Breaking News

ಅಭಯ ಪಾಟೀಲರಿಗೆ ಸಿಎಂ ಅವರಿಂದ ಬೆಂಗಳೂರು ಬುಲಾವ್….!!!

ಅಭಯ ಪಾಟೀಲರಿಗೆ ಸಿಎಂ ಅವರಿಂದ ಬೆಂಗಳೂರು ಬುಲಾವ್….!!!

ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ನಡೆಯುತ್ತದೆ ಎಂದು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲಿಯೇ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಮುಖ್ಯಮಂತ್ರಿಗಳಿಂದ ಬುಲಾವ್ ಬಂದಿದೆ.

ಶಾಸಕ ಅಭಯ ಪಾಟೀಲರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಸಂಜೆ ಫೋನ್ ಮಾಡಿ ತಕ್ಷಣ ಬೆಂಗಳೂರಿಗೆ ಹೊರಡುವಂತೆ ಸೂಚಿಸಿದ ಹೆನ್ನಲೆಯಲ್ಲಿ ಅಭಯ ಪಾಟೀಲ ನಿನ್ನೆ ರಾತ್ರಿಯೇ ಬೆಂಗಳೂರಿಗೆ ದೌಡಾಯಿಸಿದ್ದಾರೆ.

ಶಾಸಕ ಅಭಯ ಪಾಟೀಲ ಅವರು ಈ ಬಾರಿ ಮಂತ್ರಿ ಆಗುತ್ತಾರೆ ಎನ್ನುವ ಸುದ್ದಿ ಜಿಲ್ಲೆಯಾದ್ಯಂತ ಸಾಕಷ್ಟು ಪ್ರಚಾರ ಪಡೆದಿದೆ, ಅಭಯ ಪಾಟೀಲ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು,ಭಿನ್ನ,ವಿಭಿನ್ನ ಅರ್ಥಪೂರ್ಣವಾದ ಸಾಮಾಜಿಕ ಕಾರ್ಯಕ್ರಮಗಳ ಮೂಲಕ. ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದ್ದು ಕಳೆದ ಹದಿನಾರು ವರ್ಷಗಳಿಂದ ಪ್ರತಿ ಭಾನುವಾರ ಅಭಯ ಪಾಟೀಲರು ನಡೆಸುತ್ತ ಬಂದಿರುವ ಸ್ವಚ್ಛತಾ ಅಭಿಯಾನ ಬಿಜೆಪಿ ವರಿಷ್ಠರ ಮೆಚ್ವುಗೆಗೆ ಪಾತ್ರವಾಗಿದ್ದು,ಅಭಯ ಪಾಟೀಲ ಈ ಬಾರಿ ಮಂತ್ರಿ ಆಗೋಗು ಖಚಿತ ಎಂದು ಅವರ ಅಭಿಮಾನಿಗಳು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *