Breaking News

ಚಿರತೆ,ಕತ್ತೆ ಕಿರುಬ,ಜಿಂಕೆ ಆಯ್ತು ಈಗ ಆನೆಯೂ ಬಂತು…!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಪಯಣ ಮುಂದುವರೆದಿದೆ.ಮೂರು ಚಿರತೆ ,ಎರಡು ಕತ್ತೆ ಕಿರುಬು,ಜಿಂಕೆಯ ಬಳಿಕ ಇವತ್ತು ಆನೆಯೂ ರಸ್ತೆಗೆ ಬಂದಿದೆ.

ಉಮೇಶ್ ಕತ್ತಿ ಅವರಿಗೆ ಕಾಡು ಪ್ರಾಣಿಗಳ ಮೇಲೆ ಪ್ರೀತಿಯೋ..? ಅಥವಾ ಕಾಡು ಪ್ರಾಣಿಗಳಿಗೆ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಭೀತಿಯೋ ಗೊತ್ತಿಲ್ಲ.ಆದ್ರೆ ಒಂದರ ಮೇಲೊಂದು ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ರಿವೆ.ಸಚಿವರ ತವರು ಜಿಲ್ಲೆಗೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಖಾನಾಪೂರ ತಾಲ್ಲೂಕಿನ ಕೊಡುಗೈಯಿ ರಸ್ತೆಯ ಮೇಲೆ ಇಂದು ಗಜರಾಜ ಓಡಾಡುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಖಾನಾಪೂರ ತಾಲ್ಲೂಕಿನಲ್ಲಿ ವಿಶಾಲವಾದ ಅರಣ್ಯ ಪ್ರದೇಶ ಇದೆ. ಇಲ್ಲಿ ಆಗಾಗ್ಗೆ ಆನೆಗಳು ಬರುವುದು ಸಾಮಾನ್ಯ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *