ಇಟ್ಕೊಂಡವಳ ಮೋಬೈಲ್ ಗಾಗಿ ಗೆಳೆಯನನ್ನೇ ಜಜ್ಜಿ ಕೊಂದ ಕಿರಾತಕರು..!

ಬೆಳಗಾವಿ- ಮೂರು ದಿನಗಳ ಹಿಂದೆ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಎರಡೇ ಎರಡು ದಿನದಲ್ಲಿ ಭೇದಿಸುವಲ್ಲಿ ಕಾಕತಿ ಪೋಲೀಸರು ಯಶಸ್ವಿಯಾಗಿದ್ದಾರೆ

ವೈಭವ ನಗರದ ವ್ಯೆಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿ ಆತನ ಶವವನ್ನು ಕೆಂಚಾನಟ್ಟಿ ಗ್ರಾಮದಲ್ಲಿ ಎಸೆದಿದ್ದರು ಪ್ರಕಣವನ್ನು ಗಂಭೀರವಾಗಿ ಪರಗಣಿಸಿದ ಕಾಕತಿ ಪೋಲೀಸರು ಎರಡು ದಿನದಲ್ಲಿಯೇ ಪ್ರಕರಣ ಭೇಧಿಸಿ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ

ವೈಭವ ನಗರದ ಗೆಳೆಯರು ಪಾರ್ಟಿ ಮಾಡುವಾಗ ಓರ್ವನ ಮೋಬೈಲ್ ಮಾಯವಾಗುತ್ತದೆ ಈ ಮೋಬೈಲ್ ನನ್ನ ಪ್ರೇಯಸಿ ಕೊಟ್ಟಿದ್ದು ಇದು ನನಗೆ ಬೇಕು ಅತ ಗೆಳೆಯರ ಮೇಲೆ ಗರಂ ಆಗ್ರಾನೆ ಈ ಮೋಬೈಲ್ ನೀನೇ ಕದ್ದಿದ್ದು ಎಂದು ತನ್ನ ಗೆಳೆಯನ ಜೊತೆ ವಾದಕ್ಕಿಳಿದು ಆ ಭೂಪ ಉಳಿದ ಗೆಳೆಯರನ್ನು ಸೇರಿಸಿಕೊಂಡು ಮೋಬೈಲ್ ಕದ್ದ ಆರೋಪದ ಮೇಲೆ ತಮ್ಮ ಗೆಳೆಯನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡ್ತಾರೆ

ನಂತರ ರಿಕ್ಷಾದಲ್ಲಿ ಆತನ ಶವವನ್ನು ಕೆಂಚಾನಟ್ಟಿ ಗ್ರಾಮದಲ್ಲಿ ಎಸೆಯುತ್ತಾರೆ ಗ್ರಾಮಸ್ಥರು ಕೊಟ್ಟ ಸಣ್ಣ ಸುಳಿವನ್ನು ಆಧರಿಸಿ ಕಾಕತಿ ಪೋಲೀಸರು ಕಿರಾತಕರ ಜಾಲವನ್ನು ಪತ್ರೆಮಾಡಿದ್ದಾರೆ

ಕೊಲೆಯಾದ ವ್ಯೆಕ್ತಿ ಮತ್ತು ಕೊಲೆ ಮಾಡಿದ ಕಿರಾತಕರು ಇಬ್ಬರೂ ಬೆಳಗಾವಿಯ ವೈಭವ ನಗರದ ನಿವಾಸಿಗಳಾಗಿದ್ದಾರೆ ಈ ಕುರಿತು ಕಾಕತಿ ಸಿಪಿಐ ರಮೇಶ ಗೋಕಾಕ ಅವರನ್ನು ಸಂಪರ್ಕಿಸಿದಾಗ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿದೆ ವಿಚಾರಣೆ ಪೂರ್ಣಗೊಂಡ ಬಳಿಕ ಮಾಹಿತಿ ನೀಡುವದಾಗಿ ತಿಳಿಸಿದ್ದು ಸದ್ಯಕ್ಕೆ ಅವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ

ಇಟ್ಕೊಂಡವಳು ಕೊಟ್ಟ ಮೋಬೈಲ್ ಗಾಗಿ ಕುಡಿದು ಅಮಲೇರಿಕೊಂಡ ಕಿರಾತಕರು ತಮ್ಮ ಗೆಳೆಯನನ್ನೇ ಮಟ್ಯಾಶ್ ಮಾಡಿದ್ದು ದುರ್ದೈವದ ಸಂಗತಿಯಾಗಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *