ಅವನ ಹೆಂಡ್ತಿಯನ್ನು ಒಲಿಸಲು ಸುಪಾರಿ ಕೊಟ್ಟು ಗಂಡನನ್ನೇ ಖಲ್ಲಾಸ್ ಮಾಡಿಸಿದ ಭೂಪ…!

ಬೆಳಗಾವಿ- ಅವನ ಹೆಂಡತಿಯನ್ನು ಒಲಿಸಿಕೊಳ್ಳಲು ಸುಪಾರಿ ಕೊಟ್ಟು ಅವಳ ಗಂಡನನ್ನೇ ಮುಗಿಸಿದ ಕೊಲೆ ಪ್ರಕರಣವನ್ನು ಬೆಳಗಾವಿ ಜಿಲ್ಲೆಯ ಮುರುಗೋಡ ಠಾಣೆಯ ಪೋಲೀಸರು ಭೇಧಿಸಿದ್ದಾರೆ.

ಪರಸ್ತ್ರೀಯನ್ನು ಒಲಿಸಿಕೊಳ್ಳಲು ಆಕೆಯ ಗಂಡನಿಗೆ ಚಟ್ಟ ಕಟ್ಟಿದ ಕಿರಾತಕನ ಕರಾಳ ಕಹಾನಿ ಈಗ ಸಿಸಿ ಟಿವಿ ಕ್ಯಾಮರಾದಲ್ಲಿ ರಿಕಾರ್ಡ್ ಆಗಿದೆ.ಪಾರ್ಟಿ ಮಾಡೋಣ ಬಾ ಎಂದು ಕರೆದು ನಶೆಯಲ್ಲಿದ್ದಾಗಲೇ
ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು
ಕಾಡಪ್ಪ ಶಿಗರಸಂಗಿ(42) ಕೊಲೆಯಾದ ದುರ್ದೈವಿಯಾಗಿದ್ದಾನೆ.

ನಾಗಪ್ಪ ರೈನಾಪುರ ಎಂಬ ಭೂಪ ಕಾಡಪ್ಪನನ್ನು ಕೊಲ್ಲಲ್ಲು ಸುಪಾರಿ ಕೊಟ್ಟಿದ್ದ
ಕೊಲೆಯಾದ ಕಾಡಪ್ಪನ ಪತ್ನಿಯ ಮೇಲೆ ನಾಗಪ್ಪ ವ್ಯಾಮೋಹ ಇಟ್ಟುಕೊಂಡಿದ್ದ ,ಕಾಡಪ್ಪನ ಕೊಲ್ಲಲು 2.5 ಲಕ್ಷ ರೂ ಸುಪಾರಿ ಕೊಟ್ಟಿದ್ದ
ಕೊಲೆ ಮಾಡಲು ವ್ಯವಸ್ಥಿತ ಪ್ರೀ ಪ್ಲಾನ್ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ನಾಗಪ್ಪ ಫ್ರೀ ಪ್ಲಾನ್ ಮಾಡಿಕೊಂಡು ಓಡಾಡಿದ್ದ ಕಾಡಪ್ಪನನ್ನು ಮುಗಿಸಲು ನಾಗಪ್ಪ ಯಾರಿಗೆ ಭೇಟಿಯಾಗಿದ್ದ,ಎಲ್ಲಿ ಭೇಟಿಯಾಗಿದ್ದ, ನಾಗಪ್ಪ ಸ್ಕೇಚ್ ಹಾಕಿದ್ದದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆಬೆನಕಟ್ಟಿಯ ಪೆಟ್ರೋಲ್ ಪಂಪ್ ಒಂದರಲ್ಲಿ ನಾಗಪ್ಪನ ಚಲನವಲನ ಸೆರೆಯಾಗಿದೆ

ನಾಗಪ್ಪನಿಂದ ಸುಫಾರಿ ಪಡೆದ ಆರೋಪಿ ಲಕ್ಷ್ಮಣ ಜೊತೆ ಕಡೆಯದಾಗಿ ಕಾಣಿಸಿಕೊಂಡಿದ್ದ ನಾಗಪ್ಪನ. ಸ್ಕೆಚ್ ಸಿಸಿ ಟಿವಿಯಲ್ಲಿ ಬಯಲಾಗಿದೆ.ಮೊದಲು ಲಕ್ಷ್ಮಣ ಬಂಧಿಸಿ ವಿಚಾರಣೆ ನಡೆಸಿದ್ದ ಪೊಲೀಸರು ಕೊಲೆಯ ಕಹಾನಿಯನ್ನು ಪತ್ತೆ ಮಾಡಿದ್ದಾರೆ.
ಲಕ್ಷ್ಮಣ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಸಂಚು ಬಯಲಾಗಿದೆ.
ಸದ್ಯ ಐವರು ಆರೋಪಿಗಳ ಪೈಕಿ ಲಕ್ಷ್ಮಣ ವಿಠ್ಠಲ್ ಎಂಬ ಆರೋಪಿಗಳ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸ್ಥಳಕ್ಕೆ ಎಸ್‌ಪಿ ಭೀಮಾಶಂಕರ್ ಗುಳೇದ್ ಭೇಟಿ ಪರಿಶೀಲನೆ ಮಾಡಿದ್ದಾರೆ.ತಲೆ ಮರೆಸಿಕೊಂಡಿರುವ ನಾಗಪ್ಪ, ಶಿವಾನಂದ ಬಸವರಾಜ್ ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿಯ ಪೋಟೋದಲ್ಲಿ  ಇರುವುದು ಕೊಲೆಯಾದ ಕಾಡಪ್ಪ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *