ಶಾಸಕಿ ಅಂಜಲಿ…ಕ್ಷೇತ್ರದಲ್ಲಿ ಜನಪರ ಕಾಳಜಿಯ ಗೀತಾಂಜಲಿ…..!!!!

ಬೆಳಗಾವಿ-ಕಾಂಗ್ರೆಸ್ ಪಕ್ಷದ ವಕ್ತಾರರು,ಜನ ಮೆಚ್ಚಿದ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಹೊರ ಹೊಮ್ಮುತ್ತಿರುವ ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ,ರಾಜ್ಯದ ಗಮನ ಸೆಳೆದಿದ್ದಾರೆ…

ಇವರು ತಮ್ಮ ಕ್ಷೇತ್ರದಲ್ಲಿ ಪೋಟೋ ಪೋಜ್ ಕೊಟ್ಟು,ಭಾಷಣ ಮಾಡಿ,ಮಹಿಳಾ ದಿನಾಚರಣೆ ಮಾಡದೇ,ಕ್ಷೇತ್ರದಲ್ಲಿ,ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ,ಬಿಪಿ,ಶುಗರ್,ಟಿ‌ಬಿ,ಕೊರೋನಾ,ತಪಾಸಣೆ ಮಾಡುವದರ ಜೊತೆಗೆ ಉಚಿತ ಕಣ್ಣಿನ ತಪಾಸಣೆ ಮಾಡಿಸಿ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಹಿಳಾ ದಿನಾಚರಣೆಯ ನಿಮಿತ್ಯ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ,ಸುಮಾರು 3 ಸಾವಿರ ಜನ ಪಾಲ್ಗೊಂಡು ವಿವಿಧ ಆರೋಗ್ಯ ತಪಾಸಣೆ ಶಿಬಿರಗಳ ಲಾಭ ಪಡೆದುಕೊಂಡರು.

ಶಾಸಕಿ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಹಿರಿಯರ ಜೊತೆ ಸಮಯ ಕಳೆದರು,ಕ್ಷೇತ್ರದ ಮಹಿಳೆಯರ ಸಮಸ್ಯೆ ಆಲಿಸಿದರು. ಮಕ್ಕಳ ಜೊತೆ ಆಟವಾಡಿದ್ರು ಶಾಸಕಿ ಆಗಿದ್ರೂ ಅಂಜಲಿ ನಿಂಬಾಳ್ಕರ್ ಸಾಮಾನ್ಯ ಮಹಿಳೆಯಾಗಿ ಮಹಿಳೆಯರ ಜೊತೆ ಕಾಲ ಕಳೆದು ಅವರ ಸಮಸ್ಯೆಗಳನ್ನು ಆಲಿಸಿ ಅವರ ಜೊತೆ ಬೆರೆತು ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ..

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *