ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್ ಅವಿರೋಧವಾಗಿ ಆಯ್ಕೆ !

ಬೆಳಗಾವಿ-ಇತ್ತೀಚೆಗೆ ನಿಯತಿ ಕೋ-ಆಪರೇಟಿವ್ ಸೊಸೈಟಿಯ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಡಾ.ಸೋನಾಲಿ ಸರ್ನೋಬತ್ ಅವರು ಅಧ್ಯಕ್ಷರಾಗಿ, ಭರತ್ ರಾಥೋಡ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕರೋನಾ ಅವಧಿಯಲ್ಲಿ ನಿಯತಿ ಸೊಸೈಟಿಯನ್ನು ಸ್ಥಾಪಿಸಲಾಯಿತು. ಡಾ.ಸೋನಾಲಿ ಸರ್ನೋಬತ್ ಅವರ ನೇತೃತ್ವದಲ್ಲಿ ಈ ಸೊಸೈಟಿಯನ್ನು ಸ್ಥಾಪಿಸಲಾಯಿತು. ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ ರೋಹನ್ ಜುವಳಿ ಅಧ್ಯಕ್ಷ ಮತ್ತು ಖ್ಯಾತ ವೈದ್ಯ ಡಾ.ಸಮೀರ್ ಸರ್ನೋಬತ್ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅಲ್ಪಾವಧಿಯಲ್ಲಿ ಸೊಸೈಟಿಯನ್ನು ಲಾಭದಾಯಕವಾಗಿಸಿದರು.

ಅನೂಪ್ ಜವಳಕರ (ಖ್ಯಾತ ಬಿಲ್ಡರ್), ರೋಹಿತ್ ದೇಶಪಾಂಡೆ (ಕೈಗಾರಿಕೋದ್ಯಮಿ), ಭಾಸ್ಕರ್ ಪಾಟೀಲ್ (ವಕೀಲ), ಪ್ರಕಾಶ್ ಮುಗ್ಳಿ (ಕೈಗಾರಿಕೋದ್ಯಮಿ), ನರಸಿಂಗ್ ಜೋಶಿ (ತೆರಿಗೆ ಸಲಹೆಗಾರ), ಗಜಾನನ್ ರಾಮನಕಟ್ಟಿ (ಉದ್ಯಮಿ), ಪ್ರಸಾದ್ ಘಾಡಿ (ಉದ್ಯಮಿ), ಭೂಷಣ್ ರೇವಣ್ಕರ್ (ಉದ್ಯಮಿ), ಸುನೀತಾ ಪವಾರ್ (ಉದ್ಯಮಿ), ಶ್ರೀಮತಿ ವರದಾ ಹಪ್ಪಳಿ (ಕೈಗಾರಿಕೋದ್ಯಮಿ), ಶ್ರೀಮತಿ ಮಂಜುಳಾ ಹೆಗಡೆ (ಮಹಿಳಾ ಮಂಡಲ ಸಂಯೋಜಕಿ ) ಇವರು ನಿರ್ದೆಶಕರಾದರು. ಚೀಫ್ ಮ್ಯಾನೇಜರ್ ಶ್ರೀಮತಿ ಅನುಷಾ ಜೋಶಿ ಮತ್ತು ಶ್ರೀಮತಿ. ದೀಪಾ ಪ್ರಭುದೇಸಾಯಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಭರತ್ ರಾಠೋಡ್……

ಮಾಜಿ ಮೇಯರ್ ವಿಜಯ್ ಮೋರೆ, ತೆರಿಗೆ ಸಲಹೆಗಾರ ಸಂದೀಪ್ ಖನ್ನುಕರ್, ಸವಿತಾ ಕಾಂಬ್ಳೆ, ನಾಗರತ್ನ ರಾಮಗೊಂಡ, ಕಿಶೋರ್ ಕಾಕಡೆ, ಮಿಲಿಂದ್ ಪಾಟೀಲ್, ಶೀತಲ್ ಚಿಲ್ಮಿ ಉಪಸ್ಥಿತರಿದ್ದರು.

ಸೊಸೈಟಿಯು ಎರಡು ಶಾಖೆಗಳನ್ನು ಹೊಂದಿದೆ. ಮೇಜರ್ ಬ್ರಾಂಚ್ ಪಿ. ಗಾಡ್ಗೀಳ್ ಗೋಲ್ಡ್ ಶೋರೂಂ ಕಟ್ಟಡದ ಎರಡನೇ ಮಹಡಿಯಲ್ಲಿದೆ ಮತ್ತು ಎರಡನೇ ಶಾಖೆ ಫುಲ್ಬಾಗ್ ಸ್ಟ್ರೀಟ್ನಲ್ಲಿದೆ. ಮೂರನೇ ಶಾಖೆಯನ್ನು ಶೀಘ್ರದಲ್ಲೇ ಖಾನಾಪುರದಲ್ಲಿ ತೆರೆಯಲಾಗುವುದು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *