ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ ಶಾಸಕ ಅರವಿಂದ ಪಾಟೀಲ

ಬೆಳಗಾವಿ: ಎಂಇಎಸ್ ಪ್ರತಿಭಟನಾ ರ್ಯಾಲಿ ಆರಂಭವಾಗಿದ್ದು ರ್ಯಾಲಿಯಲ್ಲಿ ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ್ ಹಾಗೂ ಅರವಿಂದ್ ಪಾಟೀಲ್ ಭಾಗಿಯಾಗಿದ್ದಾರೆ

. ರ್ಯಾಲಿಗೂ ಮುನ್ನ ನಗರದ ಸಂಭಾಜಿ ವೃತ್ತದಲ್ಲಿನ ಸಂಭಾಜಿ ಪುಥ್ಥಳಿಗೆ ಮಾಲೆ ಹಾಕಿದ ಶಾಸಕ ಅರವಿಂದ್ ಪಾಟೀಲ್, ಕೊನೆಗೆ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಉದ್ದಟತನ. ಪ್ರದರ್ಶನ ಮಾಡಿದ್ದಾರೆ

ನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಸಮಾಬೇಶದಲ್ಲಿ ಮಾಜಿ ಶಾಸಕ ಮನೋಹರ ಕಿಣೇಕರ ಮೂರು ಬಾರಿ ಜೈ ಮಹಾರಾಷ್ಟ್ರ ಎಂದು ಮೂರು ಬಾರಿ ಘೋಷಣೆ ಕೂಗುವದರ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ್ದಾರೆ

ಶಾಸಕ ಸಂಬಾಜಿ ಪಾಟೀಲ ಮಾತನಾಡಿ ಗಡಿ ವಿವಾದ ನ್ಯಾಯಾಲಯದಲ್ಲಿದೆ ಇಲ್ಲಿ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ ಜೈ ಮಹಾರಾಷ್ಟ್ರ ಎಂದು ಕೂಗಲು ನನಗೆ ಭಯವಿಲ್ಲ ಎಂದು ಮೂರು ಬಾರಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಪುಂಡಾಟಿಕೆ ಪ್ರದರ್ಶನ ಮಾಡಿದರು

ಜಿಲ್ಲಾಧಿಕಾರಿ ಎನ್ ಜಯರಾಮ ಮನವಿ ಸ್ವೀಕರಿಸಲು ಆಗಮಿಸುತ್ತಿದ್ದಂತೆಯೇ ಎಂಈಎಸ್ ಪುಂಡರು ಸಾಮೂಹಿಕವಾಗಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಪುಂಡಾಟಿಕೆ ಪ್ರದರ್ಶನ ಮಾಡಿದ್ದಾರೆ

 

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *