ಇಲೆಕ್ಟ್ರೀಕ್ ಬಸ್ ಓಡಿಸಿ ಶಾಕ್ ಕೊಟ್ಟ ಬೆಳಗಾವಿಯ ಮಿನಿಸ್ಟರ್…….!

ಬೆಳಗಾವಿ-ಅವರು ಹುದ್ದೆಯಲ್ಲಿ ಡಿಸಿಎಂ ,ಅದನ್ನೆಲ್ಲಾ ಮರೆತು,ಇಂದು ಇಲೆಕ್ಟ್ರೀಕ್ ಬಸ್ ಏರಿ,ಚಾಲಕನನ್ನು ಇಳಿಸಿ,ಬಿಎಂಟಿಸಿ ಬಸ್ ನಿಲ್ಧಾಣದಿಂದ ವಿಧಾನಸೌಧದ ವರೆಗೆ ಬಸ್ ಓಡಿಸಿ ಎಲ್ಲರಿಗೆ ಶಾಕ್ ಕೊಟ್ಟವರು ಬೆಳಗಾವಿಯ ಲಕ್ಷ್ಮಣ ಸವದಿ.

ಹೌದು ಇಂದು ಬೆಂಗಳೂರಿನಲ್ಲಿ ಬಸ್ ಚಲಾಯಿಸಿ ಬೆಂಗಳೂರಿನ ಟ್ರಾಫಿಕ್ ಪಾರು ಮಾಡಿ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಾ ಡಿಸಿಎಂ ಲಕ್ಷ್ಮಣ ಸವದಿ ಇಂದು ಸಾಭೀತು ಪಡಿಸಿದರು.

ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ ನಡೆಸಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಕ್ಷಮತೆಯನ್ನು ಪರಿಶೀಲಿದ್ರು ಲಕ್ಷ್ಮಣ ಸವದಿ.

ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ವೀಕ್ಷಿಸಿ ನೂತನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಬಿಎಂಟಿಸಿ ಅಧ್ಯಕ್ಷರಾದ ಶ್ರೀ ನಂದೀಶ್ ರೆಡ್ಡಿ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಯೋಗಿ ಕಳಸದ್, ಬಿಎಂಟಿಸಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *