Breaking News

ಕ್ರಿಯಾಶೀಲವಾಗಿರುವ ಡಾ.ಸೋನಾಲಿ ಸರ್ನೋಬತ್….!!!

 

 

ಬೆಳಗಾವಿ- ಕ್ರೀಯಾಶೀಲ ವ್ಯಕ್ತಿಗೆ ಹುದ್ದೆಗಳು ತಾನಾಗಿಯೇ ಒಲಿದು ಬರುತ್ತವೆ,ಕೊಟ್ಟ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದರೆ.ಯಶಸ್ಸು ಸಿಗುತ್ತದೆ.ಯಶಸ್ಸು ಸಿಗುತ್ತಾ ಹೋದಂತೆ ಟೀಕೆ ಟಿಪ್ಪಣಿ ಗಳು ಎದುರಾಗುತ್ತವೆ.ಕೊಟ್ಟ ಜವಾಬ್ದಾರಿಯನ್ನು ಕಳಕಳಿಯಿಂದ ನಿಭಾಯಿಸಿದ ಬಳಿಕ ಟೀಕೆಗಳು ಸಾಯುತ್ತವೆ ಸಾಧನೆಗಳು ಉಳಿಯುತ್ತವೆ ಎನ್ನುವದಕ್ಕೆ ಬೆಳಗಾವಿಯ ಡಾ.ಸೋನಾಲಿ ಸರ್ನೋಬತ್ ಅವರೇ ಉತ್ತಮ ಉದಾಹರಣೆ ಯಾಗಿದ್ದಾರೆ.

ಡಾ.ಸೋನಾಲಿ ಸರ್ನೋಬತ್ ಅವರು ಯಾವುದೇ ನಿಗಮ ಮಂಡಳಿಯ ಅಧ್ಯಕ್ಷರಾಗಿಲ್ಲ,ಯಾವುದೇ ರೀತಿಯ ಲಾಭದಾಯಕ ಹುದ್ದೆಗಳು ಅವರ ಹತ್ತಿರವಿಲ್ಲ ಬಿಜೆಪಿ ಪಕ್ಷದ ಸಂಘಟನಾತ್ಮಕ ಹುದ್ದೆಗಳು ಬಿಟ್ಟರೆ,ಅವರು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರಾಗಿ ಅತ್ಯಂತ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರಾದ ಬಳಿಕ ಡಾ. ಸೋನಾಲಿ ಸರ್ನೋಬತ್ ಅವರು ಚಕ್ಕಡಿಯಲ್ಲಿ ಕಬ್ಬು ಸಾಗಾಟದಲ್ಲಿ ಎತ್ತುಗಳಿಗೆ ಕೊಡುತ್ತಿರುವ ಹಿಂಸೆಯನ್ನು ಗಮನಿಸಿ ಚಕ್ಕಡಿಯಲ್ಲಿ ಕಬ್ನು ಸಾಗಾಟಕ್ಕೆ ಎತ್ತುಗಳನ್ನು ಬಳಸಿ ಎತ್ತುಗಳಿಗೆ ಹಿಂಸೆ ಕೊಡಬಾರದು ಈ ವಿಚಾರದಲ್ಲಿ ಎತ್ತುಗಳ ಬಳಕೆಗೆ ನಿಷೇಧ ಹೇರಬೇಕೆಂದು ಒತ್ತಾಯಿಸುವ ಮೂಲಕ ಡಾ.ಸೋನಾಲಿ ಸರ್ನೋಬತ್ ರಾಜ್ಯದ ಗಮನ ಸೆಳೆದಿದ್ದಾರೆ.

ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆಯಾಗಿರುವ ಡಾ. ಸೋನಾಲಿ ಸರ್ನೋಬತ್ ಅವರು ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರು ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳನ್ನು ಇಂದು ಭೇಟಿಯಾಗಿ, ಗೋ ರಕ್ಷಣೆ, ಬೀದಿ ನಾಯಿಗಳಿಗೆ ನಗರ ಹೊರವಲಯದಲ್ಲಿ ಪುನರ್ವಸತಿ ಸೇರಿದಂತೆ ಪ್ರಾಣಿಗಳ ಮೇಲೆ ದಯೆ ತೋರುವ ವಿಚಾರದಲ್ಲಿ ಪಶುಗಳ ಆರೋಗ್ಯದ ವಿಚಾರವಾಗಿ ಪಶು,ಅಂಬ್ಯುಲೆನ್ಸ್ ಗಳ ಸಮರ್ಪಕ ಬಳಕೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ.

ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಿದ ಬಳಿಕ ಈ ಕಾಯ್ದೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡುವ ಸಂಕಲ್ಪ ಡಾ.ಸೋನಾಲಿ ಸರ್ನೋಬತ್ ಅವರದ್ದಾಗಿದೆ…

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *