Breaking News

ಬೈಲವಾಡದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಎಲ್ಲರ ಗಮನ ಸೆಳೆದ ಮಂತ್ರಿ…..

ಬೈಲಹೊಂಗಲ-ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಯಾನಗರದಲ್ಲಿ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಿರುವ

ರೈತ ಪಕೀರಪ್ಪ ಅರೋಳಿ ಅವರ
ಜಮೀನಿಗೆ ಭೇಟಿ‌ ನೀಡಿ ಪರಿಶೀಲಿಸಿದರು.
ಆಡು ಸಾಕಾಸಿಕೆ,ಮೇವು ಬೆಳೆ ತಾಕು,ಕೃಷಿ ಹೊಂಡ ,ಎರೆಹುಳು ಗೊಬ್ಬರ ತೊಟ್ಟಿ, ರೇಷ್ಮೆ ಬೆಳೆ ತಾಕುಗಳಿ ಸಚಿವರು ಭೇಟಿ ನೀಡಿದರು.

ಬೈಲಹೊಂಗಲ ಪಕ್ಕದ ಬೈಲವಾಡ ಗ್ರಾಮದಲ್ಲಿ‌ ಟ್ರ್ಯಾಕ್ಟರ್ ಚಲಾಯಿಸಿ ಕೃಷಿ ಸಚಿವರು ಎಲ್ಲರ ಗಮನ ಸೆಳೆದರು.ಶಾಸಕರಾದ ಮಹಾಂತೇಶ್ ಕೌಜಲಗಿ, ಕಿತ್ತೂರು ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್,ನಿರ್ದೇಶಕರಾದ ಡಾ ಜಿ‌.ಟಿ. ಪುತ್ರ ಹಾಜರಿದ್ದರು

ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ ಯೋಗಕ್ಷೇಮ ವಿಚಾರಿಸಿದ ಕೃಷಿ ಮಂತ್ರಿ

ಕೃಷಿ ಸಚಿವರಾದ ಎನ್ . ಚಲುವರಾಯಸ್ವಾಮಿ ಅವರು ಇಂದು ಬೈಲಹೊಂಗಲದಲ್ಲಿ ಮಾಜಿ ಸಚಿವರಾದ ಶಿವಾನಂದ ಕೌಜಲಗಿ ಅವರನ್ನು ಭೇಟಿ‌ಮಾಡಿ ಆಶೀರ್ವಾದ ಪಡೆದು ,ಯೋಗ ಕ್ಷೇಮ ವಿಚಾರಿಸಿದರು.
ಇದೇ ವೇಳೆ ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಅಂದು ಸಚಿವರಾದಗಿದ್ದ ಶಿವಾನಂದ ಕೌಜಲಗಿ ಅವರು ನೀಡಿದ‌ ಸಹಕಾರ ,ಪ್ರೋತ್ಸಾಹ, ಮಾರ್ಗದರ್ಶನವನ್ನು ಕೃಷಿ ಸಚಿವರು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.
ಇದೇ ವೇಳೆ ಹಾಲಿ ಶಾಸಕರು ಹಾಗೂ ಶಿವಾನಂದ ಕೌಜಲಗಿ ಅವರ ಪುತ್ರ ಮಹಾಂತೇಶ್ ಕೌಜಲಗಿ ಅವರು ಸಹ ಉಪಸ್ಥಿತರಿದ್ದರು

Check Also

ಪಿಜಿ-ನೀಟ್ ದೇಶಕ್ಕೆ 9ನೇ RANK ಗಳಿಸಿದ ಬೆಳಗಾವಿಯ ಡಾ.ಶರಣಪ್ಪ

  ಬೆಳಗಾವಿ ಬಿಮ್ಸ್ ಮುಕುಟಕ್ಕೆ ಮತ್ತೊಂದು ಗರಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್)ಯ ವೈದ್ಯಕೀಯ ವಿದ್ಯಾರ್ಥಿ ರಾಷ್ಟ್ತಮಟ್ಟದ ಪಿ.ಜಿ. ನೀಟ್ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.