ಲಕ್ಷ್ಮಣ ಸವದಿಯ ಕೃಷಿ ಖಾತೆ ಕಿತ್ತುಕೊಂಡು ಬೊಮ್ಮಾಯಿಗೆ ಕೊಟ್ಟ ಸಿಎಂ…

ಲಕ್ಷ್ಮಣ ಸವದಿಯ ಕೃಷಿ ಖಾತೆ ಕಿತ್ತುಕೊಂಡು ಬೊಮ್ಮಾಯಿಗೆ ಕೊಟ್ಟ ಸಿಎಂ…

ಬೆಳಗಾವಿ- ಡಿಸಿಎಂ ಲಕ್ಷ್ಮಣ ಸವದಿಯ ಪಾವರ್ ಗೆ ಕತ್ತರಿ ಹಾಕುವ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದು ಇಷ್ಟು ದಿನ ಲಕ್ಷ್ಮಣ ಸವದಿ ಹತ್ತಿರವೇ ಇದ್ದ ಕೃಷಿ ಖಾತೆಯನ್ನು ಬಸವರಾಜ ಬೊಮ್ಮಾಯಿಗೆ ನೀಡಲಾಗಿದೆ.

ಇಂದು ಹತ್ತು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಂಧರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ಇಲಾಖೆಯನ್ನು ಪರಮಾಪ್ತ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ ‌

ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಯ ಜೊತೆಗೆ ಈಗ ಕೃಷಿ ಮಂತ್ರಿಯಾಗಿದ್ದಾರೆ.ಶೀಘ್ರದಲ್ಲೇ ಸಚಿವ ಸಂಪುಟ ಮತ್ತೆ ವಿಸ್ತರಣೆಯಾದ್ರೆ ಕೃಷಿ ಖಾತೆಯನ್ನು ಉಮೇಶ್ ಕತ್ತಿ ಅವರಿಗೆ ನೀಡುವದು ಸಿಎಂ ಯಡಿಯೂರಪ್ಪನವರ ಪ್ಲ್ಯಾನ್ ಆಗಿದೆ .

ಲಕ್ಷ್ಮಣ ಸವದಿ ಅವರಿಂದ ಕೃಷಿ ಖಾತೆಯನ್ನು ಕಿತ್ತು ಬೊಮ್ಮಾಯಿಗೆ ನೀಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ ಇನ್ನು ಕೆಲವರು ಕೃಷಿ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಕೆಲವು ಬಿಜೆಪಿ ನಾಯಕರು ಹೇಳುತ್ತಿದ್ದಾರೆ .ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರೇ ಸ್ಪಷ್ಟಪಡಿಸಬೇಕಾಗಿದೆ.

ಫೆಬ್ರುವರಿ 17 ರಂದು ವಿ್ಆನ ಪರಿಷತ್ತಿನ ಚುನಾವಣೆ ನಡೆಯಲಿದ್ದು ಈ ಚುನಾವಣೆಯ ಫಲಿತಾಂಶ ಲಕ್ಷ್ಮಣ ಸವದಿ ಅವರ ರಾಜಕೀಯ ಭವಿಷ್ಯ ಬರೆಯಲಿದೆ .ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದರೂ ಕೆಲವು ಬಿಜೆಪಿ ಅತೃಪ್ತ ಶಾಸಕರು ಕ್ರಾಸ್ ಓಟಿಂಗ್ ಮಾಡುವ ಆತಂಕ ಲಕ್ಷ್ಮಣ ಸವದಿ ಅವರಿಗೆ ಕಾಡುತ್ತಿದೆ ಎನ್ನುವ ಸುದ್ಧಿ ರಾಜ್ಯದಲ್ಲಿ ಪ್ರಚಾರ ಪಡೆಯುತ್ತಿರುವದು ಸತ್ಯ .

ಖಾತೆ ಹಂಚಿಕೆಯಲ್ಲಿ ಲಕ್ಷ್ಮಣ ಸವದಿ ಅವರಿಗೆ ದೋಖಾ ಆಗಿದ್ದು ಸತ್ಯ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *