ಗೋಕಾಕ್ ಮರ್ಡರ್, ಕೊನೆಗೂ ಶವ ಪತ್ತೆ ಮಾಡಿದ ಪೋಲೀಸರು

ಬೆಳಗಾವಿ- ಗೋಕಾಕ್ ವ್ಯಾಪಾರಿ ಕಾಣೆಯಾಗಿ ಒಂದು ವಾರದವರೆಗೆ ಹಗಲು ರಾತ್ರಿ ಕಾರ್ಯಾಚರಣೆ ನಡೆಸಿದ ಪೋಲೀಸರು ಹತ್ಯೆಯಾಗಿದ್ದ ವ್ಯಾಪಾರಿಯ ಶವವನ್ನು ಇಂದು ರಾತ್ರಿ ಪತ್ತೆ ಮಾಡಿದ್ದಾರೆ.

ಇಬ್ಬರು ವೈದ್ಯರು ಸೇರಿ ಗೋಕಾಕ್ ಮೂಲದ ವ್ಯಾಪಾರಿ ರಾಜು ಉರ್ಫ ಮುನ್ನಾ ಝಂವರ ಎಂಬಾತನ ಮರ್ಡರ್ ಮಾಡಿ,ಶವವನ್ನು ಕಾಲುವೆಗೆ ಎಸೆದಿದ್ದರು. ಆದ್ರೆ ಕಳೆದ ಆರು ದಿನಗಳಿಂದ ಶವ ಪತ್ತೆಯಾಗಿರಲಿಲ್ಲ

ಇಂದು ರಾತ್ರಿ ಗೋಕಾಕ್ ತಾಲ್ಲೂಕಿನ ಪಂಚನಾಯಕನ ಹಟ್ಟಿಬಳಿ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಶವ ಪೈಪಿನಲ್ಲಿ ಸೇರಿಕೊಂಡಿತ್ತು ಇಂದು ರಾತ್ರಿ ಪೈಪು ಒಡೆದು ಶವವನ್ನು ಹೊರತೆಗೆದಿದ್ದಾರೆ.ಆರು ದಿನಗಳ ನಂತರ ಹತ್ಯೆಯಾಗಿದ್ದ ಮುನ್ನಾ ಉರ್ಫ ರಾಜು ಶವ ಕೊನೆಗೂ ಪತ್ತೆಯಾಗಿದೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *