Breaking News

ಬೈ ಇಲೆಕ್ಷನ್, ಬಿಜೆಪಿಯಲ್ಲಿ ಇಬ್ಬರು ಡಾಕ್ಟರ್ ಗಳ ಕಾಂಪಿಟೇಶನ್….!!!

ಬೆಳಗಾವಿ- ಬೆಳಗಾವಿ ಲೋಕಸಭಾ ಉಪ ಚುನಾವಣೆಯ ದಿನಾಂಕ ಘೋಷಣೆ ಆಗಿಲ್ಲ,ಆದ್ರೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳಲ್ಲಿ ಸಂಘರ್ಷ ಮಾತ್ರ ಜೋರಾಗಿಯೇ ನಡೆದಿದೆ….

ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಸ್ಪರ್ದಿಸಲು ಬಿಜೆಪಿಯಲ್ಲಿ ಫುಲ್ ರಶ್ ಆಗಿಬಿಟ್ಟಿದೆ,ಬಿಜೆಪಿ ಹಿರಿಯ ನಾಯಕ ಪ್ರಭಾಕರ ಕೋರೆ ಅವರು ಸೇರಿದಂತೆ 70 ಕ್ಕೂ ಹೆಚ್ವು ಜನ ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವದು ವಿಶೇಷವಾಗಿದೆ.

ಬಿಜೆಪಿ ಆಕಾಂಕ್ಷಿಗಳಲ್ಲಿ ಬೆಳಗಾವಿಯ ಇಬ್ಬರು ಪ್ರಸಿದ್ಧ ಡಾಕ್ಟರ್ ಗಳು ಕೂಡಾ ಟಿಕೆಟ್ ಗಾಗಿ ಜೋರದಾರ್ ಲಾಬಿ ನಡೆಸಿದ್ದಾರೆ,ಬೆಳಗಾವಿಯ ಪ್ರಸಿದ್ಧ ವೈದ್ಯರುಗಳಾದ ಡಾ. ಗಿರೀಶ್ ಸೋನವಾಲ್ಕರ್,ಮತ್ತು ಡಾ ರವಿ ಪಾಟೀಲ ಅವರು ಸದ್ದಿಲ್ಲದೇ ಕಸರತ್ತು ನಡೆಸಿದ್ದಾರೆ.

ಡಾ.ರವಿ ಪಾಟೀಲ,ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.ಬಿಜೆಪಿಯಲ್ಲಿ ಅವರು ಸಕ್ರೀಯವಾಗಿದ್ದಾರೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಲು ಕೊನೆಯ ಕ್ಷಣದವರೆಗೂ ಡಾ.ರವಿ ಪಾಟೀಲ ಲಾಬಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ.

ಈಗ ಆಕಾಂಕ್ಷಿಗಳ ಪಟ್ಟಿಯಲ್ಲಿ ಡಾ.ಗಿರೀಶ್ ಸೋನವಾಲ್ಕರ್ ಹೆಸರು ಹರಿದಾಡುತ್ತಿದೆ.ಅವರ ಅಭಿಮಾನಿಗಳು ಸರ್ ನಿಮಗೆ ಬಿಜೆಪಿ ಟಿಕೆಟ್ ಫೈನಲ್ ಆಗಿದೆ ಅಂತಾ ಹೂಗುಚ್ಛ ಕೊಟ್ಟು ಡಾ.ಗಿರೀಶ್ ಸೋನವಾಲ್ಕರ್ ಗೆ ಅಭಿನಂಧನೆ ಕೂಡಾ ಸಲ್ಲಿಸಿದ್ದಾರೆ ಎನ್ನುವ ಸುದ್ಧಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ.

ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆ.ಅನ್ನೋದು ಯಾರಿಗೂ ಗೊತ್ತಿಲ್ಲ,ಆದ್ರೆ ಬಿಜೆಪಿ ಪ್ರಬಲ ಲಿಂಗಾಯತ ಅಭ್ಯರ್ಥಿಗಳಿಗೆ ಅವಕಾಶ ಕೊಡಲಿದೆ ಎನ್ನುವ ಮಾಹಿತಿ ಹೊರಗೆ ಬಂದಿದೆ,ಅದಕ್ಕಾಗಿಯೇ ಲಿಂಗಾಯತ ಸಮುದಾಯಕ್ಕೆ ಸೇರಿರುವ ಇಬ್ಬರು ಡಾಕ್ಟರ್ ಗಳು ಬಿಜೆಪಿ ಟಿಕೆಟ್ ಪಡೆಯಲು ಎಲ್ಲೆಲ್ಲಿ ಟಾನಿಕ್ ಇಂಜೆಕ್ಷನ್ ಕೊಡಬೇಕೋ ಅಲ್ಲಲ್ಲಿ ಇಂಜೆಕ್ಷನ್ ಕೊಡುತ್ತಿದ್ದಾರೆ,ಯಾರ್ಯಾರಿಗೆ ಟಾನಿಕ್ ಗುಳಗಿ ಕೊಡಬೇಕೋ ಅವರಿಗೆ ಟಾನಿಕ್ ಗುಳಗಿ ಕೊಡುವ ಕೆಲಸ ಮಾಡುತ್ತಿದ್ದಾರೆ.

ಒಟ್ಟಾರೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ದರ್ಬಾರು ಜೋರಾಗಿಯೇ ನಡೆದಿದೆ.ಚುನಾವಣೆ ಘೋಷಣೆಯಾದ ಬಳಿಕ ಫೈನಲ್ ಸಂಘರ್ಷ ನಡೆಯಲಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *