Breaking News
Home / Breaking News / ಉತ್ತರ ಕರ್ನಾಟಕದ ಜನರ ವಿಶ್ವಾಸ ಗಳಿಸುತ್ತೇನೆ.ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ-ಕುಮಾರಸ್ವಾಮಿ

ಉತ್ತರ ಕರ್ನಾಟಕದ ಜನರ ವಿಶ್ವಾಸ ಗಳಿಸುತ್ತೇನೆ.ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ-ಕುಮಾರಸ್ವಾಮಿ

ಬೆಳಗಾವಿ- ಉತ್ರರ ಕರ್ನಾಟಕದ ಹೈದ್ರಾಬಾದ ಕರ್ನಾಟಕ ಪ್ರದೇಶದ ಜಿಲ್ಲೆಗಳ ಪ್ರವಾಸ ಮಾಡಿ ಜೆಡಿಎಸ್ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರನ್ನು ಪಕ್ಷದ ಸಂಘಟನೆಗೆ ಅಣಿಗೊಳಿಸಿ ಪಕ್ಷವನ್ನು ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಇಂದಿನ ೫ ದಿನ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಪ್ರವಾಸ. ಪಕ್ಷ ಸಂಘಟನೆ ಚಾಲನೆ ನೀಡಲು ವಿಧಾನಸಭೆ ವಾರು ಕಾರ್ಯಕರ್ತರ ಸಭೆ.ನಡೆಸಿ ಜಿಲ್ಲೆಗಳಲ್ಲಿಯೆ ಪಕ್ಷದ ಸ್ಥಿತಿಗತಿ ಏನಿದೆ ಎಂಬ ಚರ್ಚೆ ಮಾಡಲಾಗುವುದು. ಎಂದರು

ಪಕ್ಷ ಪುನಶ್ಚೇತನ ಗೊಳಿಸಲು ಕ್ರಮ. ಬೆಳಗಾವಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಈಗಾಗಲೇ ಭೇಟಿ ನಿಡಿದ್ದಾರೆ. ಆದರೇ ಕಾಂಗ್ರೆಸ್, ಬಿಜೆಪಿಯಿಂದ ಅತಿವೃಷ್ಠಿ, ಬರಕ್ಕೆ ಯಾವುದೇ ಸ್ಪಂಧನೆ ಸಿಕ್ಕಿಲ್ಲ. ಉತ್ತರ ಕರ್ನಾಟಕ ಜನರ ಸಮಸ್ಯೆ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರ ಗಮನ ಹರಿಸಿಲ್ಲ. ಎಂದು ಕುಮಾರಸ್ವಾಮಿ ಆರೋಪಿಸಿದರು

ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ಬಗ್ಗೆ ಮಾತನಾಡಿದ್ರು.
ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಬೆಳಗಾವಿಯಲ್ಲಿ ರೈತರ ಆಲುಗಡ್ಡೆ, ಈರುಳ್ಳಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕುಮಾರ ಸ್ವಾಮಿ ಆರೋಪಿಸಿದರು

ಸಿಎಂ ನಂಜನಗೂಡಿನಲ್ಲಿ ಸಭೆ ವಿಚಾರ. ಮಡಿಕೇರಿಯಲ್ಲಿ ಗಿರಿಜನರ ನಿರಂತರ ಹೋರಾಟ ನಡೆಯುತ್ತಿದೆ. ಬಿಸಿಲು, ಮಳೆ ಲೆಕ್ಕಿಸದೆ ಹೋರಾಟ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬಡವರ ರಕ್ತ ಹಿರಿದ್ದಾತೆ. ಇದು ನಾಗರೀಕ ಸರ್ಕಾರವೇ ಎಚ್ ಡಿಕೆ ಪ್ರಶ್ನೆ. ಮಾಡಿದರು
ಸಿಎಂ ಮಡಿಕೇರಿಗೆ ಹೋಗಿ ಗಿರಿಜನರ ಸಮಸ್ಯೆ ಯಾಕೆ ಕೇಳಲಿಲ್ಲ. ಅಮಾಯಕ ಗಿರಿಜನರನ್ನು ಬೀದಿಗೆ ಹಾಕಿದ್ದೆ ಸರ್ಕಾರದ ಸಾಧನೆ. ಗಿರಿಜನರ ಬೆತ್ತಲೆ ಮೆರವಣಿ ಮಾಡಿದ್ರು ಸರ್ಕಾರ ಕಿವಿ ಕೊಡುತ್ತಿಲ್ಲ. ಕೇವಲ ಗೂಟದ ಕಾರು ಪಡೆಯಲು ನೀವು ಮಂತ್ರಿ ಆಗಿದ್ದಿರಾ ಕಾಗೋಡು ತಿಮ್ಮಪ್ಪ ವಿರುದ್ಧೆ ಎಚ್ ಡಿಕೆ ವಾಗ್ದಾಳಿ.ನಡೆಸಿದರು
ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂಬ ಸಿಎಂ ಹೇಳಿಕೆ ವಿಚಾರ.ಪ್ರಸ್ತಾಪಿಸಿದ ಅವರು ಯಾರ ಹಂಗಿಲ್ಲದೆ ರಾಜ್ಯದಲ್ಲಿ ೧೨೦ ಸ್ಥಾನ ಗೆಲ್ಲುವ ಚಲದಿಂದ ಹೊರಟ್ಟಿದ್ದೆನೆ.ಸಿದ್ಧರಾಮಯ್ಯ ಜೆಡಿಎಸ್ ಪಕ್ಷದ ಕುರಿತು ಹಗುರವಾಗಿ ಮಾತನಾಡುವದನ್ನು ನಿಲ್ಲಿಸಲಿ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರುಉತ್ತರ ಕರ್ನಾಟಕದ ಜನತೆಯ ವಿಶ್ವಾಸ ಗಳಿಸುವದು ನನಗೆ ಅನಿವಾರ್ಯವಾಗುದ್ದು ಹದಿನೈದು ದಿನಗಳ ಕಾಲ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ವಾಸ ಮಾಡಿ ಈ ಭಾಗದ ಜನರ ವಿಶ್ವಾಸ ಗಳಿಸುತ್ರೇನೆ ಅನೇಕ ಜನ ಬಿಜೆಪಿ ಹಾಗು ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *