Home / Breaking News / ಬೆಳಗಾವಿ ಮುಂಬೈ ನಡುವೆ ಎಕಾನಾಮಿಕ್ ಕಾರಿಡಾರ್-ದೇಶಪಾಂಡೆ

ಬೆಳಗಾವಿ ಮುಂಬೈ ನಡುವೆ ಎಕಾನಾಮಿಕ್ ಕಾರಿಡಾರ್-ದೇಶಪಾಂಡೆ

ಬೆಳಗಾವಿ- ಬೆಂಗಳೂರು ಹಾಗು ಮುಂಬಯಿ ನಡುವೆ ಎಕಾನಾಮಿಕ್ ಕಾರಿಡಾರ್ ನಿರ್ಮಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುರುವ ಹಿನ್ನಲೆಯಲ್ಲಿ ಕೇಂದ್ರ ಸ್ಥಾನದಲ್ಲಿರುವ ಬೆಳಗಾವಿಯ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಕೈಗಾರಿಕೆ ಸಚಿವ ಆರ್ ವ್ಹಿ ದೇಶಪಾಂಡೆ ತಿಳಿಸಿದರು

ಬೆಳಗಾವಿಯ ಅಟೋ ನಗರ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಫುಲ ಅವಕಾಶವಿದೆ ಆಹಾರ ಸಂಸ್ಕರಣ ಆಧಾರಿತ ಕೈಗಾರಿಕೆಗಳನ್ನು ಇಲ್ಲಿ ತೆರೆಯಬಹುದಾಗಿದೆ ಆದರೂ ಇಲ್ಲಿಯ ಉದ್ಯಮಿಗಳು ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತಿದ್ದಾರೆ ಎಂದು ದೇಶಪಾಂಡೆ ಹೇಳಿದರು

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ ಹನಗಾ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ೩.೪೧ ಕೋಟಿ, ಅಟೋ ನಗರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ೬.೯ ಕೋಟಿ ಕಾಕತಿಗೆ ೧.೦೫ ಕೋಟಿ, ಗೋಕಾಕ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ೨.೧೦ ಕೋಟಿ ಸೇರಿದಂತೆ ಬೆಳಗಾವಿ ಕಂದಾಯ ಪ್ರದೇಶದಲ್ಲಿರುವ ೧೯ ಕೈಗಾರಿಕಢ ಪ್ರದೇಶಗಳ ಅಭಿವೃದ್ಧಿಗೆ ಒಟ್ಟು ೪೨.೯೮ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ದೇಶಪಾಂಡೆ ಮಾಹಿತಿ ನೀಡಿದರು

 

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *