Breaking News
Home / Breaking News / ಪಿಕನಿಕ್ ಗೆ ಹೋಗಿದ್ದ ಇಬ್ಬರು ಯುವಕರು ನೀರು ಪಾಲು…

ಪಿಕನಿಕ್ ಗೆ ಹೋಗಿದ್ದ ಇಬ್ಬರು ಯುವಕರು ನೀರು ಪಾಲು…

ಬೆಳಗಾವಿ – ಪಿಕನಿಕ್ ಮಾಡಲು ಹಾಲತ್ರಿ ಹಳ್ಳಕ್ಕೆ ಹೋಗಿದ್ದ ಖಾನಾಪೂರದ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿದೆ.

ಉಮರ ಖಲೀಫಾ ,,,16 ವರ್ಷ, ಅರಫಾತ ಅರಕಾಟಿ 16 ವರ್ಷ ಇಬ್ಬರೂ ಖಾನಾಪೂರದ ಯುವಕರಾಗಿದ್ದು,ಇವರು ಮೂರು ದಿನಗಳಿಂದ ನಾಪತ್ತೆಯಾಗಿದ್ದರು.

ಇಂದು ಬೆಳಿಗ್ಗೆ ಖಾಬಾಪೂರದ ಅಸೋಗಾ ಬಳಿ ಇರುವ ಹಾಲತ್ರಿ ಹಳ್ಳ,ಮಲಪ್ರಭಾ ನದಿಯ ಉಗಮ ಸ್ಥಾನದಲ್ಲಿ ಇಬ್ಬರು ಯುವಕರ ಶವಗಳು ಪತ್ತೆಯಾಗಿವೆ.

ಒಟ್ಟು ಮೂರು ಜನ ಯುವಕರು ಪಿಕನಿಕ್ ಗಾಗಿ ಖಾನಾಪೂರದಿಂದ ಅಸೋಗಾ ಸ್ಪಾಟ್ ಗೆ ಹೊರಟಿದ್ದರು ಆದ್ರೆ ಓರ್ವ ಯುವಕನ ಬೈಕ್ ನಲ್ಲಿ ಪೆಟ್ರೋಲ್ ಮುಗಿದ ಕಾರಣ ಆತ ಅರ್ದ ದಾರಿಯಿಂದ ಆತ ಮರಳಿದ್ದ

ಕಳೆದ ಮೂರು ದಿನಗಳ ಹಿಂದೆ ಇಬ್ಬರು ಯುವಕರು ನಾಪತ್ತೆಯಾಗಿದ್ದರು,ಅವರ ಮೋಬೈಲ್ ರಿಂಗ್ ಆಗ್ತಾ ಇತ್ತು,ಆದ್ರೆ ರಿಸೀವ್ ಮಾಡ್ತಾ ಇರಲಿಲ್ಲ,ಶೇಡಗಾಳಿಯಲ್ಲಿ ಅವರ ನೆಟವರ್ಕ ತೋರಿಸಿದ್ದರಿಂದ ಖಾನಾಪೂರ ಪೋಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.

ನಿನ್ನೆ ಪೋಲೀಸರಿಗೆ ಇಬ್ಬರು ಯುವಕರ ಬಟ್ಟೆ,ಮತ್ತು ಮೋಬೈಲ್ ಫೋನ್ ಗಳು ಹಾಲತ್ರಿ ಹಳ್ಳದ ಬಳಿ ಪತ್ತೆಯಾಗಿದ್ದವು,

ನಿನ್ನೆ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿದ್ದರೂ ಯುವಕರು ಪತ್ತೆಯಾಗಿರಲಿಲ್ಲ,ಇಂದು ಬೆಳಿಗ್ಗೆ ಇಬ್ಬರು ಯುವಕರ ಶವಗಳು ಪತ್ತೆಯಾಗಿವೆ.ಖಾನಾಪೂರ ಪೀಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *