ಬೆಳಗಾವಿ : ಯುವಕನ ಮರ್ಡರ್ ಇನ್ನೋರ್ವನ ಸ್ಥಿತಿ ಚಿಂತಾಜನಕ..

ಬೆಳಗಾವಿ-ಬೆಳಗಾವಿ ಪಕ್ಕದ ಸಿಂದೊಳ್ಳಿ ಗ್ರಾಮದಲ್ಲಿ ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು ಇಪ್ಪತ್ತು ನಾಲ್ಕು ವರ್ಷದ ಯುವಕನೊಬ್ಬನ ಹತ್ಯೆಯಾಗಿದ್ದು ಇನ್ನೋರ್ವ ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಬಸವರಾಜ್ ಬೆಳಗಾಂವಕರ 24 ಎಂಬ ಯುವಕನ ಕೊಲೆಯಾಗಿದ್ದು ಗಿರೀಶ್ ಎಂಬ ಯುವಕನ ಸ್ಣತಿ ಚಿಂತಾಜನಕವಾಗಿದೆ.ಹಲ್ಲೆಯಾದ ತಕ್ಷಣ ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಬಸವರಾಜ್ ಬೆಳಗಾಂವಕರ ಎಂಬಾತ ಮೃತಪಟ್ಟಿದ್ದು ಗಿರೀಶ್ ಎಂಬಾತನ ಸ್ಣಿತಿ ಚಿಂತಾಜನಕವಾಗಿದೆ.

ಕೊಲೆಗೆ ವಾಹನದ ವ್ಯವಹಾರ, ವ್ಯಯಕ್ತಿಕ ದ್ವೇಷವೇ ಕಾರಣ ಎನ್ನಲಾಗುತ್ತಿದೆ. ಸಿಂದೊಳ್ಳಿ ಗ್ರಾಮದಲ್ಲಿ ಕ್ರಿಕೆಟ್ ಟೂರ್ನಾಮೆಂಟ್ ನಡೆಯುತ್ತಿದೆ.ಇಂದಿನ ಪಂದ್ಯಾವಳಿ ಮುಗಿದು ಜನ ಮನೆಗೆ ಮರಳುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.ಸ್ಥಳಕ್ಕೆ ದೌಡಾಯಿಸಿರುವ ಮಾರಿಹಾಳ ಪೋಲೀಸ್ರು ತನಿಖೆ ಶುರು ಮಾಡಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಬಿಗಿ ಪೋಲೀಸ್ ಸರ್ಪಗಾವಲಿದ್ದು ಸಿಧೊಳ್ಳಿಯಲ್ಲೂ ಪೋಲೀಸ್ ಬಂದೋವಸ್ರಿ ಮಾಡಲಾಗಿದೆ.ಹಿರಿಯ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *