Breaking News

LOCAL NEWS

ಇಂಟರ್ ಸಿಟಿ 13.5ಎಂ ಮಾದರಿಯ ಎಸಿ ಸ್ಲೀಪರ್ ಬಸ್ ಖರೀಧಿಸಿದ VRL

3 ವರ್ಷದಲ್ಲಿ ಸಾವಿರ ಬಸ್ ಖರೀದಿ *ಇಂಟರ್ ಸಿಟಿ 13.5ಎಂ ಮಾದರಿಯ ಎಸಿ ಸ್ಲೀಪರ್ ಬಸ್‌ಗಳ ಹಸ್ತಾಂತರ ಬೆಂಗಳೂರು- ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಮುಂದಿನ ಮೂರು ವರ್ಷದಲ್ಲಿ 1,000 ಹೊಸ ಐಷಾರಾಮಿ ಬಸ್‌ಗಳನ್ನು ಖರೀದಿಸುವ ಗುರಿ ಹೊಂದಲಾಗಿದೆ ಎಂದು ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಹೇಳಿದ್ದಾರೆ. ವೋಲ್ವೊ ಐಷರ್ ವಾಣಿಜ್ಯ ವಾಹನಗಳ ಕಂಪನಿ ಸೋಮವಾರ ಆಯೋಜಿಸಿದ್ದ ‘ಐಷರ್ ಇಂಟರ್ ಸಿಟಿ 13.5 ಎಂ …

Read More »

ಬೆಳಗಾವಿ:ಹೃದಯಾಘಾತದಿಂದ ಪೋಲೀಸ್ ಪೇದೆಯ ಸಾವು.

ಬೆಳಗಾವಿ-29 ವರ್ಷ ವಯಸ್ಸಿನ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನೊಪ್ಪಿದ ಘಟನೆ,ಬೆಳಗಾವಿ ಮಹಾನಗರದ ಕಾಕತಿ ಠಾಣೆಯಲ್ಲಿ ನಡೆದಿದೆ. ಕಾಕತಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ,ಮೆಹಬೂಬ್ ರಾಜಮಹ್ಮದ್ ರೇಶ್ಮಿ (29) ಹೃದಯಾಘಾತದಿಂದ ಮೃತ‌ನಾದ ಪೇದೆಯಾಗಿದ್ದುಬೆಳಗ್ಗೆ ಠಾಣೆಗೆ ಬಂದಿದ್ದ ಮೆಹಬೂಬ್ ರೇಶ್ಮಿ ಎದೆ ನೋವು ಅಂತಾ ಮನೆಗೆ ಹೋಗಿದ್ದರು. ತಕ್ಷಣವೇ ‌ಮನೆಗೆ ತೆರಳಿ ಕೆಲಹೊತ್ತು ‌ವಿಶ್ರಾಂತಿ ಪಡೆದಿದ್ದಾರೆ,ಆದರೆ ಎದೆ ನೋವು ಹೆಚ್ಚಾದ ಹಿನ್ನಲೆಯಲ್ಲಿ ‌ಠಾಣೆಗೆ ಮಾಹಿತಿ ನೀಡಿದ ಕುಟುಂಬಸ್ಥರು,ತಕ್ಷಣವೇ ಠಾಣೆಯ ಸಿಬ್ಬಂದಿ ಕೆಎಲ್ಇಗೆ ದಾಖಲಿಸುವಾಗ ಮಾರ್ಗಮಧ್ಯೆ …

Read More »

ಪತ್ರಿಕಾಧರ್ಮ, ವೃತ್ತಿಮೌಲ್ಯ ಕಾಪಾಡಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಿವಿಮಾತು.

ಬೆಳಗಾವಿ, -: “ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಹಾಗೂ ಹೊಣೆಗಾರಿಕೆಯಿದೆ. ಪತ್ರಕರ್ತರು ಪತ್ರಿಕಾ ನೀತಿ, ಧರ್ಮದನುಸಾರ ಕಾರ್ಯ ನಿರ್ವಹಿಸಿ, ಯುವ ಪತ್ರಕರ್ತರಿಗೆ ಮಾದರಿಯಾಗಬೇಕು. ಪಾರದರ್ಶಕ ವರದಿಯ ಮೂಲಕ ಸಮಾಜದ ಪ್ರಗತಿಗೆ ಸಹಕರಿಸಬೇಕು” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಕರೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೊಂ) ಜಿಲ್ಲಾ ಘಟಕ ಬೆಳಗಾವಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ …

Read More »

ಬೆಳಗಾವಿಯಲ್ಲಿ ಸಿಲಿಂಡರ್ ಸ್ಪೋಟ ನಾಲ್ವರಿಗೆ ಗಂಭೀರ ಗಾಯ.

  ಬೆಳಗಾವಿ- ಬೆಳಗಾವಿ ನಗರದ ಗಾಂಧೀನಗರದ ಸುಭಾಷ್ ಗಲ್ಲಿಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಿಲಿಂಡರ್ ಸ್ಪೋಟವಾದ ಕಾರಣ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ‌. ಗಾಂಧೀನಗರದ ಸುಭಾಷ್ ಗಲ್ಲಿಯಲ್ಲಿ ಮಂಜುನಾಥ ಅಥಣಿ ಹಾಗೂ ಇವರ ಪತ್ನಿ ಲಕ್ಷ್ಮೀ ಗಂಭೀರವಣಾಗಿ ಗಾಯಗೊಂಡಿದ್ದು ಇವರ ಇಬ್ಬರು ಮಕ್ಕಳೂ ಗಾಯಗೊಂಡಿದ್ದು ಇವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜುನಾಥ ಅಥಣಿ ಬೆಳಗಾವಿಯ ಕೆಎಸ್ಸಾರ್ಟಿಸಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬೆಳಗಿನ ಜಾವ ಡ್ಯೂಟಿಗೆ ಹೋಗುವಾಗ  …

Read More »

ರಾಯಣ್ಣನ ಮೂರ್ತಿಗಾಗಿ,ರೇವಣ್ಣ ಅವರಿಗೆ ಸತ್ಕರಿಸಿದ ಗಡ್ಡೆ ಬ್ರದರ್ಸ್…!!

ಬೆಳಗಾವಿ -ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಾಲೇಜು ಆವರಣದಲ್ಲಿ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲು ವ್ಯಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದ,ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರಿಗೆ ಬೆಳಗಾವಿಯ ಗಡ್ಡೆ ಸಹೋದರರು ಸತ್ಕರಿಸಿ ಗೌರವಿಸಿದರು. ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ,ಹಾಗೂ ಹೆಚ್ ವಿಶ್ವನಾಥ ಅವರು ಇಂದು ಗಡ್ಡೆ ಡೆವಲಪರ್ಸ್ ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸುಧೀರ್ ಗಡ್ಡೆ ,ಮತ್ತು ತುಷಾರ್ ಗಡ್ಡೆ ಅವರು ಇಬ್ಬರು …

Read More »

ಅಶೋಕ್ ಮಣ್ಣೀಕೇರಿಗೆ ಆಗಿದ್ದು ಹೃದಯಾಘಾತವೋ ಅಥವಾ ಅದೊಂದು ಕೊಲೆಯೋ??

ಬೆಳಗಾವಿ-ಆತ ವೃತ್ತಿಯಲ್ಲಿ ಗ್ರೇಡ್ ೨ ತಹಶೀಲ್ದಾರ್.. ನಿನ್ನೆ ಎಂದಿನಂತೆ ಕೆಲಸ ಮುಗಿಸಿ ಬಂದ ಆತ ಊಟ ಮಾಡಿ ಮಲಗಿದ್ದೆ ಬಂತು.ಮತ್ತೆ ಮೇಲೇಳಲೇ ಇಲ್ಲ. ತಹಶೀಲ್ದಾರ್ ಪತ್ನಿ ಹೃದಯಾಘಾತ ಆಗಿ ಅವರು ತೀರಿ ಹೋಗಿದ್ದಾರೆ ಅಂತ ಹೇಳಿದ್ರೆ ಇತ್ತ ತಹಶೀಲ್ದಾರ್ ಪೋಷಕರು ಹಾಗೂ ಸಹೋದರಿಯರು ಅನುಮಾನಾಸ್ಪದ ಸಾವು ಅಂತ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ದಕ್ಷ ಆಡಳಿದಿಂದಲೇ ಹೆಸರಾಗಿದ್ದ ತಹಶೀಲ್ದಾರ್ ಯಾರು ಅವರಿಗೇ ಏನಾಯತು ಅನ್ನೋದು ಅನುಮಾನ. ಹೃದಯಾಘಾತ ಆಗಿದೆ ಬೇಗ …

Read More »

, ಮುಖ್ಯಮಂತ್ರಿಗೆ ಸಿಗುವ ಗೌರವ ಅವರಿಗೂ ಸಿಗತೈತಿ…!!

ಬೆಳಗಾವಿ-ಇವತ್ತು ಆಷಾಢ ಏಕಾದಶಿ, ಮಹಾರಾಷ್ಟ್ರದ ಪಾಲಿಗೆ ಅದೊಂದು ನಾಡಹಬ್ಬವೇ ಇದ್ದಂತೆ. ಅದಕ್ಕಾಗಿಯೇ ಪ್ರತಿ ವರ್ಷ ಅಲ್ಲಿನ ಸಿಎಂ ಸ್ವಪತ್ನಿ ಸಮೇತರಾಗಿ ಆಗಮಿಸಿ ವಿಠ್ಠಲ-ರುಕ್ಮೀಣಿಗೆ ಪಂಢರಪುರಕ್ಕೆ ಆಗಮಿಸಿ ವಿಠ್ಠಲ-ರುಕ್ಮೀಣಿಗೆ ಸರ್ಕಾರಿ ಪೂಜೆ ಸಲ್ಲಿಸುವ ಸಂಪ್ರದಾಯ. ಪ್ರತಿ ವರ್ಷ ಆಷಾಢ ಏಕಾದಶಿಗೆ ನಮ್ಮ ರಾಜ್ಯದಿಂದಲೂ ಸಹಸ್ರಾರು ವಾರಕರಿ ಸಂತರು ಕಾಲ್ನಡಿಗೆಯಲ್ಲಿ ತೆರಳಿ ವಿಠ್ಠಲ-ರುಕ್ಮೀಣಿ ದರ್ಶನ ಪಡೆದು ಪುನೀತರಾಗುತ್ತಾರೆ. ಪ್ರತಿ ಆಷಾಢ ಏಕಾದಶಿಯ ಸರ್ಕಾರಿ ಪೂಜೆಯ ವೇಳೆ ಸಿಎಂ ದಂಪತಿ ಜೊತೆಗೆ ವಾರಿ (ಪಾದಯಾತ್ರೆ) …

Read More »

ಬೆಳಗಾವಿಯ ಕಿರುಚಿತ್ರಕ್ಕೆ ನ್ಯಾಶನಲ್ ಅವಾರ್ಡ್..!!

‘ಬೆಳಗಾವಿ: ಗೋಕಾಕ ತಾಲೂಕು ಅರಭಾವಿಯ ವಿನಾಯಕ ಶಿವಲಿಂಗ ಉಪ್ಪಾರ ನಾಯಕ ನಟನಾಗಿ ನಟಿಸಿ ನಿರ್ದೇಶಿಸಿದ, ಶಿಕ್ಷಣದ ಮಹತ್ವದ ಕುರಿತು ಸಾಮಾಜಿಕ‌ ಸಂದೇಶ ಹೊಂದಿರುವ ‘ಗುರುವೇ ದೇವರು’ ಕಿರುಚಿತ್ರಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ‌ ದೊರಕಿದೆ. ಚಿತ್ರದ‌ ಉತ್ತಮ ನಿರ್ದೇಶನಕ್ಕೆ ಪ್ರಶಸ್ತಿ ಬಂದಿದೆ. ಫಿಲ್ಮ ಫೆಸ್ಟಿವಲ್ ಜಂಕ್ಷನ್ ವತಿಯಿಂದ ಇತ್ತೀಚಿಗೆ ಗ್ರೇಟ್ ಇಂಡಿಯನ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮವನ್ನು ಕೊಲ್ಕತ್ತಾದಲ್ಲಿ ಆಯೋಜಿಸಲಾಗಿತ್ತು. ಉತ್ತಮ‌ ನಿರ್ದೇಶನ, ಉತ್ತಮ ಚಿತ್ರಕಥೆ, ಉತ್ತಮ ಚಿತ್ರ, ಉತ್ತಮ …

Read More »

ತಹಶೀಲದಾರ್ ಅಶೋಕ್ ಮನ್ನೀಕೇರಿ ಇನ್ನಿಲ್ಲ.

ಬೆಳಗಾವಿ- ಬೆಳಗಾವಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಈ ಹಿಂದೆ ಲಕ್ಷ್ಮೀ ಹೆಬ್ಬಾಳಕರ ಅವರು ಶಾಸಕರಾಗಿದ್ದಾಗ ಅವರ ಆಪ್ತ ಸಹಾಯಕರಾಗಿದ್ದ,ಅಶೋಕ ಮನ್ನೀಕೇರಿ ಮದ್ಯರಾತ್ರಿ ಸಾವನ್ನೊಪ್ಪಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಕೆಲವು ಮೂಲಗಳ ಪ್ರಕಾರ ಮಧ್ಯರಾತ್ರಿ ಅವರಿಗೆ ಹೃದಯಾಘಾತ ವಾದ ಕಾರಣ ಕೆಎಲ್ಇ ಆಸ್ಪತ್ರೆಗೆ ಸೇರಿಸಲಾಗಿತ್ತು, ಮದ್ಯರಾತ್ರಿ ಅವರು ಸಾವನ್ನೊಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅತ್ಯಂತ ಸ್ನೇಹಜೀವಿ,ಭಾವಜೀವಿಯಾಗಿದ್ದ ಅಶೋಕ ಮನ್ನೀಕೇರಿ,ಸರ್ಕಾರಿ ಅಧಿಕಾರಿಯಾಗಿದ್ದರೂ ಸಹ , …

Read More »

51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಕೇವಲ 2 ಟಿಎಂಸಿ ನೀರು…!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಸಂಪೂರ್ಣವಾಗಿ ಬರಿದಾಗಿದೆ.51ಟಿಎಂಸಿ ಸಾಮರ್ಥ್ಯ ದ ಜಲಾಶಯದಲ್ಲಿ ಕೇವಲ 2ಟಿಎಂಸಿ ನೀರು ಬಾಕಿ ಉಳಿದಿರುವುದು ಕಳವಳಕಾರಿ ಸಂಗತಿಯಾಗಿದೆ. 10ವರ್ಷಗಳ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಜಲಾಶಯ ಖಾಕಿಯಾಗಿದೆ.ಉಳಿದಿರುವ 2ಟಿಎಂಸಿ ನೀರು ಬೆಳಗಾವಿ ನಗರ, ಹುಕ್ಕೇರಿ, ಸಂಕೇಶ್ವರ ಪಟ್ಟಣ ಸೇರಿ ಕುಡಿಯಲು ಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ.ಕೃಷಿ ಚಟುವಟಿಕೆಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇನ್ನೊಂದು ತಿಂಗಳೊಳಗೆ ಮಳೆ ಬಾರದಿದ್ದರೆ …

Read More »

ಕ್ರಿಕೆಟ್ ವಿಶ್ವಕಪ್ ಎಲ್ಲಿ ಯಾವಾಗ ? ವೇಳಾಪಟ್ಟಿ ಪ್ರಕಟ

ICC World Cup 2023 Schedule: ಬಹುನಿರೀಕ್ಷಿತ ಏಕದಿನ ವಿಶ್ವಕಪ್​ ವೇಳಾಪಟ್ಟಿ ಪ್ರಕಟ, ಆ ದಿನವೇ ಇಂಡೋ -ಪಾಕ್​ ಕದನ! ICC World Cup 2023 Schedule: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ನ (ODI World Cup 2023) ಸಂಪೂರ್ಣ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಿಡುಗಡೆ ಮಾಡಿದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ನ (ODI World …

Read More »

ಬೆಳಗಾವಿಯಲ್ಲಿ ಆ್ಯಪಲ್ ಮೋಬೈಲ್ ,SFS ಘಟಕ ಸ್ಥಾಪಿಸಲು ಕಂಪನಿ ನಿರ್ಧಾರ..!!

*ಬೆಳಗಾವಿಯಲ್ಲಿ 250 ಕೋಟಿ ರೂ. ಹೂಡಿಕೆಗೆ ಎಸ್‌ಎಫ್‌ಎಸ್‌ ಕಂಪನಿ ಪ್ರಸ್ತಾವನೆ: ಎಂ ಬಿ ಪಾಟೀಲ* ಬೆಂಗಳೂರು: ಆಪಲ್ ಫೋನ್ ತಯಾರಿಸುವ ಫಾಕ್ಸ್‌ಕಾನ್‌ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುವ ಎಸ್‌ಎಫ್‌ಎಸ್‌ ಕಂಪನಿಯು ಬೆಳಗಾವಿಯಲ್ಲಿ 250 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದು, ಇದಕ್ಕಾಗಿ 30 ಎಕರೆ ಭೂಮಿಯನ್ನು ಕೇಳಿದೆ. ಇದು ಸ್ವಾಗತಾರ್ಹ ಪ್ರಸ್ತಾವನೆಯಾಗಿದ್ದು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ …

Read More »

ಬೆಳಗಾವಿಯ ಸರ್ದಾರ್ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ಬಹುಮಾನ ಘೋಷಿಸಿದ ಶಾಸಕ ಸೇಠ..!!

ಸರ್ದಾರ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ವಿಶೇಷ ಬಹುಮಾನ ಘೋಷಣೆ ಮಾಡಿದ ಶಾಸಕ ರಾಜು ಸೇಠ..! ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಸೇಠ ಅವರು ಬೆಳಗಾವಿಯ 150 ವರ್ಷಕ್ಕೂ ಹಳೆಯ ಸರದಾರ್ಸ್ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ವಿಶೇಷ ಸೌಲಭ್ಯ ನೀಡುವ ಭರವಸೆ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ಘೋಷಣೆ ಮಾಡಿದ ಅವರು ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ …

Read More »

ಬೆಳಗಾವಿ, ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತರ ದಾಳಿ

ಬೆಳಗಾವಿ-ಬೆಳಗಾವಿ ನಗರದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದ್ದು ಬೆಳಗಾವಿಯ ಭ್ರಷ್ಟ ಅಧಿಕಾರಿಗಳು ಇವತ್ತು ಬೆಳ್ಳಂ ಬೆಳಗ್ಗೆ ಬೆಚ್ಚಿಬಿದ್ದಿದ್ದಾರೆ. ಬೆಳಗಾವಿ ನಗರದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ ‌ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಮನೆ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಶೇಖರ್ ಬಹುರೂಪಿ ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಹೆಸರಿಗೆ ತಕ್ಕಂತೆ ದಾಳಿಗೆ ತುತ್ತಾದ ಇಂಜಿನಿಯರ್ ಶೇಖರ್ ಬಹುರೂಪಿಯಾಗಿದ್ದಾರೆ, ಅವರು 2019ರಲ್ಲಿ ಅಥಣಿಯಲ್ಲಿ …

Read More »