Breaking News
Home / Tag Archives: Belagavi crime news

Tag Archives: Belagavi crime news

ವಿರೋಧ ಮಾಡುವದೇ ಧರ್ಮ ಅಲ್ಲ,,ಜೀವದ ಜತೆಗೆ ಚೆಲ್ಲಾಟ ಆಗಬಾರದು.

ಬೆಳಗಾವಿ – ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ವಿಚಾರದ ಕುರಿತು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಬರುವ ಸಾಧ್ಯತೆ ಹಿನ್ನಲೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ಇಂದಿನಿಂದ ರಾಜ್ಯದಲ್ಲಿ ಒಂಬತ್ತು ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಯಾಗಿದ್ದು ಬಸ್ ಸಂಚಾರಕ್ಕೆ ಯಾವುದೇ ತೊಂದರೆ, ವ್ಯತ್ಯಯ ಆಗುವುದಿಲ್ಲ ಎಂದು ಸಾರಿಗೆ ಸಚಿವ …

Read More »

ಅಡುಗೆ ಮನೆಯಾದ ಬೆಳಗಾವಿ ಕೇಂದ್ರ ಬಸ್ ನಿಲ್ಧಾಣ….

ಬೆಳಗಾವಿ- ಬೆಳಗಾವಿ ಬಸ್ ನಿಲ್ಧಾಣ ಇವತ್ತು ಅಕ್ಷರಶಃ ಹೋರಾಟದ ಕೇಂದ್ರವಾಗಿದೆ ಇವತ್ತು ಇಡೀ ದಿನ ಈ ನಿಲ್ಧಾಣದಲ್ಲಿ ಕ್ರಾಂತಿಯ ಕಿಡಿಯ ಜೊತೆಗೆ ಒಲೆಯೂ ಹೊತ್ತಿದೆ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಡೆಯುತ್ತಿರುವ ಸಾರಿಗೆ ನೌಕರರ ಹೋರಾಟಕ್ಕೆ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯೆಕ್ತವಾಗಿದೆ. ಧರಣಿ ನಡೆಸುತ್ತಿರುವ ಸಾರಿಗೆ ನೌಕರರು ಮದ್ಯಾಹ್ನದ ಊಟವನ್ನು ನಿಲ್ಧಾಣದಲ್ಲೇ ಮಾಡಿದರು.ಈಗ ರಾತ್ರಿ ಊಟಕ್ಕೆ ಅಡುಗೆ ತಯಾರಿಸುವ ಕಾರ್ಯ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲೇ ನಡೆಯುತ್ತಿದೆ ಮುಷ್ಕರದಲ್ಲಿ …

Read More »

ಜೈಲಿನಿಂದಲೇ ಟೈಗರ್ ಗ್ಯಾಂಗ್ ಆಪರೇಟಿಂಗ್ ಶಂಕೆ ಡಿಸಿಐಬಿ ಪೋಲೀಸರ ದಾಳಿ

ಬೆಳಗಾವಿ-ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಟೈಗರ್ ಗ್ಯಾಂಗ್ ಸದಸ್ಯರು ಕೊಲೆ ಪ್ರಕರಣದ ಆರೋಪದ ಮೇಲೆ ಹಿಂಡಲಗಾ ಜೈಲಿನಲ್ಲಿದ್ದು,ಜೈಲಿನಿಂದಲೇ ಗ್ಯಾಂಗ್ ಆಪರೇಟಿಂಗ್ ಶಂಕೆಯ ಮೇಲಿ ಡಿಸಿಐಬಿ ಪೋಲೀಸರು ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಿದ್ದಾರೆ. ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಿರುವ ಡಿಸಿಐಬಿ ಪೋಲೀಸರು,ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.ಜೈಲಿನಲ್ಲಿದ್ದುಕೊಂಡೇ ಟೈಗರ್ ಗ್ಯಾಂಗ್ ಆಪರೇಟ್ ಮಾಡುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ರಾಮದುರ್ಗ ಡಿವೈಎಸ್‌ಪಿ ಎಸ್.ಎ.ಪಾಟೀಲ್ ನೇತೃತ್ವದಲ್ಲಿ ನಡೆದಿದ್ದ ದಾಳಿ ನಡೆದಿದ್ದು ಹಿಂಡಲಗಾ …

Read More »

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 8 ಜನ ಸೊಂಕಿತರ ಪತ್ತೆ

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕರ್ಮಕಾಂಡ ಮುಂದುವರೆದಿದೆ,ಜಿಲ್ಲೆಯ ಜನ ಸಂಡೇ ಮೂಡ್ ನಲ್ಲಿ ಇರುವಾಗಲೇ ಈ ಮಹಾಮಾರಿ ಹೊಡೀ ಒಂಬತ್ತ್ ಎಂದಿದೆ,ಯಾಕಂದ್ರೆ ಇವತ್ತು ಒಂದೇ ದಿನ 8 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಭಾನುವಾರದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದ್ದು,ಈ ಬುಲೀಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 8 ಜನರಿಗೆ ಸೊಂಕು ಇರುವದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲೀಟೀನ್ ಪ್ರಕಾರ 326 ಕ್ಕೇರಿದಂತಾಗಿದೆ. ಇಂದು ಪತ್ತೆಯಾದ 9 …

Read More »

ಮಾರ್ಚ 12 ರಿಂದ ರಾಜ್ಯದಲ್ಲಿ ನರಗುಂದ ಬಂಡಾಯ….

ಮಾರ್ಚ 12ರಂದು ರಾಜ್ಯದ 150 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ,ನರಗುಂದ ಬಂಡಾಯದ ಬಿಸಿ…… ಬೆಳಗಾವಿ- ನರಗುಂದ ಬಂಡಾಯ ಉತ್ತರ ಕರ್ನಾಟಕ ರೈತರ ದೊಡ್ಡ ಬಂಡಾಯ ,ಈ ಬಂಡಾಯದ ಇತಿಹಾಸ ಆಧರಿಸಿ ನರಗುಂದ ಬಂಡಾಯ ಎಂಬ ಕನ್ನಡ ಚಲಚಿತ್ರ ಸಿದ್ಧಗೊಂಡಿದ್ದು ಮಾರ್ಚ 12ರಂದು ರಾಜ್ಯದ 150ಕ್ಕೂ ಹೆಚ್ವು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದ್ದು ಎಲ್ಲರೂ ರಿಲ್ಯಾಕ್ಸ ಆಗಿ ಈ ಚಿತ್ರವನ್ನು ನೋಡಲೇ ಬೇಕು ಯಾಕಂದ್ರೆ ಈ ಚಿತ್ರವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ನಿರ್ಮಾಣ …

Read More »

ಬೆಳಗಾವಿಯಲ್ಲಿ ಪ್ರತಿಭಟನೆಯ ಮೂಲಕ ಮಹಿಳಾ ದಿನಾಚರಣೆ,

ಮಹಿಳೆಗೆ ನ್ಯಾಯ ಕೊಡಿ ಬೆಳಗಾವಿ- ಬೆಳಗಾವಿಯ ಮಹಿಳಾ ಫಡರೇಶನ್ ನವರು ವಿನೂತನವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು ಪ್ರತಿಭಟನೆ ಮೂಲಕ ಮಹಿಳೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿ ಎಲ್ಲರ ಗಮನ ಸೆಳೆದರು ಮಹಿಳಾ ಮೀಸಲಾತಿ ಜಾರಿಗೆ ತರಬೇಕು ,ಅಡುಗೆ ಅನೀಲ ದರವನ್ನು ಕಡಿಮೆ ಮಾಡಬೇಕು,ಅತ್ಯಾಚಾರಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ರೂಪಿಸಬೇಕು,ಮಹಿಳಾ ಸಬಲೀಕರಣಕ್ಕಾಗಿ ಹೊಸ,ಹೊಸ,ಯೋಜನೆಗಳನ್ನು ಜಾರಿಗೆ ತರಬೇಕು ಮಹಳೆಯರನ್ನು ಸಾಮಾಜಿಕ ವಾಗಿ,ರಾಜಕೀಯವಾಗಿ,ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ …

Read More »

ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ

ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ ಹಿರೇಬಾಗೇವಾಡಿ ಪೋಲೀಸರು ಹನ್ನೆರಡು ಬೈಕ್ ಕಳ್ಳತನ ಮಾಡಿದ ತಿಗಡಿ ಗ್ರಾಮದ ಆಜಾದ ಮೆಹಬೂಬ ಸುಬಾನಿ ಕಿಲ್ಲೇದಾರ ಎಂಬ ಆರೋಪಿಯನ್ನು ಬಂಧಿಸಿ ಹನ್ನೆರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ .

Read More »

ಮರಾಠಿ ಸಾಹಿತ್ಯ ಸಮ್ಮೇಳನದ ಆಯೋಜಕರಿಗೆ ನೋಟೀಸ್ ..

. ಬೆಳಗಾವಿ ಸಮೀಪದ ಕುದ್ರೇಮನಿ ಗ್ರಾಮದಲ್ಲಿ ಇತ್ತೀಚಿಗೆ ಮರಾಠಿ ಸಾಹಿತ್ಯ ಸಮ್ಮೇಳನ ನಡೆದಿತ್ತು .ಈ ಸಮ್ಮೇಳನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆಯೋಜಕರಿಗೆ ನಗರ ಪೋಲೀಸ್ ಉಪ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ . 50 ಸಾವಿರ ರೂ ಮುಚ್ಚಳಿಕೆ ಬರೆದು ಇಬ್ಬರಿಂದ ಜಾಮೀನು ಪಡೆಯುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.

Read More »

ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಗೆ ಕೆಂಬ್ರಿಡ್ಜ್ ವಿವಿಯಿಂದ ಅನುಮೋದನೆ

ಬೆಳಗಾವಿ- ನಗರದ ಜೈನ್ ಹೆರಿಟೇಜ್ ಶಾಲೆಗೆ ಯುಕೆನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯ ಅನುಮೋದನೆ ನೀಡಿದೆ 2021-22ರಲ್ಲಿ 1ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಪಡೆದ ನಗರದ ಪ್ರಥಮ ಶಾಲೆ ಇದಾಗಿದೆ. ಕೆಂಬ್ರಿಡ್ಜ್ ಅಂತಾರಾಷ್ಟ್ರೀಯ ಶಿಕ್ಷಣ ಮೌಲ್ಯಮಾಪನದ ಮಾರ್ಗಸೂಚಿಗಳ ಪ್ರಕಾರ ನಡೆಯಲಿದೆ. ಚೆಕ್ ಪಾಯಿಂಟ್ ಪರೀಕೆಗಳಿಗೆ ವಿದ್ಯಾರ್ಥಿಗಳು ಬೇರೆ ನಗರಕ್ಕೆ ಹೋಗಬೇಕಾಗಿಲ್ಲ ಎಂದು ಧಾರವಾಡಕರ ಹೇಳಿದರು. ಈ ಶಾಲೆಯಲ್ಲಿ ಮೊದಲಿನಂತೆ ಸಿಬಿಎಸ್‌ಇ ವಿಭಾಗಗಳು ಮುಂದುವರೆಯಲಿವೆ. ಜತೆಗೆ ಕೆಂಬ್ರಿಡ್ ತರಗತಿಗಳು ಹೊಸ ಕ್ಯಾಂಪಸ್ ನಲ್ಲಿ …

Read More »

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್….

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್…. ಬೆಳಗಾವಿ – ಹಿರೇಬಾಗೇವಾಡಿ ಪೋಲೀಸರು ಬೈಕ್ ಕಳ್ಳನನ್ನು ಬಂಧಿಸಿ ಐದು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. ತಿಗಡಿ ಗ್ರಾಮದ ಆಜಾದ ಕಿಲ್ಲೇದಾರ ಎಂಬಾತನನ್ನು ಬಂಧಿಸಿರುವ ಪೋಲೀಸರು ಐದು ಬೈಕ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Read More »