Breaking News

ಗಡಿಯಿಂದ ವಾಪಸ್ ಮರಳಿದ ಮಹಾ ಸಚಿವರು.

ಬೆಳಗಾವಿ-ಬೆಳಗಾವಿಯಲ್ಲಿ ನಡೆಯುತ್ತಿರುವ ಎಂ.ಈ.ಎಸ್. ರ್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರು ಬೆಳಗಾವಿ ಗಡಿ ಕುಗನೋಳ್ಳಿ ಗ್ರಾಮದಿಂದ ವಾಪಸ್ ಮಹಾರಾಷ್ಟ್ರಕ್ಕೆ ಮರಳಿದ್ದಾರೆ

ಬೆಳಗಾವಿ ಗಡಿ ತಲುಪುತ್ತಿದ್ದಂತೆಯೇ ಪೋಲೀಸರು ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಹೇಳುತ್ತಿದ್ದಂತೆಯೇ ಸಚಿವರು ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಮರಳಿದ್ದಾರೆ ಕುಗನೊಳ್ಳಿ ಚೆಕ್ ಪೊಸ್ಟ್ ನಿಂದ  ಸಚಿವ ದೀವಾಕರ ರಾವತ್ ವಾಪಸ್ ಮರಳಿದ್ದಾರೆ

ಇಂದಿನಿಂದ 3 ದಿನಗಳ ವರೆಗೆ ಮಹಾರಾಷ್ಟ್ರದ ಸಚೀವ ದಿವಾಕರ ರಾವತ್ ಮತ್ತು ದೀಪಕ್ ಸಾಂವತಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧಿಸಿದ ಬೆಳಗಾವಿ ಜಿಲ್ಲಾಡಳಿತ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾದ ಸಚಿವ ರಾವತ್

ನಿರ್ಬಂಧ ಆದೇಶ ತೊರಿಸುತ್ತಿದ್ದಂತೆ ಮರಳಿ ಕೊಲ್ಲಾಪುರಕ್ಕೆ ತೆರಳಿದ ಸಚಿವ ಮತ್ತು ಹಿಂಬಾಲಕರು
ದಿವಾಕರ ರಾವತ್, ದೀಪಕ್ ಸಾವಂತ ಮಹಾರಾಷ್ಟ್ರದ ಸಚಿವರು, ಶಿವಸೇನೆಯ ಪಕ್ಷದವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಕುಗನೊಳ್ಳಿ ಚೆಕ್ ಪೊಸ್ಟ್ ನಲ್ಲಿ ಈ ಘಟನೆ ನಡೆದಿದೆ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.