ್ಯಾಂಗಿನ ಹನ್ನೊಂದು ಜನ ಕಿರಾತಕರು ಬೆಳಗಾವಿ ಪ್ರತಿಷ್ಠರ ಮನೆಯಲ್ಲಿ ಆಶ್ರಯ ಪಡೆದಿರುವದು ಆತಂಕಕಾರಿ ವಿಷಯವಾಗಿದೆ

ಎರಡು ವರ್ಷದ ಹಿಂದೆ ಅಪಹರಣಗೊಂಡಿದ್ದ ರೋಹನ್ ರೇಡೆಕರ್ ಶವ ಇಂದು ಚೋರ್ಲಾ ಘಾಟನಲ್ಲಿ ಪತ್ತೆಯಾಗಿದೆ  ಉದ್ಯಮಿ ಹಣ ಕೊಡಲು ಒಪ್ಪಿದ್ದರು ಕಿರಾತಕರು ರೋಹನ್ ಹೆಡೆಕರನ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ

೨೦೧೪ರಲ್ಲಿ ಜೈಲಿನಿಂದ ಹೊರಬಂದ ನಂತರ ರಶೀದ ಮಲಬಾರಿ. ಬೆಳಗಾವಿಯಲ್ಲಿ ಅಡಗಿಕೊಂಡು ಪುಣೆ-ಮುಂಬೈ ನಡುವೆ ಓಡಾಡಿಕೊಂಡಿದ್ದ. ಇತ ದುಬೈನಲ್ಲಿ ನೆಲೆಸಿಕೊಂಡಿದ್ದ ಎಂದೆ ಭಾವಿಸಲಾಗಿತ್ತು.

ಹೀಗಾಗಿಯೇ ಮಂಗಳೂರು ಪೋಲಿಸರು ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದರು. ಪಾತಕಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *