Breaking News

ಎಲ್ಲರ ಮೂಗಿಗೆ ತುಪ್ಪ ಹಚ್ಚಿ ಎಲ್ಲರನ್ನೂ ಹುಚ್ವು ಮಾಡುವ ಬಜೆಟ್

ಬೆಳಗಾವಿ- ದೇಶದ ಬೆನ್ನಲಬು ರೈತ ಅನ್ನದಾತನ ಸಾಲ ಮನ್ನಾ ಮಾಡಬಹುದು ಮಹಿಳೆಯರ ಶಿಕ್ಷಣಕ್ಕಾಗಿ ಪಡೆದ ಸಾಲ ಮನ್ನಾ ಆಗಬಹುದು ಎಂದು ನೀರೀಕ್ಷೆ ಇಟ್ಟುಕೊಂಡಿದ್ದ ದೇಶದ ಅನ್ನದಾತನಿಗೆ ಹೆಣ್ಣು ಹಡೆದು ಹೆಣ್ಣಿಗೆ ಶಿಕ್ಷಣ ಕೊಡಿಸಲು ಸಾಲ ಪಡೆದ ಪಾಲಕರಿಗೆ ಕೇಂದ್ರದ ಬಿಜೆಪಿ ಸರ್ಕಾರದ ಬಜೆಟ್ ಶಾಕ್ ನೀಡಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ನಾಳಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಕೇಂದ್ರದ ಬಿಜೆಪಿ ಸರ್ಕಾರ ದೇಶದ ಅನ್ನದಾತನ ಅಕೌಂಟ್ ಗೆ ಆರು ಸಾವಿರ ಜಮಾ ಮಾಡುವ ನಿರ್ಧಾರ ಕೈಗೊಂಡು ರೈತರ ಸಾಲವನ್ನು ಮನ್ನಾ ಮಾಡದೇ ರೈತರ ವಿಶ್ವಾಸ ಕಳೆದುಕೊಂಡಿದೆ
.ಯಾರಿಗೂ ಸಹಾಯ ಮಾಡದೇ ಯಾರಿಗೂ ನೆರವು ನೀಡದೇ ಎಲ್ಲರ ಮೂಗಿಗೆ ತುಪ್ಪ ಹಚ್ಚಿ ಎಲ್ಲರನ್ನೂ ಹುಚ್ವು ಮಾಡುವ ಬಜೆಟ್ ಇದಾಗಿದೆ

ಬೇಟಿ ಪಡಾವ್ ಬೇಟಿ ಬಚಾವ್ ಎಂದು ಶ್ಲೋಘನ್ ಬಿತ್ತರಿಸಿ ಹೆಣ್ಣು ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲ ಮನ್ನಾ ಮಾಡದೇ ಸಾಲದ ಬಡ್ಡಿಯನ್ನೂ ಮನ್ನಾ ಮಾಡದ ಸರ್ಕಾರ ಮೊತ್ತೊಮ್ಮೆ ಸುಳ್ಞಿನ ಸರ್ಕಾರ ಎಂದು ಸಾಭೀತು ಮಾಡಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಮೋದಿ ಸರ್ಕಾರದ ಬಜೆಟ್ ಟೀಕಿಸಿದ್ದಾರೆ

ಬಂಡವಾಳ ಶಾಹಿಗಳ ಪರವಾಗಿರುವ ಕೇಂದ್ರದ ಮೋದಿ ಸರ್ಕಾರ ಉಳ್ಳವರ ಪರವಾಗಿರುವ ಬಂಡವಾಳ ಶಾಹಿಗಳಿಗೆ ತೃಪ್ತಿಪಡಿಸು ಬಜೆಟ್ ಮಂಡಿಸಿದ್ದಾರೆ ಎಂದು ಹೆಬ್ಬಾಳಕರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ

Check Also

ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ

ಬೆಳಗಾವಿ- ಪ್ರತಿವರ್ಷ ಕಬ್ಬು ಕಟಾವ್ ಮಾಡುವ ಹಂಗಾಮು ಶುರುವಾದ್ರೆ ಸಾಕು ಪಕ್ಕದ ಮಹಾರಾಷ್ಟ್ರ ದಿಂದ ಬೆಳಗಾವಿ ಜಿಲ್ಲೆಗೆ ಸಾವಿರಾರು ಕುಟುಂಬಗಳು …

Leave a Reply

Your email address will not be published. Required fields are marked *