ಕತ್ತಲಲ್ಲಿ..ಮರಾಠಿ ಮೇಳಾವ್ ಗೆ ಕದ್ದು ಮುಚ್ವಿ ತಯಾರಿ…

ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಎಂಈಎಸ್ ನಡೆಸುತ್ತಿರುವ ಮರಾಠಿ ಮಹಾ ಮೇಳಾವ್ ಗೆ ಕತ್ತಲಾಗುತ್ತಿದ್ದಂತೆಯೇ ವೇದಿಕೆ ಸಜ್ಜಾಗುತ್ತಿದೆ

ಖಾನಾಪೂರ ಕ್ಷೇತ್ರದ ಎಂಈಎಸ್ ಶಾಸಕ ಅರವಿಂದ ಪಾಟೀಲ ಎಂಈಎಸ್ ಕಾರ್ಯಕರ್ತ ರನ್ನು ಕರೆದುಕೊಂಡು ಬೆಳಗಾವಿಯ ವ್ಯಾಕ್ಸೀನ್ ಡಿಪೋ ಮೈದಾನದಲ್ಲಿ ಮೇಳಾವ್ ನಡೆಸಲು ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ
ನಾಳೆ ನಡೆಯುವ ಮೇಳಾವ್ ಗೆ ಮಹಾರಾಷ್ಟ್ರದಿಂದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ಧನಂಜಯ ಮುಂಡೆ ಬೆಳಗಾವಿಗೆ ಬರುತ್ತಿದ್ದು ಬೆಳಗಾವಿ ಪೋಲೀಸರು ಇಂದು ಮದ್ಯರಾತ್ರಿ ಅನುಮತಿ ಕೊಡುವ ಸಾಧ್ಯತೆ ಇದೆ
ಕಾಲು ಕೆದರಿ ಜಗಳ ತೆಗೆಯುವ ನಾಡವಿರೋಧಿ ಎಂಈಎಸ್ ಅನುಮತಿ ಪಡೆಯದೇ ವ್ಯಾಕ್ಸೀನ್ ಡಿಪೋ ಮೈದಾನದಲ್ಲಿ ಗಪ್ ಚುಪ್ ತಯಾರಿ ಮಾಡಿಕೊಳ್ಳುತ್ತಿದೆ
ಸಾಮಾಜಿಕ ಜಾಲತಾಣದ ಮೂಲಕ ಎಂಈಎಸ್ ನಾಯಕರು ಮೇಳಾವ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವಂತೆ ಪ್ರಚಾರ ನಡೆಸಿದ್ದಾರೆ
ಕತ್ತಲಾಗುತ್ತಿದ್ದಂತೆ ಕಟೌಟ್ ಬ್ಯಾನರ್ ಗಳನ್ನು ಹೊರಗೆ ತೆಗೆದಿರುವ ಈ ಎಂಈಎಸ್ ಗುಂಡಾಗಳು ಮೇಳಾವ್ ನಡೆಸಿ ಮುಗ್ಧ ಮರಾಠಿಗರನ್ನು ಪ್ರಚೋದಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದು ರಾಜ್ಯ ಸರ್ಕಾರ ಕಣ್ಣಿದ್ದೂ ಕುರುಡಾಗಿದೆ

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *