Breaking News

ಗೋಕಾಕ್ ಕ್ಷೇತ್ರದಲ್ಲಿ,ಅಲ್ಲಿಯೂ ಸೈ…ಇಲ್ಲಿಯೂ ಸೈ…ಎಲ್ಲರಿಗೂ ಜೈ….!!!!

ಬೆಳಗಾವಿ- ಮತದಾನದ ದಿನಾಂಕ ಸಮೀಪಿಸುತ್ತಿದ್ದ.ತೆಯೇ ಗೋಕಾಕ್ ಕ್ಷೇತ್ರ ಈಗ ಹೈ ವೋಲ್ಟೇಜ್ ಕ್ಷೇತ್ರವಾಗಿ ಉಳಿದಿಲ್ಲ ರಾಜಕೀಯ ಲೆಕ್ಕಾಚಾರಿಗಳ ಲೆಕ್ಕಾಚಾರವನ್ನೇ ಅದಲು ಬದಲು ಮಾಡುವ ಕ್ಷೇತ್ರವಾಗಿ ಮಾರ್ಪಟ್ಟಿದೆ .

ಗೋಕಾಕ್ ಕ್ಷೇತ್ರದಲ್ಲಿ ಲಖನ್ ಕಾಂಗ್ರೆಸ್ ಅಭ್ಯರ್ಥಿ,ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ,ಅಶೋಕ ಪೂಜಾರಿ ಜೆಡಿಎಸ್ ಅಭ್ಯರ್ಥಿ ಆಗಿದ್ದರೂ ಸಹ ಇಲ್ಲಿ ರಾಜಕೀಯ ಪಕ್ಷಗಳು ನಾಮ ಕೇ ವಾಸ್ತೆ ಅನ್ನೋದು ಸ್ಪಷ್ಟವಾದ ಚಿತ್ರಣ ಕಾಣುತ್ತಿದೆ ನಿಜವಾಗಿಯೂ ಇಲ್ಲಿ ಸ್ಪರ್ದೆ ಇರೋದು ಜಾರಕಿಹೊಳಿ ಪರ ಮತ್ತು ವಿರೋದಿಗಳ ನಡುವೆ ಎನ್ನುವದು ನೂರಕ್ಕೆ ನೂರು ಸತ್ಯ

ಜಾರಕಿಹೊಳಿ ಕುಟುಂಬದಲ್ಲೇ ಈಗ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ ಅವರ ಪರವಾಗಿರುವ ಬೆಂಬಲಿಗರು ಈ ಚುನಾವಣೆಯಲ್ಲಿ ಇಲ್ಲಿಯೂ ಸೈ ಅಲ್ಲಿಯೂ ಸೈ…ಎಲ್ಲರಿಗೂ ಜೈ ಎನ್ನುವ ಪರಿಸ್ಥಿತಿ ಎದುರಾಗಿದೆ.

ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿಯವರ,ಜಂಗಮ ಜೋಳಿಗೆಯಲ್ಲಿ ಭರಪೂರ್ ಕಲೆಕ್ಷನ್ ಆಗುತ್ತಿರುವದರಿಂದ ಗೋಕಾಕ್ ಕ್ಷೇತ್ರದಲ್ಲಿ ಇವರ ಪ್ರತಿಸ್ಪರ್ಧಿ ಗಳ ಟೆನಶ್ಯನ್ ಹೆಚ್ಚಿಸಿದೆ.

ಕಳೆದ ಮೂರು ಚುನಾವಣೆಗಳಲ್ಲಿ ಸೋತಿರುವ ಅಶೋಕ ಪೂಜಾರಿಯವರ ಜೋಳಿಗೆ ಈ ಬಾರಿ ಗಟ್ಟಿಯಾಗಿರುವದರಿಂದ ಅಶೋಕ ಪೂಜಾರಿ ಪ್ರತಿಸ್ಪರ್ಧಿಗಳ ಭದ್ರಕೋಟೆ ಭೇದಿಸಲು ತಂತ್ರ ರೂಪಿಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ರೋಡ್ ಶೋ,ಮಾದ್ಯಮಗಳಿಗೆ ಹೇಳಿಕೆ ಕೊಡವದು .ಸೇರಿದಂತೆ ಹಲವಾರು ವಿಷಯಗಳಿಂದ ದೂರವಿದ್ದು ತಮ್ಮದೇ ಶೈಲಿಯಲ್ಲಿ ಮತದಾರರನ್ನು ಓಲೈಸುತ್ತಿದ್ದಾರೆ,ಬೆಳಿಗ್ಗೆಯಿಂದ ಸಂಜೆಯವರೆಗೆ ಹಳ್ಳಿಗಳಲ್ಲಿ ಸುತ್ತಾಡುವದು,ಸಂಜೆ ಬೈಕ್ ಹತ್ತಿ ಗೋಕಾಕ್ ನಗರದಲ್ಲಿ ಮತಬೇಟೆ ಆಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ,ಇಬ್ಬರ ಜಗಳದಲ್ಲಿ ಮೂರನೇಯ ವ್ಯೆಕ್ತಿಗೆ ಲಾಭ ಎಂದು ಹೇಳುತ್ತಿದ್ದು ಬ್ಯಾಲೇಟ್ ಪೇಪರ್ ನಲ್ಲಿ ನನ್ನ ಹೆಸರು ಮೂರನೇಯ ಕ್ರಮಾಂಕದಲ್ಲಿದ್ದು ಲಾಭ ಆಗೋದು ನನಗೇ ಎಂದು ಗೆಲುವಿನ ನಗೆ ಬೀರುತ್ತಿದ್ದಾರೆ.

ಒಟ್ಟಾರೆ ಗೋಕಾಕ್ ಕ್ಷೇತ್ರದಲ್ಲಿ
ಅಲ್ಲಿಯೂ ಸೈ
ಇಲ್ಲಿಯೂ ಸೈ
ಎಲ್ಲರಿಗೂ ಜೈ ಎನ್ಮುವ ವಾತಾವರಣ ಇದೆ.

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.