Breaking News

ಖಾನಾಪೂರ ಬಿಜೆಪಿಗೆ ಹೊಸ ಶಕ್ತಿ ತುಂಬಿದ ಡಾ.ಸೋನಾಲಿ ಸರ್ನೋಬತ್…!!

ಬೆಳಗಾವಿ-ಬಿಜೆಪಿಯ ಮಹಿಳಾ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾದ ಬಳಿಕ,ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬೆಳೆದಿದೆ.ಖಾನಾಪೂರದಲ್ಲಿ ಸಾರ್ವಜನಿಕರ ಸಂಪರ್ಕಕ್ಕಾಗಿ ಕಚೇರಿ ಆರಂಭಿಸಿ ಈ ಕ್ಷೇತ್ರದಲ್ಲೇ ಠಿಖಾನಿ ಹೂಡಿರುವ ಡಾ.ಸೋನಾಲಿ ಅವರ ಸಾಮಾಜಿಕ ಕಾರ್ಯಗಳು ಕ್ಷೇತ್ರದಲ್ಲಿ ಹೊಸ ಪರ್ವ ಆರಂಭಿಸಿವೆ.

ಖಾನಾಪೂರ ಕ್ಷೇತ್ರದ ಹಳ್ಳಿ,ಹಳ್ಳಿಗಳಲ್ಲಿ ಸಂಚರಿಸಿ, ಕಾಡಿನಂಚಿನಲ್ಲಿರುವ ಕಾಡು ನಿವಾಸಿಗಳನ್ನು ಸಂಪರ್ಕಿಸಿ,ಅವರ ಸಮಸ್ಯೆಗಳನ್ನು ಆಲಿಸಿ,ಅದಕ್ಕೆ ಪರಿಹಾರ ದೊರಕಿಸಿಕೊಡುತ್ತಿರುವ ಡಾ. ಸೋನಾಲಿ ಈ ಕ್ಷೇತ್ರದ ಜನರ ಕಷ್ಟ,ಸುಖದಲ್ಲಿ ಭಾಗವಹಿಸಿ ಅಪಾರ ಜನ ಮೆಚ್ವುಗೆ ಗಳಿಸಿದ್ದಾರೆ.ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಟಕ್ಕರ್ ಕೊಡಲು ಡಾ.ಸೋನಾಲಿ ಸರ್ನೋಬತ್ ಅವರೇ ಸೂಕ್ತ ಅಭ್ಯರ್ಥಿ ಎನ್ನುವ ಚರ್ಚೆ ಈಗ ಖಾನಾಪೂರದಲ್ಲಿ ಶುರುವಾಗಿದೆ.

ರಾಜ್ಯದ ಬಿಜೆಪಿ ನಾಯಕರು ಡಾ.ಸೋನಾಲಿ ಸರ್ನೋಬತ್ ಅವರು ಮಾಡುತ್ತಿರುವ ಸಾಮಾಜಿಕ ಮತ್ತು ಪಕ್ಷದ ಕಾರ್ಯಚಡುವಟಿಕೆಗಳಿಂದ ಪ್ರಭಾವಿತರಾಗಿದ್ದಾರೆ.ಖಾನಾಪೂರ ಕ್ಷೇತ್ರದ ಬಿಜೆಪಿ ಟಿಕೆಟ್ ಈ ಬಾರಿ ಯಾರಿಗೆ ಸಿಗುತ್ತೆ ಗೊತ್ತಿಲ್ಲ,ಆದ್ರೆ ಡಾ.ಸೋನಾಲಿ ಅವರು ಸಾಮಾಜಿಕ ಕಾರ್ಯಗಳ ಮೂಲಕ ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ.ಇದು ಡಾ.ಸೋನಾಲಿ ಅವರ ಸ್ಪೇಶ್ಯಾಲಿಟಿ…

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *