Breaking News

ಬೆಳಿಗ್ಗೆ ಆಜಾನ್ ವಿರುದ್ದ ಬೆಳಗಾವಿಯ ಹತ್ತು ಮಂದಿರಗಳಲ್ಲಿ ಸುಪ್ರಭಾತ

ಬೆಳಗಾವಿ-ಮಸೀದಿಗಳಲ್ಲಿ ದಿನದ ಐದು ಬಾರಿ ಹೇಳುವ ಆಜಾನ್ ವಿರುದ್ಧ ಸಮರ ಸಾರಿರುವ ಹಿಂದೂಪರ ಸಂಘಟನೆಗಳು,ಸೋಮವಾರ ಬೆಳಗಿನ ಜಾವ ಐದು ಘಂಟೆಗೆ ಆಜಾನ್ ಗೆ ಪ್ರತಿಯಾಗಿ ಮಂದಿರಗಳಲ್ಲಿ ಸುಪ್ರಭಾತ,ಶಿವ ಭಜನೆ,ಹನುಮಾನ ಚಾಲೀಸ್ ಬಿತ್ತರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇದಕ್ಕಾಗಿ ಬೆಳಗಾವಿಯ ಮಸೀದಿ ಸಮೀಪದಲ್ಲಿರುವ ಹತ್ತು ಮಂದಿರಗಳನ್ನು ಆಯ್ಕೆ ಮಾಡಿಕೊಂಡಿರುವ ಹಿಂದೂಪರ ಘಟನೆಗಳು ಸೋಮವಾರ ಬೆಳಗಿನ ಜಾವ ಐದು ಘಂಟೆಗೆ ಬೆಳಗಾವಿಯ ಮಂದಿರಗಳಲ್ಲಿ ಸುಪ್ರಭಾತ,ಭಜನೆ,ಮತ್ತು ಹಿಂದೂ ಧಾರ್ಮಿಕ ಸಂಗೀತ ಮೊಳಗಲಿದೆ.

ಬೆಳಗಾವಿ,ಬೆಂಗಳೂರು,ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾತ್ರ ಆಜಾನ್ ವಿರುದ್ಧ ಮಂದಿರಗಳಲ್ಲಿ ಸುಪ್ರಭಾತ ಕೇಳಿಸಲಿದೆ.

ಸರ್ಕಾರ ಮಸೀದಿಗಳಲ್ಲಿ ಅಳವಡಿಸಲಾಗಿರುವ ಮೈಕ್ ಗಳನ್ನು ಜಪ್ತು ಮಾಡುವವರೆಗೂ ಈ ಹೋರಾಟ ಮುಂದುವರೆಯಲಿದೆ ಎಂದು ಹಿಂದೂ ಪರ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *